ಬೆಳಗಾವಿ: ಜನಜೀವಾಳ ಜಾಲ : ಭಾರತದಲ್ಲಿ ಇಂದು ಸಾವಯವ ಕೃಷಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಆರೋಗ್ಯಕರ ಜೀವನ ನಡೆಸಲು ಈ ಕೃಷಿಯು ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಯಾಗಿ ಮಾರ್ಪಟ್ಟಿದೆ. ರೈತರೂ ಕೂಡ ಆತಂಕ ಪಡದೆ ಈ ಇಂತಹ ಕೃಷಿ ಪದ್ಧತಿಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾವಯವ ಕೃಷಿ ಪಂಡಿತ ಸುರೇಶ್ ದೇಸಾಯಿ ಬೇಡಕಿಹಾಳ ಹೇಳಿದರು.
ಬೆಳಗಾವಿಯ ಯಮಕನಮರಡಿ ಸಮೀಪದ ಮನಗುತ್ತಿಯ
ಮಂಗಲದೀಪ ವಿಹಾರಧಾಮ ದಲ್ಲಿ ರವಿವಾರ ನಡೆದ ಗೋ ಆಧಾರಿತ ಸಾವಯವ ಕೃಷಿ ಕಾರ್ಯಶಾಲೆ ಮಾತನಾಡುತ್ತಾ, ರೈತರು ಹಳೆಯ ಕೃಷಿ ಪದ್ಧತಿಯನ್ನು ಬಿಟ್ಟು ನಾವಿನ್ಯ ಮಾದರಿಯ ಉಪಯೋಗವನ್ನು ಕೈಗೊಂಡಾಗ ಉತ್ತಮ ಇಳುವರಿ ಪಡೆಯಬಹುದು ಎಂದು ಕರೆ ನೀಡಿದರು.
ಸಾವಯವ ಕೃಷಿ ತಜ್ಞ ಪ್ರಭು ನಿಲಜಕರ, ಹುಣಸವರಿ ಮಠ, ಕಾಕತಿ ಮಾರ್ಗದರ್ಶನ ನೀಡಿದರು. 200 ಕ್ಕೂ ಹೆಚ್ಚುರೈತ ಬಂಧುಗಳು ಇದರ ಪ್ರಯೋಜನ ಪಡೆದರು.
ಡಾ. ಶಿವಾಜಿ ಕಾಗಣೀಕರ, ಪ್ರವೀಣ್ ಖೋಡ, ಮಂಗಳದೀಪ ಕುಟುಂಬ, ರಾಹುಲ್ ಪಾಟೀಲ್, ಗಿರೀಶ ಹತ್ತರಕಿ, ಮಾರುತಿ ಸಾಮ್ರೇಕರ, ಅಮೃತ್ ಮುದ್ದಣ್ಣವರ ಹಾಗೂ ಗೆಳೆಯರ ಬಳಗ ಪಾಲ್ಗೊಂಡು ಈ ಕೃಷಿ ಕಾರ್ಯಕ್ರಮವನ್ನು ಗೊಳಿಸಿದರು.
