Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಯೋಧ್ಯೆ ರಾಮ ಮಂದಿರದ ಅಮಂತ್ರಣ ಅಕ್ಷತಾ ಕಲಶ ಶುಕ್ರವಾರ ಬೆಳಗಾವಿಗೆ

ಬೆಳಗಾವಿ :
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರದಲ್ಲಿ ಜ. 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ರಾಮಜನ್ಮಭೂಮಿ ಟ್ರಸ್ಟ್ ಮೂಲಕ ಅಯೋಧ್ಯೆಯ ಪ್ರಭು ಶ್ರೀರಾಮನ ಸನ್ನಿಧಿಯಲ್ಲಿ ಪೂಜಿಸಲ್ಪಟ್ಟ ಆಮಂತ್ರಣ ಅಕ್ಷತ ಮನೆ ಮನೆ ತಲುಪಿಸುವ ಯೋಜನೆಯ ಭಾಗವಾಗಿ ಪವಿತ್ರ ಅಕ್ಷತಾ ಕಲಶ ರಾಮಭಕ್ತರ ಮೂಲಕ ಬೆಳಗಾವಿಯಲ್ಲಿ ಭವ್ಯ ಸ್ವಾಗತ
ಡಿ.8 ರಂದು ನಡೆಯಲಿದೆ.

ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಭಕ್ತಿ ಪೂರ್ವಕ ಸಂಜೆ 6.45 ಪೂಜೆ, ಆರತಿ ಸಲ್ಲಿಸಿ ಪಲ್ಲಕ್ಕಿ ಉತ್ಸವ, ರಾಮ ಜಪ, ಭಜನೆ ಕೀರ್ತನೆ ಸಂಕೀರ್ತನ ಯಾತ್ರೆಯ ಮೂಲಕ ರಾಮ ಭಕ್ತರು ಭವ್ಯ ಮೆರವಣಿಗೆ ಮೂಲಕ ತಂದು ವಿಶ್ವ ಹಿಂದು ಪರಿಷತ್ ಕಾರ್ಯಾಲಯ ಸಮರಸತಾ ಭವನದಲ್ಲಿ ಇರಿಸಲಾಗುವುದು.

ಬೆಳಗಾವಿಯ ಎಲ್ಲಾ ಶ್ರೀರಾಮ ಭಕ್ತರು ಆಮಂತ್ರಣದ ಪವಿತ್ರ ಅಕ್ಷತಾ ಕಲಶ ಭವ್ಯ ಸ್ವಾಗತ ಮಾಡುವ ಮೂಲಕ ಪ್ರಭು ಶ್ರೀರಾಮನ ಸೇವೆಯಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.

ರಂಗೋಲಿ ಹಾಕಿ ರಸ್ತೆ ಶೃಂಗರಿಸಬಹುದು. ಪುಷ್ಪಾರ್ಚನೆ ಮಾಡಬಹುದು, ದೇಶಭಕ್ತರ ಪೋಟೋ ಇಡಬಹುದು, ಆರತಿ ಮಾಡಬಹುದು.ಶಂಖನಾದ ಮಾಡಬಹುದು. ಪವಿತ್ರ ಕಲಶಕ್ಕೆ ಪ್ರತಿದಿನ 11ಹನುಮಾನ ಚಾಲಿಸಾ ಪಠಣ ಸಂಜೆ 7.30 ರಿಂದ 8.30 ರ ವರೆಗೆ ನಡೆಯುತ್ತದೆ.

ಭಜನೆ , ರಾಮಜಪ, ಸಂಕೀರ್ತನೆ, ಸಂಗೀತದ ಮೂಲಕ ಭಕ್ತರು ಪೂರ್ಣ ದಿನ ಸೇವೆ ಸಲ್ಲಿಸಿ ಈ ಪುಣ್ಯ ಕಾರ್ಯದಲ್ಲಿ ಸೇವೆ ಸಲ್ಲಿಸಬಹುದು. ಸೇವೆ ಸಲ್ಲಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಬಹುದು.

ಮಾಹಿತಿಗೆ ಜಿಲ್ಲಾ ಕಾರ್ಯದರ್ಶಿ
ಆನಂದ ಕರಲಿಂಗಣ್ಣವರ, ಜಿಲ್ಲಾ ಅಧ್ಯಕ್ಷರು, ಶ್ರೀಕಾಂತ ಕದಂ ಮೊಬೈಲ್ ಸಂಖ್ಯೆ
9448847604,9739097507
9945016501,8050999060,
916366316489, 8310225588 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ..
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ