Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿಶ್ವ ಗುಬ್ಬಚ್ಚಿ ದಿನ ವಿಶೇಷ : ಎತ್ತ ಹೋದವು ಗುಬ್ಬಚ್ಚಿ !



ಭೂಮಿಯ ಮೇಲಿನ ಅತ್ಯಂತ ಸರ್ವತ್ರ ಪಕ್ಷಿಗಳಲ್ಲಿ ಒಂದು ಗುಬ್ಬಚ್ಚಿ, ಮುಖ್ಯವಾಗಿ ಸಾಮಾನ್ಯ ಮನೆ ಗುಬ್ಬಚ್ಚಿ. ಇದು ಮಾನವರ ಅತ್ಯಂತ ಹಳೆಯ ಒಡನಾಡಿಗಳಲ್ಲಿ ಒಂದಾಗಿದೆ.

ಕಾಲಾನಂತರದಲ್ಲಿ, ಅವರು ನಮ್ಮೊಂದಿಗೆ ವಿಕಸನಗೊಂಡರು. ಗುಬ್ಬಚ್ಚಿಗಳು ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ಸಾಮಾನ್ಯ ಪಕ್ಷಿಯಾಗಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪಕ್ಷಿಯು ನಗರ ಮತ್ತು ಗ್ರಾಮೀಣ ಆವಾಸಸ್ಥಾನಗಳಲ್ಲಿ ತನ್ನ ನೈಸರ್ಗಿಕ ವ್ಯಾಪ್ತಿಯ ಬಹುಪಾಲು ವಿನಾಶದ ಅಂಚಿನಲ್ಲಿದೆ. ಅವನ್ನು ಅವನತಿ ನಮ್ಮ ಸುತ್ತಲಿನ ಪರಿಸರದ ನಿರಂತರ ಅವನತಿಯ ಸೂಚಕವಾಗಿದೆ.
ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ವ್ಯಕ್ತಿಗಳು, ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಮುದಾಯಗಳು ಅವನ್ನು ಉಳಿಸಲು ಕ್ರಮಗಳೊಂದಿಗೆ ಬರುತ್ತವೆ ಎಂದು ನಾವು ಭಾವಿಸುತ್ತೇವೆ.

ಗುಬ್ಬಿಗಳು ಇಲ್ಲವೇ ಇಲ್ಲ ಎನಿಸುವಷ್ಟರ ಮಟ್ಟಿಗೆ ಕಡಿಮೆಯಾಗಿಲ್ಲ. ಆದರೆ, ಅವುಗಳ ಸಂಖ್ಯೆ ವರ್ಷ ಕಳೆದಂತೆ ಇಳಿಕೆಯಾಗುತ್ತಿರುವುದು ಬಹುತೇಕ ಎಲ್ಲರ ಗಮನಕ್ಕೆ ಬರುತ್ತಿವೆ.

ಸಾಮಾನ್ಯವಾಗಿ ಗುಬ್ಬಚ್ಚಿಗಳು ಮನೆಯ ಹೆಂಚಿನ ಚಾವಣಿಯ ಸಂದುಗೊಂದುಗಳಲ್ಲಿ, ಹುಲ್ಲಿನ ಚಾವಣಿಯಲ್ಲಿ ಗೂಡು ಕಟ್ಟುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಯ ಹುಲ್ಲಿನ ಚಾವಣಿ, ಶೀಟಿನ ಚಾವಣಿಗಳು ಕಾಂಕ್ರೀಟ್‌ನ ಚಾವಣಿಗಳಾಗಿ ಬದಲಾಗುತ್ತಿವೆ. ಬಹು ಅಂತಸ್ತಿನ ಕಟ್ಟಡಗಳು ಹೆಚ್ಚುತ್ತಿವೆ. ಮಳೆಗಾಲ ಕಳೆಯುತ್ತಿದ್ದಂತೆ ಕೊಡಗಿನಾದ್ಯಂತ ನಿರ್ಮಾಣ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಇದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟುವುದಕ್ಕೆ ಬೇಕಾದ ಜಾಗ ಸಿಗುತ್ತಿಲ್ಲ.

ಹಿಂದೆ ಅಂಗಡಿಗಳ ಮುಂದೆ ಧಾನ್ಯಗಳು ಚೆಲ್ಲಾಡುತ್ತಿತ್ತು. ಅವುಗಳನ್ನು ಗುಬ್ಬಚ್ಚಿಗಳು ತಿನ್ನುತ್ತಿದ್ದವು. ಆದರೆ, ಈಗ ಎಲ್ಲ ಧಾನ್ಯಗಳೂ ಪ್ಲಾಸ್ಟಿಕ್‌ ಚೀಲದಲ್ಲಿ ಕವರ್‌ ಆಗಿ ಬರುತ್ತಿವೆ. ಇದರಿಂದಾಗಿ ಗುಬ್ಬಚ್ಚಿಗಳೇ ಆಹಾರ ಸಿಗುತ್ತಿಲ್ಲ.

ಮನೆಗಳಲ್ಲಿ ಸಂದು ಗೊಂದುಗಳು ಕಡಿಮೆಯಾಗಿರುವುದು ಗುಬ್ಬಚ್ಚಿಗಳು ಗೂಡು ಕಟ್ಟುವುದಕ್ಕೆ ತೊಡಕಾಗಿದೆ. ಕಳೆದ 10 ವರ್ಷಗಳಿಂದ ಗುಬ್ಬಿಗಳು ಮಾತ್ರವಲ್ಲ ಒಟ್ಟಾರೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮನುಷ್ಯ ಸೃಷ್ಟಿ ಮಾಡಿರುವ ಎಲ್ಲ ಬಗೆಯ ಮಾಲಿನ್ಯಗಳೂ ಇದಕ್ಕೆ ಕಾರಣ.

ಕನಿಷ್ಠ ಪಕ್ಷ ಗುಬ್ಬಿಗಳಿಗೆ ಗೂಡು ಕಟ್ಟಲು ಪೂರಕವಾದ ಗುಬ್ಬಿಗೂಡುಗಳನ್ನು ಪ್ರತಿ ಮನೆಗಳ ಹೊರಗಡೆ, ಚಾವಣಿಯಲ್ಲಿರಿಸಿದರೆ, ಅವುಗಳ ಆಹಾರಕ್ಕೆ ಧಾನ್ಯಗಳನ್ನಿರಿಸಿದರೆ ನಿಜಕ್ಕೂ ಗುಬ್ಬಚ್ಚಿಗಳ ಉಳಿವಿಗೆ ಸಹಾಯಕವಾಗುತ್ತದೆ.ಈ ರೀತಿಯಾಗಿ, ನಾವು ಜೀವವೈವಿಧ್ಯತೆಯನ್ನು ಉಳಿಸಲು ಸಾಧ್ಯವಾಗುತ್ತದೆ. ನಮ್ಮ ಹಳೆಯ ಒಡನಾಡಿಗಳು ಅಳಿವಿನ ಅಂಚಿನಲ್ಲಿರುವ ಕಾರಣವನ್ನು ಕಂಡುಹಿಡಿಯುವುದು ಅವಶ್ಯಕ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ