ಬೆಳಗಾವಿ: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕಾರ್ಯಾಚರಣೆ ನಡೆಸಿದ್ದು, ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿದ್ದ ಒಟ್ಟು 18 ಮಂದಿ ರೌಡಿಶೀಟರ್ಗಳನ್ನು ಜಿಲ್ಲೆಯಿಂದ ಗಡೀಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಗಡೀಪಾರಾದ 18 ಜನ ರೌಡಿಶೀಟರ್ಗಳು: ಗೋಕಾಕ ತಾಲ್ಲೂಕಿನಲ್ಲಿ ಗಂಗಪ್ಪ ನಾಯಿಕ, ಸಂಜು ಮೇಸ್ತ್ರಿ, ಸಾಗರ ಖಾನಾಪುರ, ಪಾಸ್ಕಲ್ ಮುತ್ತುಸ್ವಾಮಿ, ಕುಲಗೋಡ ಠಾಣೆ ವ್ಯಾಪ್ತಿಯಲ್ಲಿ ದಸ್ತಗೀರಸಾಬ್ ನಾವಲಗಿ, ಮುರಗೋಡ ಠಾಣೆ ವ್ಯಾಪ್ತಿಯಲ್ಲಿ ಹನುಮಂತ ಮಾದರ, ನೀಲಕಂಠ ಮಣವಾಡಕರ, ನಿಪ್ಪಾಣಿ ತಾಲ್ಲೂಕಿನಲ್ಲಿ ಸೈಫ್ಅಲಿ ನಾಗರ್ಜಿ, ಪ್ರವೀಣ ಚೌಗಲೆ, ಚಂದ್ರಕಾಂತ 9 ವಡ್ಡರ, ಸಂಕೇಶ್ವರದಲ್ಲಿ ಸಚಿನ ಚೌಡಕ್ಕನವರ, ಯಮಕನಮರಡಿ ಠಾಣೆ ವ್ಯಾಪ್ತಿಯಲ್ಲಿ ಲಾಡಜಿಸಾಬ್ ಮುಲ್ತಾನಿ, ಪಾರೇಶ ನಾಶಿಪುಡಿ, ಚನ್ನಮ್ಮನ ಕಿತ್ತೂರಿನಲ್ಲಿ ದೀಪಕ ಕೆಳಗಡೆ, ಕುಮಾರ ಬೆಂಡಿಗೇರಿ,. ಕಟಕೋಳದಲ್ಲಿ ಚೇತನ ನಾಯ್ಕರ, ಸವದತ್ತಿಯಲ್ಲಿ ಹುಸೇನಸಾಬ್ ಬೀಳಗಿ, ಸುರೇಬಾನದಲ್ಲಿ ಚುರಚಪ್ಪ ಘಟ್ಟೂರ ಎಂಬಾತನನ್ನು ಗಡಿಪಾರು ಮಾಡಲಾಗಿದೆ.
ಕಳೆದ ಹಲವು ದಿನಗಳಿಂದ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಶಾಂತಿಭಂಗ ತರುತ್ತಿದ್ದ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯ ಆಧಾರದ ಮೇಲೆ ಎಸ್ಪಿ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
ಗಡೀಪಾರು ಆದೇಶಕ್ಕೆ ಒಳಗಾದವರು ನಿಗದಿತ ಅವಧಿಯವರೆಗೆ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸುವಂತಿಲ್ಲ.
ಈ 18 ಮಂದಿಯ ಮೇಲೆ ಕೊಲೆ ಯತ್ನ, ಹಲ್ಲೆ, ಬೆದರಿಕೆ ಹಾಗೂ ಹಫ್ತಾ ವಸೂಲಿಯಂತಹ ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಮುಂಬರುವ ಹಬ್ಬಗಳ ಅಥವಾ ವಿಶೇಷ ದಿನಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಈ 'ಪ್ರಿವೆಂಟಿವ್ ಆಕ್ಷನ್' ಕೈಗೊಳ್ಳಲಾಗಿದೆ. ಸಾರ್ವಜನಿಕರ ಧೈರ್ಯ ತುಂಬಲು ಮತ್ತು ರೌಡಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಯಾರೇ ಕಾನೂನು ಕೈಗೆತ್ತಿಕೊಂಡರೂ ಅಥವಾ ಸಾರ್ವಜನಿಕ ನೆಮ್ಮದಿಗೆ ಅದಕ್ಕೆ ತಂದರು ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
