ಸೊರಬ: ದೇಶದಲ್ಲಿ ಸಕಾಲಿಕ ಮಳೆಯಾಗದೆ ಅಕಾಲಿಕವಾದ ಮಳೆಯಿಂದಾಗಿ ಜಲ ಕಂಟಕಗಳು ಎದುರಾಗಲಿದೆ. ಮಳೆ, ಗುಡುಗು, ಸಿಡಿಲು ಹೆಚ್ಚಾಗಿ ಭೂಮಿ ತಲ್ಲಣಗೊಳ್ಳಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಜಡೆ ಸಂಸ್ಥಾನ ಮಠದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗಲಿದೆ. ಆಕಸ್ಮಿಕವಾದ ಘಟನೆಗಳು ಜರುಗಿ ದೊಡ್ಡ ದೊಡ್ಡ ನಗರಗಳು ಆಪತ್ತನ್ನು ಎದುರಿಸುತ್ತವೆ. ರಾಜಕಾರಣದದಲ್ಲಿ ‘ಅರಸನ ಅರಮನೆ ಕಳೆಗುಂದಿತು. ಪಟ್ಟದ ಆನೆ ಗಾಂಭೀರ್ಯ ನಡೆದಿತು’ ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಅಸತ್ಯ ಸಿಹಿಯಾಗಿರುತ್ತದೆ. ಹಿಂಗಾರು ಮಳೆ-ಗಾಳಿ ಆರ್ಭಟ ಹೆಚ್ಚುತ್ತದೆ. ಯಾವುದೇ ಜನ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
