Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಊಟಕ್ಕೆ ಉಪ್ಪಿನಕಾಯಿಯಾಗಿರುವ‌ ಅತಿಥಿ ಉಪನ್ಯಾಸಕರು 

Advertisement

ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಬೆನ್ನೆಲುಬಾಗಿ ನಿಂತಿರುವ ಪ್ರಾಧ್ಯಾಪಕರಲ್ಲಿ ಅತಿಥಿ ಉಪನ್ಯಾಸಕರ ಬಹುಪಾಲು ಇದೆ 431ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಸುಮಾರು 12000 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ತಮ್ಮ ಬೇಡಿಕೆಯಾದ ಸೇವಾ ಭದ್ರತೆಯನ್ನು ಕೇಳುತ್ತಾ ಹೋರಾಡುತ್ತಲೆ ವಯಸ್ಸಿನ ಕಾಲ, ಅರ್ಧ ಭಾಗ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರು 

ಇವರ ಆರ್ಥಿಕ ಸ್ಥಿತಿ ವರ್ಷದಿಂದ ವರ್ಷಕ್ಕೆ ತತ್ತರಿಸುತ್ತಾ ತಿಂಗಳಿಗೆ ಸಂಬಳವಿಲ್ಲದೆ ಶೈಕ್ಷಣಿಕ ವರ್ಷವನ್ನು ಕಾಯುತ್ತಾ ನಿಂತಿರುವುದು ಸಮಾಜದಲ್ಲಿ ನೆಮ್ಮದಿಯನ್ನು ಕಾಣದೆ , ಉದ್ಯೋಗ ಭದ್ರತೆ ಇಲ್ಲದ ಸ್ಥಿತಿ ವರ್ಷಕ್ಕೆ ಕೆಲವೇ ತಿಂಗಳ ಮಾತ್ರ ಬದುಕಿನಲ್ಲಿ  ಸೇವೆ ದೊರೆಯುತ್ತದೆ ಇನ್ನುಳಿದ ಅವಧಿಯಲ್ಲಿ ಇಲಾಖೆ ಬಿಡುಗಡೆ ಮಾಡುತ್ತಾ ಬರುತ್ತಿದೆ. ಇದರಿಂದ ಇವರು ಊಟಕ್ಕೆ ಉಪ್ಪಿನಕಾಯಿ ಎಂದೇ ಇಲಾಖೆ ಇವರ ಜೊತೆ ಚೆಲ್ಲಾಟ ಆಡುತ್ತಿರುವುದು ಸೇವೆಗೆ ಭದ್ರತೆ ಇಲ್ಲದೆ ನರಳುವಂತೆ ಮಾಡಿದೆ.
ಈಗಿನ ಸರ್ಕಾರವು ಕೂಡ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಅತಿಥಿಗಳಿಗೆ ಸೇವಾ ಭದ್ರತೆ ನೀಡುತ್ತೇವೆ ಎಂದು ಹೇಳಿದ್ದರು ಕೂಡ ಇಲ್ಲಿಯವರೆಗೆ ಈ ಭರವಸೆಯನ್ನು ಈಡೇರಿಸಿಲ್ಲ ಜಾಣ ಮೌನವನ್ನು ವಹಿಸಿದೆ .
ಪದವಿ ಕಾಲೇಜುಗಳಲ್ಲಿ ಯುಜಿಸಿ ನಿಯಮಾವಳಿ ಪ್ರಕಾರ ಅರ್ಹತೆ ಹೊಂದಿದ್ದರು ಸುಮಾರು ವರ್ಷಗಳಿಂದ ಈ ಕಾಲೇಜುಗಳಲ್ಲಿ ಸೇವೆಯನ್ನು ಮಾಡುತ್ತಾ ಇಂದಿಲ್ಲ ನಾಳೆ  ನಮಗೆ ಸೇವಾ ಭದ್ರತೆ ಸಿಗುತ್ತದೆ ಎಂಬ ನಂಬಿಕೆಯಿಂದ  ಬಂದಿರುವ ಇವರ ಬದುಕು ಈಗ ಶೋಚನೆಯ  ಸ್ಥಿತಿ. ಅತಿಥಿ ಇಲಾಖೆ ಕೈಯಲ್ಲಿ 'ತಿಥಿ' ಯಾಗುತ್ತಿದ್ದಾನೆ 
ವರ್ಷದಿಂದ ವರ್ಷಕ್ಕೆ ಆರ್ಥಿಕ ಸ್ಥಿತಿ ಹದಗೆಟ್ಟು ಇತ್ತ ಬದುಕಲಾರದೆ ವಾರಕ್ಕೆ ಓರ್ವ ಅತಿಥಿ ಉಪನ್ಯಾಸಕರು ಮಾನಸಿಕವಾಗಿ ನರಳಿ ಪ್ರಾಣ ಕಳೆದು ಕೊಳ್ಳುತ್ತಿರುವುದು, ಇವರನ್ನೇ ನಂಬಿದ ಕುಟುಂಬಗಳ ಸ್ಥಿತಿ ಪರಿಹಾರಗಳಿಲ್ಲದೆ ನರಕ ಯಾತನೆ ಅನುಭವಿಸುತ್ತಿರುವವು ಇದಕ್ಕೆಲ್ಲ ಕಾರಣ ಯಾರು? ಎಂಬುದನ್ನು ಸರ್ಕಾರ ಗಮನಹರಿಸಬೇಕು.
ಕಾಲೇಜುಗಳಲ್ಲಿ ಪಠ್ಯಕ್ರಮ ಬೋಧನೆ ಪರೀಕ್ಷಾ ಕರ್ತವ್ಯ ಮೌಲ್ಯಮಾಪನ ಗಳಂತ ಕಾರ್ಯ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುವ ಇಂತಹ ಜೀವಗಳನ್ನು ರಕ್ಷಿಸಿದರೆ ಶಿಕ್ಷಣಕೊಂದು ಅರ್ಥ ಬರುವುದು 
ಆದರೆ ಇವುಗಳೆಲ್ಲವನ್ನು ಬಿಟ್ಟು ಅತಿಥಿಗಳೆಂಬ ಅವಮಾನವೇ ಇವರಿಗೆ ಸನ್ಮಾನ ಎಂದಾಗಿದೆ 
ಸರ್ಕಾರ ಇವರ ಹೋರಾಟಗಳಿಗೆ ಶಾಶ್ವತ ಪರಿವಾರವನ್ನು ನೀಡದೆ, ಪ್ರತಿ ವರ್ಷ ಹೋರಾಟವನ್ನೆ ಜೀವಂತ ಇಟ್ಟಿದೆ ಇವರ ಕೂಗುಗಳಿಗೆ ಕವಡೆ ಕಾಸಿನಷ್ಟು ಬೆಲೆ ಕೊಟ್ಟಿಲ್ಲ ಮೊಸಳೆ ಕಣ್ಣೀರಿನಂತೆ ಸಮಿತಿಗಳ ರಚನೆ, ವರದಿ ಸಲ್ಲಿಕೆಗಳಂತ ಕೆಲಸ ಮಾಡಿದೆ. ಅರ್ಹತೆ ಇಲ್ಲದವರಿಗೆ  ಕೇವಲ ಮೂರು ವರ್ಷ ಶೈಕ್ಷಣಿಕ ಮೇಲ್ವಿಚಾರಕರೆಂದು ಹೇಳಿದೆ ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 
ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಹನ್ನೆರಡು ತಿಂಗಳು ವೇತನ 60ನೇ ವಯಸ್ಸಿನ ನಿವೃತ್ತಿ ವರೆಗೆ ಸೇವಾ ಭದ್ರತೆಯನ್ನು ನೀಡಲಿ.
ಕೃಷಿ ಕಾರ್ಮಿಕರು ಬಡವರು ಹಿಂದುಳಿದವರು ಇಂತ ಕುಟುಂಬಗಳ ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ಕಲಿಯುತ್ತಿದ್ದು ಅವರ ಭವಿಷ್ಯವನ್ನು ರೂಪಿಸುವ ಉಪನ್ಯಾಸಕ ಎಂಬ ಶಿಲ್ಪಿಗಳಿಗೆ ಸರಕಾರ ಸ್ಪಂದಿಸಿ ಅವರನ್ನು ಇತರೆ ರಾಜ್ಯಗಳ ಮಾದರಿಯಂತೆ ಸೇವಾ ಭದ್ರತೆ ನೀಡಿ ಬದುಕನ್ನು ಭದ್ರಪಡಿಸಲಿ. ಭವಿಷ್ಯದ ರೂವಾರಿಗೇ ನೆಮ್ಮದಿ ಬಾಳನ್ನು ಕಲ್ಪಿಸಿಕೊಡಲಿ.
ಡಾ.ಅ.ಬ.ಇಟಗಿ
ಜಿಲ್ಲಾಧ್ಯಕ್ಷರು, ಬೆಳಗಾವಿ 
 ರಾಜ್ಯ ಅತಿಥಿ ಉಪನ್ಯಾಸಕರ ಸಂಘ

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಗಾರು ಕುಂಠಿತ ? ಭಾರತದ ಬಹುತೇಕ ಭಾಗಗಳಲ್ಲಿ ಮಳೆಮೋಡಗಳೇ ಕಾಣುತ್ತಿಲ್ಲ ; ಉಪಗ್ರಹ ಚಿತ್ರದಲ್ಲಿ ಆತಂಕಕಾರಿ ದೃಶ್ಯಊಟಕ್ಕೆ ಉಪ್ಪಿನಕಾಯಿಯಾಗಿರುವ‌ ಅತಿಥಿ ಉಪನ್ಯಾಸಕರು ಸಮೃದ್ಧ ಫೌಂಡೇಶನ್‌ನ ಅನಾಥಾಶ್ರಮಕ್ಕೆ ಪ್ರಯತ್ನ ಸಂಸ್ಥೆಯಿಂದ ನೆರವುಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: 8 ಜನರ ಬಂಧನದ ಬೆನ್ನಲ್ಲೇ ಟ್ರಸ್ಟ್ ಮುಖ್ಯಸ್ಥ ಚಂಪತ ರಾಯ್ ರಾಜೀನಾಮೆಶಾಲೆಗಳಲ್ಲಿ ಶನಿವಾರದ ಶಾಲಾ ವೇಳಾಪಟ್ಟಿ ಬದಲಾಯಿಸಲು ಸರ್ಕಾರ ಸಮ್ಮತಿ ?ತೋತಾಪುರಿ ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ; ಕರ್ನಾಟಕದ 1.3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌ಕೇಂದ್ರದಿಂದ ಗುಡ್‌ನ್ಯೂಸ್ ; ವಾಣಿಜ್ಯ ಬಳಕೆ ಎಲ್‌ಪಿಜಿ ಮೇಲಿನ ನಿರ್ಬಂಧ ತೆಗೆದುಹಾಕಿದ ಸರ್ಕಾರ ; ಪೂರೈಕೆ ಸಹಜ ಸ್ಥಿತಿಗೆಇಡಿ ದಾಳಿ ವೇಳೆ ಮಂಜುನಾಥ ಮತ್ತು ಆಪ್ತರ ಬಳಿ ಸಿಕ್ಕಿದ್ದೆಷ್ಟು ಗೊತ್ತೇ ?ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರಉದ್ಯಮಿ ರಾಜಾಭಾವು ಶಿರಗಾಂವಕರ ನಿಧನ