Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ !

 

ಅಖಂಡ ಕರ್ನಾಟಕ ನಿರ್ಮಾಣವಾದ ದಿನದಿಂದಲೂ ಸರಕಾರಗಳು ಬೆಳಗಾವಿ ಎಂದರೆ ತಾತ್ಸಾರ ಮಾಡುತ್ತಲೇ ಬಂದಿವೆ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಆಕಾಶವಾಣಿ ಕೇಂದ್ರಗಳು ಬೆಳಗಾವಿಗೇ ಬರಬೇಕಾಗಿತ್ತು ಬರಲಿಲ್ಲ – ಕಾರಣ ಗಡಿಭಾಗವೆಂಬ ಹಣೆಪಟ್ಟಿ. ಸುವರ್ಣ ವಿಧಾನಸೌಧ ಬಂದರೂ ಸಚಿವಾಲಯಗಳು ಬರಲಿಲ್ಲ. ಶಾಸಕರ ಭವನಗಳನ್ನು ನಿರ್ಮಿಸಲಿಲ್ಲ. ಪೂರ್ಣಾವಧಿಗೆ ಅಧಿವೇಶನಗಳನ್ನು ಮಾಡುತ್ತಿಲ್ಲ. ಬೆಳಗಾವಿಯಿಂದ ಪುಣೆ-ಮುಂಬಯಿ-ದೆಹಲಿ-ಬೆಂಗಳೂರು ನಡುವೆ ಹಾರುತ್ತಿದ್ದ ವಿಮಾನಗಳು ರದ್ದಾದವು. ವಂದೇ ಭಾರತ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತು ಯಾವ ಸಂಸದರೂ ಏನನ್ನೂ ಹೇಳುತ್ತಿಲ್ಲ. ಎಲ್ಲ ಮಹತ್ವದ ಯೋಜನೆಗಳು ಧಾರವಾಡ-ಹುಬ್ಬಳ್ಳಿಗೆ ಸೀಮಿತವಾಗುತ್ತಿವೆ. ಯಾಕೀ ತಾತ್ಸಾರ ?

ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ನೂರಾರು ಪ್ರತಿಭಾಸಂಪನ್ನ ಶಿಕ್ಷಣ ತಜ್ಞರು, ಲೇಖಕರು, ಕಲಾವಿದರು, ನಾಟಕಕಾರರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಪ್ರಸಿದ್ಧ ಕವಿ ಮತ್ತು ಸಾಹಿತಿಗಳ ಹೆಸರಿನಲ್ಲಿರುವ ಪ್ರತಿಷ್ಠಾನಗಳಿಗೆ ಅನುದಾನ ಬರುವುದಿಲ್ಲ. ಕಲಾ ತಂಡಗಳಿಗೆ ಅನ್ಯಾಯವಾಗುತ್ತಿದೆ. ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ನಮ್ಮ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ ಹೇಳಬೇಕು. ಸರಕಾರದಲ್ಲಿರುವವರನ್ನು ಕೈಹಿಡಿದು ಕೆಲಸ ಮಾಡಿಸಬೇಕು. ಪಾಲಕ ಮಂತ್ರಿಗಳು ಮೌನ ವಹಿಸಬಾರದು. ಕಾರಣ ಇವರು ನಮ್ಮ ಉತ್ತರ ಕರ್ನಾಟಕದವರು. ಕೇವಲ ಮರಾಠರ ಮತಗಳ ಓಲೈಕೆಗಾಗಿ ಕನ್ನಡಿಗರನ್ನು ಬಲಿಕೊಡಬೇಡಿ. ಎಂದೆಂದಿಗೂ ಕನ್ನಡವಾಗಿರಿ.

*ಬಿ.ಎಸ್.ಗವಿಮಠ, ಚಿಂತಕರು ಬೆಳಗಾವಿ*
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ