Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಿಕ್ಕೂಡ ಗ್ರಾಮದ ಅಭಿವೃದ್ದಿಗೆ ಕಂಕಣಬದ್ಧ: ಲಕ್ಷ್ಮಣ ಸವದಿ

 

ರಡ್ಡೇರಹಟ್ಟಿ :
ರಾಜಕೀಯ ಬದುಕಿನ ಸಂಕಷ್ಟದ ಸಂದಿಗ್ಧ ಕಾಲದಲ್ಲಿ ಕೈಹಿಡಿದ ಜನರ ಋಣಭಾರ ಹಗುರ ಮಾಡಿಕೊಳ್ಳಲು ಅವರ ಕಷ್ಟಗಳಿಗೆ ಪ್ರಾಮಾಣಿಕ ಸ್ಪಂದನೆ ಮಾಡುತ್ತಾ ಅಥಣಿ ಮತಕ್ಷೇತ್ರದ ಪ್ರಗತಿಯ ಚಕ್ರವನ್ನು ವೇಗಗೊಳಿಸುವುದಾಗಿ ಮಾಜಿ ಉಪ ಮುಖ್ಯಮಂತ್ರಿˌ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಚಿಕ್ಕೂಡ ಗ್ರಾಮದವರು ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡುತ್ತಾ ಪ್ರಾಂಜಲ ಪ್ರೀತಿಯ ಸನ್ಮಾನಗಳು ನನ್ನ ಭವಿಷ್ಯದ ಶ್ರೀರಕ್ಷಾಕವಚಗಳಾಗಲಿವೆ. ನನ್ನ ಮತಕ್ಷೇತ್ರವೇ ನನ್ನ ಮನೆ. ಅದರ ಅಭಿವೃದ್ಧಿಗಾಗಿ ಮಂತ್ರಿ ಪದವಿಯನ್ನು ನಾನೇ ನಿರಾಕರಿಸಿದ್ದು ಸ್ವಪ್ರತಿಷ್ಠೆˌ ಗೌರವಗಳಿಗಿಂತ ಕುಂದು ಕೊರತೆಗಳನ್ನು ಸರಿಪಡಿಸುವುದು ಮುಖ್ಯವಾಗಿದೆ. ಚಿಕ್ಕೂಡ ಗ್ರಾಮವು ಆರೂಢ ಪರಂಪರೆಯನ್ನನುಸರಿಸುವ ಪುಣ್ಯ ತಾಣವಾಗಿದ್ದು ಈ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದೇನೆಂದು ಕೃತಜ್ಞತಾ ನುಡಿಗಳಲ್ಲಿ ತಿಳಿಸಿದರು.


ಹೆಚ್ಚು ವಚನಗಳನ್ನು ಕಂಠಪಾಠ ಮಾಡಿಕೊಂಡ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಸಾಕ್ಷಿ ಮಠಪತಿˌ ಶಿಲ್ಪಾ ವಡ್ಡರˌ ಸುಶ್ಮಿತಾ ಬಚ್ಚನ್ನವರˌ ಸಹನಾ ಕತ್ತಿˌ ಮಾಸಾಯಿ ಚಿಂಚಲಿˌ ಸುದರ್ಶನ ಹರವಿˌ ಪ್ರಜ್ವಲ ತೇಲಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಶೈಲ ನಾಯಿಕˌ ಶ್ರೀಶೈಲ ಹಳ್ಳದಮಳ್ಳˌ ಅಶೋಕ ಮುಳ್ಳೂರ ಭೀಮಣ್ಣ ಐನಾಪುರ, ಗುಂಡು ರಡ್ರಟ್ಟಿ, ಹಣಮಂತ ಕುಳಲಿ, ವಿಜಯ ಕಲಾದಗಿ, ರಾಹುಲ ಮಾಚಕನೂರ, ಮಹೇಶ ಮುಳ್ಳೂರ, ಮಲ್ಲಿಕಾರ್ಜುನ ಹಲಕಿ, ಶಿವಾನಂದ ತೇಲಿ, ಮಲ್ಲಪ್ಪ ತೇಲಿ, ಸಂಜಯ ತೇಲಿ ರಾಜೇಂದ್ರ ಮುಳ್ಳೂರ ಉಪಸ್ಥಿತರಿದ್ದರು.
ಸುಮಿತ್ರಾ ಮಗೆಣ್ಣವರ ಸ್ವಾಗತಿಸಿದರು. ಶ್ರೀಕಾಂತ ಹಳ್ಳೂರ ನಿರೂಪಿಸಿದರು. ಆರ್.ಎಮ್.ಪಾಟೀಲ ವಂದಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ