Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಜತ್ತ, ಅಕ್ಕಲಕೋಟೆ ಕನ್ನಡಿಗರ ನೆರವಿಗೆ ಕನ್ನಡ ಸಂಘಟನೆಗಳ ಮೊರೆ

 

ಬೆಳಗಾವಿ :
ಕರ್ನಾಟಕಕ್ಕೆ ತಮ್ಮನ್ನು ಸೇರಿಸಬೇಕೆಂದು ಪಂಚಾಯತಿಗಳಲ್ಲಿ
ನಿರ್ಣಯಗಳನ್ನು ಅಂಗೀಕರಿಸುತ್ತಿರುವ
ಮಹಾರಾಷ್ಟ್ರದ ಜತ್ತ,ಅಕ್ಕಲಕೋಟೆ
ತಾಲೂಕುಗಳ ಕನ್ನಡಿಗರ ಧ್ವನಿಯನ್ನು
ಮತ್ತು ಹೋರಾಟವನ್ನು ಮಹಾರಾಷ್ಟ್ರ
ಸರಕಾರ ಧಮನಿಸುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧ ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಇಂದು ಬೆಳಗಾವಿ ಜಿಲ್ಲಾಧಿಕಾರಿ
ಕಚೇರಿಯ ಎದುರು ಪ್ರತಿಭಟನೆ
ನಡೆಸಿತು.

ಮಹಾರಾಷ್ಟ್ರ ಸರಕಾರ ಅಲ್ಲಿಯ
ಕನ್ನಡಿಗರ ಮೇಲೆ ಪೋಲೀಸರ ಮೂಲಕ
ದಬ್ಬಾಳಿಕೆ ನಡೆಸಿದ್ದು ನಿರ್ಣಯ
ಅಂಗೀಕರಿಸಿದ ಪಂಚಾಯತಿಗಳ
ಪ್ರಮುಖರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದ್ದರಿಂದ ಕರ್ನಾಟಕ
ಸರಕಾರ ಈ ಕೂಡಲೇ ಇಬ್ಬರು ಹಿರಿಯ
ಸಚಿವರನ್ನು ಮತ್ತು ಗಡಿ ಸಂರಕ್ಷಣಾ
ಆಯೋಗದ ಅಧ್ಯಕ್ಷರನ್ನು ಜತ್ತ
ಪ್ರದೇಶಕ್ಕೆ ಕಳಿಸಬೇಕು. ಅಲ್ಲಿಯ
ಕನ್ನಡಿಗರೊಂದಿಗೆ ಚರ್ಚಿಸಬೇಕು. ಅವರ
ಸಮಸ್ಯೆಗಳ ಪರಿಹಾರಕ್ಕೆ ಸಾಧ್ಯವಿರುವ
ಎಲ್ಲ ಕ್ರಮಗಳನ್ನು ಕೈಕೊಳ್ಳಬೇಕು ಎಂದು
ಮುಖ್ಯಮಂತ್ರಿಗಳನ್ನು ಒತ್ತಾಯಿಸುವ
ಮನವಿಯನ್ನು ಜಿಲ್ಲಾಧಿಕಾರಿಗಳಿಗೆ
ಸಲ್ಲಿಸಲಾಯಿತು.

ಜತ್ತ ಪ್ರದೇಶವನ್ನು ಕರ್ನಾಟಕಕ್ಕೆ
ಸೇರಿಸಲು ಕ್ರಮ ಕೈಕೊಳ್ಳುವದಾಗಿ ನೀವು
15 ದಿನಗಳ ಹಿಂದೆ ಹೇಳಿಕೆ ನೀಡಿದ
ನಂತರ ಜತ್ತ, ಅಕ್ಕಲಕೋಟೆ ಕನ್ನಡಿಗರಲ್ಲಿ
ಹೊಸ ಆಶಾ ಭಾವನೆ ಮೂಡಿದೆ. ಅಲ್ಲದೇ ಅಲ್ಲಿಯ ಕನ್ನಡಿಗರು ಕರ್ನಾಟಕಕ್ಕೆ
ಸೇರುವ ತಮ್ಮ ಇಚ್ಛೆ ವ್ಯಕ್ತಪಡಿಸಿ
ನಿರ್ಣಯಗಳನ್ನು ಅಂಗೀಕರಿಸಲು
ಆರಂಭಿಸಿದ್ದಾರೆ. ಎರಡು ದಿನಗಳಿಂದ
ಅಲ್ಲಿಯ ಸರಕಾರ ಕನ್ನಡಿಗರ ವಿರುದ್ಧ
ಆಕ್ರಮಿಕ ನಿಲುವನ್ನು ತಳೆಯುತ್ತಿದ್ದಾರೆ.
ಪೋಲೀಸರು ಕನ್ನಡದ ಪ್ರಮುಖರಿಗೆ
ನೋಟೀಸು ನೀಡುವ ಮೂಲಕ
ಹೋರಾಟಗಳ ವಿರುದ್ಧ ಬೆದರಿಕೆ
ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ
ಕರ್ನಾಟಕ ಸರಕಾರ ಮಹಾರಾಷ್ಟ್ರದ
ಕನ್ನಡಿಗರನ್ನು ನಡು ನೀರಿನಲ್ಲಿ
ಕೈಬಿಡಬಾರದು ಎಂದು ಬೊಮ್ಮಾಯಿ
ಅವರನ್ನು ಆಗ್ರಹಿಸಲಾಗಿದೆ.

ರಾಜ್ಯ ಸರಕಾರ ಜತ್ತ ಕನ್ನಡಿಗರ
ಬೆನ್ನಿಗೆ ನಿಲ್ಲದಿದ್ದರೆ ಅವರಿಗೆ ದ್ರೋಹ
ಬಗೆದಂತಾಗುತ್ತದೆ.ಆದ್ದರಿಂದ ಸರಕಾರ
ಎಚ್ಚೆತ್ತುಕೊಂಡು ತುರ್ತಾಗಿ ಕನ್ನಡಿಗರ
ನೆರವಿಗೆ ಧಾವಿಸಬೇಕೆಂದು ಮನವಿಯಲ್ಲಿ
ಬೊಮ್ಮಾಯಿ ಅವರನ್ನು ಒತ್ತಾಯಿಸಲಾಗಿದೆ.

ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ
ಚಂದರಗಿ, ಹೋರಾಟಗಾರರಾದ
ಎಮ್.ಜಿ.ಮಕಾನದಾರ, ರಮೇಶ
ಸೊಂಟಕ್ಕಿ, ಶಂಕರ ಬಾಗೇವಾಡಿ, ಮಲ್ಲಪ್ಪ
ಅಕ್ಷರದ, ಸಾಗರ ಬೋರಗಲ್ಲ, ರಜತ
ಅಂಕಲೆ , ಆದರ್ಶ ಅನಗೋಳ ಹಾಗೂ ಸುಮಾ ಪಾಟೀಲ ಮುಂತಾದವರು
ಮನವಿ ಸಲ್ಲಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ