Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಳವು ಮಾಡಲು ಬಂದವರನ್ನು ಜನ ಹಿಡಿದಿದ್ದು ಹೇಗೆ ಗೊತ್ತಾ ?

ಬೆಳಗಾವಿ: ಕಿತ್ತೂರು ಬಳಿಯ ಚನ್ನಾಪುರ ಗ್ರಾಮದಲ್ಲಿ ಗ್ಯಾರೇಜ್ ಹಾಗೂ ಆಟೋಮೊಬೈಲ್ ಅಂಗಡಿ ಕಳ್ಳತನ ಮಾಡಲು ಮೂವರು ಬಂದಿದ್ದರು. ಕೊನೆಗೂ ಅಲ್ಲಿದ್ದ ಜನ ಅವರನ್ನು ಗಮನಿಸಿ ಒಬ್ಬನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.

ಧಾರವಾಡ ಜಿಲ್ಲೆ ಹಳೆ ಹುಬ್ಬಳ್ಳಿ ಆನಂದನಗರದ ಫಾರೂಕ್ ಇಸ್ಮಾಯಿಲ್ ಹುಯಿಲಗೋಳ ಆರೋಪಿ. ಇವನ ಜೊತೆ ಬಂದಿದ್ದ ಹಳೆ ಹುಬ್ಬಳ್ಳಿಯ ಇರ್ಫಾನ್ ಅಬ್ದುಲ್ ಬೋದಲೇಖಾನ್ ಮತ್ತು ಕೃಷ್ಣಾಪುರಗಲ್ಲಿಯ ಮಹಮ್ಮದ್ ಹುಸೇನ್ ಅಬ್ದುಲ್ ಸಾಬ್ ನರಗುಂದ ಪರಾರಿಯಾಗಿದ್ದು ಪೊಲೀಸರ ಇವರ ಪತ್ತೆಗೆ ಬಲೆ ಬೀಸಿದ್ದಾರೆ.

ಕಿತ್ತೂರು ತಾಲೂಕು ಚನ್ನಾಪುರ ಗ್ರಾಮದ ಸಮೀವುಲ್ಲಾ ಅಬ್ದುಲ್ ಮುನಾಫ್ ಶೀಗನಳ್ಳಿ ಅವರ ಅಂಗಡಿಯ ಶಟರ್ ಬೀಗ ಮುರಿಯಲು ಇವರು ಪ್ರಯತ್ನಪಟ್ಟಿದ್ದಾರೆ. ಮುರಿಯದೆ ಇದ್ದಾಗ ತಗಡಿನ ಚಾವಡಿ ಮೇಲೆ ಹತ್ತಿ ಒಳನುಗ್ಗಲು ಪ್ರಯತ್ನಪಟ್ಟಿದ್ದಾರೆ. ತಗಡಿನ ಶೀಟ್ ಆದ ಕಾರಣ ಸಪ್ಪಳವಾಗಿದೆ. ಆಗ ಜನ ಹೊರಗೆ ಬಂದು ಗಮನಿಸಿದ್ದಾರೆ. ಅಷ್ಟರಲ್ಲಿ ಇಬ್ಬರು ಕಳ್ಳರು ಓಡಿಹೋಗಿದ್ದಾರೆ. ಚಾವಣಿ ಮೇಲೆ ಇದ್ದ ಮತ್ತೊಬ್ಬ ಕಳ್ಳನನ್ನು ಜನ ಕೊನೆಗೂ ಧೈರ್ಯ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಫಾರೂಕ್ ಇಸ್ಮಾಯಿಲ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ