Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಾಳರಶ್ಮಿ ಕವನ ಸಂಕಲನ ಲೋಕಾಪ೯ಣೆ

 


ಬೆಳಗಾವಿ :
ತನ್ಮಯ ಚಿಂತನ ಚಾವಡಿ ವತಿಯಿಂದ ಮಹೇಶ ಪಿಯು ಕಾಲೇಜ್ ಮಹಾಂತೇಶ ನಗರ ದಲ್ಲಿ ದಿ 08.01.2024 ರಂದು ಡಾ. ಜಯಾನಂದ ಧನವಂತ ಅವರ ಕವನ ಸಂಕಲನವನ್ನು ನಿವೃತ್ತ ಪ್ರಾಚಾರ್ಯ ಎಸ್. ಆರ್. ಹಿರೇಮಠ ಬಿಡುಗಡೆ ಮಾಡಿದರು.

ಧನವಂತ ಅವರ ಬಾಳಿನಲ್ಲಿ ಅನುಭವದ ಕವನಗಳು ಮೂಡಿ ಬಂದಿವೆ. ಇವರಿಂದ ಇನ್ನೂ ಕೃತಿಗಳು ಬರಲಿ ಎಂದು ಹಾರೈಸಿದರು. ಪ್ರಾಚಾರ್ಯ ಮಂಜುನಾಥ ಭಟ್ ಕವನ ಸಂಕಲನ ಪರಿಚಯ ಮಾಡಿದರು. 201 ಕವನಗಳು ವಸ್ತು ವಿನ್ಯಾಸ, ಪದ ಬಳಕೆ .ಅಭಿವ್ಯಕ್ತಿಯ ರಸಭರಿತ ಪ್ರೇಮ ಕವನಗಳು,ಪರಿಸರ, ಶಿಕ್ಷಣ, ಕೊರೋನಾ.ಪಶು ಪಕ್ಷಿ, ಕೋವಿಡ್, ಹಬ್ಬಗಳು ಮುಂತಾದವುಗಳನ್ನು ಒಳಗೊಂಡಿವೆ. ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಕವಿಗಳು ಉತ್ತಮ ರೀತಿಯಲ್ಲಿ ಕವನ ಮೂಡಿ ಬಂದಿವೆ ಎಂದರು. ಮೃತ್ಯುಂಜಯಸ್ವಾಮಿಗಳು ಹಿರೇಮಠ ಸಾನ್ನಿಧ್ಯ ವಹಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸ ರಾ ಸುಳಕೂಡೆ ಅವರು ತನ್ಮಯ ಚಿಂತನ ಚಾವಡಿ ಕಾಯ೯ಗಳು ಹಾಗೂ ಡಾ ಜಯಾನಂದ ಧನವಂತರಿಂದ ಉತ್ತರೋತ್ತರವಾಗಿ ಕವನ ಸಂಕಲನಗಳು ಸಾರಸ್ವತ ಲೋಕಕ್ಕೆ ನೀಡಲೆಂದು ಹಾರೈಸಿದರು. ನಿವೃತ್ತ ನ್ಯಾಯಾಧೀಶ ಯಗೇಶ ಕರಗುದ್ರಿ ಮಾತನಾಡಿದರು. ಹಸಿರು ಕ್ರಾಂತಿ ದಿನಪತ್ರಿಕೆ ಸಂಪಾದಕ ವಿಜಯ ಮುಚಳಂಬಿ, ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಹಂಜಿ ಉಪಸ್ಥಿತರಿದ್ದರು. ರಶ್ಮಿ ಧನವಂತ ಪ್ರಕಾಶಕರು ಅನುಭಾವನಾ ಪ್ರಕಾಶನ ರಾಮತಿಥ೯ನಗರ, ಎಫ್ .ವೈ. ತಳವಾರ, ಬಿ.ಬಿ. ಮಠಪತಿ, ಎಸ್. ಎಸ್. ತಲ್ಲೂರ, ಶಿವಾನಂದ ತಲ್ಲೂರ, ಅಶೋಕ ಉಳಾಗಡ್ಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗದೀಶ, ಶಂಕರ, ಪ್ರವೀಣ, ವಾಣಿ, ಸಿದ್ದವ್ವ, ಶಕುಂತಲಾ, ಸವಿತಾ, ಜಗದೀಶ ಬಾಗನವರ, ಸಿ.ಕೆ. ಕಟಾಪುರಿಮಠ, ಬಿ.ಬಿ.ಕಮತೆ ಪಾಲ್ಗೊಂಡಿದ್ದರು. ಎಂ.ವೈ. ಮೆಣಸಿನಕಾಯಿ ನಿರೂಪಿಸಿದರು. ಬಾಳಗೌಡ ದೊಡಬಂಗಿ ವಂದಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ