Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿಶೇಷ ಚೇತನರ ಬದುಕಿಗೆ ನರೇಗಾ ಊರುಗೋಲು

 

ಬೆಳಗಾವಿ : ವಿಶೇಷ ಚೇತನರ ದುಡಿಮೆಗೆ ಅರ್ಧದಷ್ಟು ವಿನಾಯಿತಿ ನೀಡಿ ಪೂರ್ಣ ವೇತನ ಪಾವತಿಸುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಅವರಿಗೆ ಆರ್ಥಿಕ ಸ್ವಾವಲಂಬನೆಯ ಬದುಕು ನಡೆಸಲು ಊರುಗೋಲಾಗಿದೆ ಎಂದು ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕು ಪಂಚಾಯಿತಿ ಇಒ ಸುಭಾಷ ಸಂಪಗಾಂವಿ ಹೇಳಿದರು.
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಮನರೇಗಾ ಯೋಜನೆಯ ಐಇಸಿ ಚಟುವಟಿಕೆಯಡಿ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ವಿಶೇಷಚೇತನರಿಗೆ ಹಾಗೂ ಪುನರ್ ವಸತಿ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷಚೇತನರು ಯಾವಾಗಲೂ ಅನುಕಂಪಕ್ಕೆ ಕಟಿಬೀಳದೇ ಸ್ವಾಭಿಮಾನದಿಂದ ದುಡಿದು ಸ್ವಾಭಿಮಾನದ ಬದುಕು ಬದುಕಲು ಮನರೇಗಾ ಯೋಜನೆ ಅತ್ಯಂತ ಮಹತ್ವದ ಪಾತ್ರವಹಿಸುತ್ತಿದ್ದೆ. ವಿಶೇಷ ಚೇತನರಿಗೂ ಉದ್ಯೋಗ ನೀಡಿ ಆರ್ಥಿಕವಾಗಿ ಬೆಳೆಸುವದರ ಜೊತೆ ಅವರಲ್ಲಿ ಆತ್ಮಸ್ಥೆರ್ಯ ತುಂಬುತ್ತದೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿಶೇಷಚೇತನರಿಗೆ ಕೆಲಸದಲ್ಲಿ 50% ರಿಯಾಯಿತಿ ಜೊತೆ ದಿನಕ್ಕೆ 316 ರೂ. ಕೂಲಿ ಮೊತ್ತ ಇದೆ. ಪೂರ್ಣ ಕೂಲಿ ಅವರ ಖಾತೆಗೆ ನೇರವಾಗಿ ಜಮೆ ಆಗುತ್ತದೆ. ವರ್ಷದಲ್ಲಿ 100 ದಿನ ಕೆಲಸ ನೀಡಲಾಗುತ್ತದೆ. ಯೋಜನೆಯಲ್ಲಿ ಕೂಲಿಕೆಲಸದ ಜೊತೆ ವೈಯಕ್ತಿಕ ಕಾಮಗಾರಿಗಳು ಸಹ ಮಾಡಿಕೊಳ್ಳಲು ಅವಕಾಶ ಇದ್ದು ಯೋಜನೆಯ ಉಪಯೋಗ ಪಡೆದು ಸ್ವಯಂ ಉದ್ಯೋಗ ಮಾಡಿಕೊಳ್ಳಬಹುದು. ಪ್ರತಿಯೊಬ್ಬ ವಿಶೇಷ ಚೇತನರು ಈ ಯೋಜನೆಯಡಿ ದುಡಿದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕರಾದ ವಿಜಯ ಪಾಟೀಲ, ವ್ಯವಸ್ಥಾಪಕರಾದ ಎಂ.ಎ. ಇಂಚಲಮಠ, ಐಇಸಿ ಸಂಯೋಜಕರಾದ ಎಸ್.ಬಿ.ಜವಳಿ, ಶಿವಮೂರ್ತಿ ಹೀರೆಮಠ, ತಾಂತ್ರಿಕ ಸಂಯೋಜಕರಾದ ಸುನಿಲ ಅವರನಾಳ, ಎಂಐಎಸ್ ಸಂಯೋಜಕರಾದ ಎಂ.ಬಿ.ಶಿವಪೂರ, ಭಾರತಿ ದೊಡ್ಡಗೌಡರ, ಕೆನರ ಬ್ಯಾಂಕ್ ಸಂಯೋಜಕರಾದ ಗೀತಾ ಖಾನಪೇಠ, ತಾಲೂಕು ಪುನರ ವಸತಿ ಕಾರ್ಯಕರ್ತ ಪಕ್ಕಿರಗೌಡ ಪಾಟೀಲ ಹಾಗೂ ತಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು.

*ಫೋಟೋ-ಶೀರ್ಷಿಕೆ-01
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ವಿಶೇಷಚೇತನರಿಗೆ ಹಾಗೂ ಪುನರ್ ವಸತಿ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ತಾಪಂ ಇಒ ಇಒ ಸುಭಾಷ ಸಂಪಗಾಂವಿ ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕರಾದ ವಿಜಯ ಪಾಟೀಲ, ವ್ಯವಸ್ಥಾಪಕರಾದ ಎಂ.ಎ. ಇಂಚಲಮಠ, ತಾಲೂಕು ಪುನರ್ ವಸತಿ ಕಾರ್ಯಕರ್ತ ಪಕ್ಕಿರಗೌಡ ಪಾಟೀಲ ಇತರರಿದ್ದರು.

*ಫೋಟೋ-ಶೀರ್ಷಿಕೆ-02
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಕಾರ್ಯಾಗಾರವನ್ನು ಕಿತ್ತೂರು, ಬೈಲಹೊಂಗಲ ತಾಪಂ ಇಒ ಇಒ ಸುಭಾಷ ಸಂಪಗಾಂವಿ ಉದ್ಘಾಟಿಸಿದರು. ತಾಪಂ ಸಹಾಯಕ ನಿರ್ದೇಶಕರಾದ ವಿಜಯ ಪಾಟೀಲ, ವ್ಯವಸ್ಥಾಪಕರಾದ ಎಂ.ಎ. ಇಂಚಲಮಠ, ಐಇಸಿ ಸಂಯೋಜಕರಾದ ಎಸ್.ಬಿ.ಜವಳಿ, ಶಿವಮೂರ್ತಿ ಹೀರೆಮಠ, ತಾಂತ್ರಿಕ ಸಂಯೋಜಕರಾದ ಸುನಿಲ ಅವರನಾಳ, ಎಂಐಎಸ್ ಸಂಯೋಜಕರಾದ ಎಂ.ಬಿ.ಶಿವಪೂರ, ಭಾರತಿ ದೊಡ್ಡಗೌಡರ, ಕೆನರ ಬ್ಯಾಂಕ್ ಸಂಯೋಜಕರಾದ ಗೀತಾ ಖಾನಪೇಠ ಇದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ