Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಭೂಗಳ್ಳರ ಕರಾಮತ್ತು

ಇನ್ನೂ ಇಂತಹ ಅನೇಕ ನೂರಾರು ಕರಾಮತ್ತುಗಳು ಬೆಳಗಾವಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನಡೆದಿರುವ ಬಗ್ಗೆ ಸ್ಥಳೀಯ ನಾಗರಿಕರು ಅನುಮಾನವನ್ನು 'ಜನ ಜೀವಾಳ' ದ ಮುಂದೆ ವ್ಯಕ್ತಪಡಿಸಿದ್ದಾರೆ.


ಭೂ ಮಾಫಿಯಾ ದೊರೆಗಳು ಮತ್ತು ಸಬ್ ರಜಿಸ್ಟಾರ್ ನೋಂದಣಿ ಅಧಿಕಾರಿಗಳ ಕರಾಮತ್ತು, ಮಸಲತ್ತಿನ ಮರ್ಮ ಮುಂಬರುವ ದಿನಗಳಲ್ಲಿ ಹೊರಬರುವುದು ಖಚಿತ ಎಂದು ನೋಂದಣಿ ಏಜೆಂಟರ ಬಾಯಿಂದ ಬಾಯಿಗೆ ಸುದ್ದಿ ಹರಿದಾಡುತ್ತಿದೆ.


 

ಬೆಳಗಾವಿ :
ನಕಲಿ ದಾಖಲೆ ಸೃಷ್ಟಿಸಿದ ಭೂಗಳ್ಳರು ಕೋಟ್ಯಂತರ ₹ ಅಪಾರ್ಟ್ ಮೆಂಟ್ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

ಮಾನಸಿಕ ಅಸ್ವಸ್ಥತೆಯ
ಜಾಗವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂ ಬೆಲೆಬಾಳುವ ಆಸ್ತಿಯನ್ನು ಲಪಟಾಯಿಸುವ ಪ್ರಯತ್ನ ಇದೀಗ ಭಾರೀ ಪ್ರಚಾರ ಪಡೆದುಕೊಂಡಿದೆ. ಬಡಪಾಯಿ ಕುಟುಂಬದ
ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡ ಭೂಗಳ್ಳರು ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥೆಯನ್ನು ಕೆಲ ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಖ್ಯಾತನಾಮ ಆಸ್ಪತ್ರೆಗಳಿದ್ದರೂ ಇಲ್ಲಿ ಚಿಕಿತ್ಸೆ ನೀಡುವುದನ್ನು ಬಿಟ್ಟು ಕಾರವಾರದ ಆಸ್ಪತ್ರೆಗೆ ರವಾನೆ ಮಾಡಿರುವ ಸುದ್ದಿ ಇದೆ.

ಸೋಮವಾರಪೇಟೆ ನಿವಾಸಿ ಅಪರ್ಣ ಮಾಸೇಕರ್ ಮಾನಸಿಕ ಅಸ್ವಸ್ಥೆ. ಇವರು ಸ್ವಂತ ಮನೆಯಲ್ಲಿ ತನ್ನ ತಾಯಿ ಮತ್ತು ತೊಂಬತ್ತು ವರ್ಷ ಅಜ್ಜಿಯೊಂದಿಗೆ ಇದ್ದರು.
ಮನೆಯವರು ಈ ಮಾನಸಿಕ ಅಸ್ವಸ್ಥ ಕುಟುಂಬಕ್ಕೆ ಸಹಾಯಹಸ್ತ ಚಾಚುತ್ತಿರಲಿಲ್ಲ. ಈ ಮಾನಸಿಕ ಅಸ್ವಸ್ಥ ತಾಯಿ ಉಷಾ ವಿಶ್ರಮ್ ಮಾಸೇಕರ್ ಮೇ 2011 ರಂದು ನಿಧನರಾಗಿದ್ದರು. ಅಕ್ಕಪಕ್ಕದವರು ಸಹ ಇವರ ಸಹಾಯಕ್ಕೆ ಆಗಮಿಸಿರಲಿಲ್ಲ. ಆಗ ತಾಯಿಯ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದರು.

ಆಗ ಅಸ್ವಸ್ಥ ಮಹಿಳೆಗೆ ಸಾಮಾಜಿಕ ಕಾರ್ಯಕರ್ತ ಮಾಜಿ ಮೇಯರ್ ವಿಜಯ ಮೋರೆ ನೆನಪಾಗಿದ್ದಾರೆ. ಅವರಿಗೆ ವಿಷಯ ತಿಳಿಸುವಂತೆ ಕೆಲವರ ಬಳಿ ಹೇಳಿದ್ದಾರೆ. ಆಗ ವಿಜಯ ಮೋರೆ ಬಂದು ಗಮನಿಸಿದಾಗ ಮನೆಯಲ್ಲಿ ದುರ್ವಾಸನೆ ಹಬ್ಬಿದ್ದು ವಿಜಯ ಮೋರೆ ಅವರು ಬಾಬುಲಾಲ್ ಮುಜಾವರ ಮುಂತಾದವರ ಜತೆ ಸೇರಿ ಟಿಳಕವಾಡಿ ಪೋಲಿಸರಿಗೆ ಮಾಹಿತಿ ನೀಡಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆಗ ಅವರ ಮನೆಯಲ್ಲಿ ಸುಮಾರು ಎಪ್ಪತ್ತೈದರಿಂದ ಎಂಬತ್ತು ಲಕ್ಷ ಮೌಲ್ಯದ ಎಫ್ ಡಿ ಬಾಂಡ್ ಗಳು ಮಾರುತಿ ಕಾರ್ ಸಹ ಪತ್ತೆಯಾಗಿತ್ತು. ಇದು ವ್ಯಾಪಕ ಪ್ರಚಾರ ಪಡೆದಿತ್ತು. ಇದನ್ನು ಗಮನಿಸಿದ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಈಗ ಅಲ್ಲಿ ಬೃಹತ್ ಕಟ್ಟಡ ನಿರ್ಮಿಸುವ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆಯೂ ಈ ಜಾಗದ ಮೇಲೆ ಬಹಳ ಜನ ಕಣ್ಣಿಟ್ಟಿದ್ದರು.
ಸದ್ಯ ಕಟ್ಟಡ ನಿರ್ಮಾಣದ ನಡುವೆ ಹದಿನೈದು ದಿನಗಳಿಂದ ಕೆಲಸ ಬಂದ್ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಒಟ್ಟಾರೆ ಬೆಳಗಾವಿಯಲ್ಲಿ ಅಬಲರ
ಮೇಲೆ ನಿರಾತಂಕವಾಗಿ ದಬ್ಬಾಳಿಕೆ ಮಾಡಿ ಭೂಗಳ್ಳತನ ಮಾಡುತ್ತಿರುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಉದಾಹರಣೆ ಇನ್ನೊಂದಿಲ್ಲ ಎನ್ನಬಹುದು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ