Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ 

ಮುಂಬೈ : ಸಮುದ್ರ ಮಟ್ಟ ಏರಿಕೆ ಮತ್ತು ಶಾಶ್ವತ ಜಲಾವೃತದ ಪರಿಣಾಮವಾಗಿ ಕೋಲ್ಕತ್ತಾ ಮತ್ತು ಮುಂಬೈನ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ತಕ್ಷಣದ ಅಪಾಯ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕಚೇರಿ ಬಿಡುಗಡೆ ಮಾಡಿರುವ ‘ಸಮುದ್ರ ಮಟ್ಟದ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದನ್ನು ಎದುರಿಸುವ ಮಾರ್ಗಗಳು’ (‘Challenges Related to Sea Level Rise and Ways and Approaches to Address It) ಎಂಬ ವರದಿಯಲ್ಲಿ ಈ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ವರದಿ ಪ್ರಕಾರ, ಸಮುದ್ರ ಮಟ್ಟ ಏರಿಕೆ ಇನ್ನು ಭವಿಷ್ಯದ ಸಮಸ್ಯೆಯಲ್ಲ. ಅದು ವರ್ತಮಾನವಾಗಿದ್ದು, ಈಗಾಗಲೇ ಜಗತ್ತಿನ ಹಲವೆಡೆ ಪರಿಣಾಮ ಬೀರುತ್ತಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಸಮುದ್ರದ ನೀರು ಒಳನಾಡಿನತ್ತ ನುಗ್ಗುತ್ತಿರುವುದರಿಂದ ಕರಾವಳಿ ನಗರಗಳ ರಸ್ತೆ, ಕಟ್ಟಡಗಳು, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಜಾಲ ಮತ್ತು ಇತರ ಮೂಲಸೌಕರ್ಯಗಳಿಗೆ ಹಾನಿಯಾಗುತ್ತಿದೆ. ಇದರಿಂದ ಜನರ ಜೀವನ, ಆರ್ಥಿಕತೆ ಮತ್ತು ಅಭಿವೃದ್ಧಿಯ ಮೇಲೂ ದೊಡ್ಡ ಪರಿಣಾಮ ಬೀಳುತ್ತಿದೆ.
ಅಮೆರಿಕದ ಮಿಯಾಮಿ ಮತ್ತು ನ್ಯೂಯಾರ್ಕ್‌ ನಗರಗಳು ಹಾಗೂ ಚೀನಾದ ಗ್ವಾಂಗ್‌ಝೌನಲ್ಲಿ ಕರಾವಳಿ ಮೂಲಸೌಕರ್ಯಗಳಿಗೆ ಲಕ್ಷಾಂತರ ಕೋಟಿ ಡಾಲರ್‌ಗಳ ಆರ್ಥಿಕ ನಷ್ಟದ ಅಪಾಯ ಎದುರಾಗಿದ್ದರೆ, ದಕ್ಷಿಣ ಏಷ್ಯಾದಲ್ಲಿ ಸಮಸ್ಯೆಯ ಸ್ವರೂಪವೇ ಬೇರೆ ಎಂದು ವರದಿ ಹೇಳಿದೆ. ಭಾರತದ ಮುಂಬೈ ಮತ್ತು ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ಢಾಕಾದಲ್ಲಿ 1.4 ಕೋಟಿಗೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಇಲ್ಲಿ ಆರ್ಥಿಕ ನಷ್ಟಕ್ಕಿಂತ ಜನರ ಸ್ಥಳಾಂತರ ಮತ್ತು ನಿರಾಶ್ರಿತ ಸಮಸ್ಯೆಯೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ವರದಿ ತಿಳಿಸಿದೆ.

ಸಮುದ್ರ ಮಟ್ಟ ಏರಿಕೆ ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಕರಾವಳಿ ಪ್ರದೇಶಗಳ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಳು ಹಾನಿಗೊಳಗಾಗುತ್ತಿರುವುದರಿಂದ ನೀರಿನಿಂದ ಹರಡುವ ರೋಗಗಳ ಅಪಾಯ ಹೆಚ್ಚುತ್ತಿದೆ. ಜೊತೆಗೆ ಮಾನಸಿಕ ಒತ್ತಡ, ಅಪಾಯ ಮತ್ತು ಜೀವಹಾನಿಯ ಸಾಧ್ಯತೆಯೂ ಹೆಚ್ಚುತ್ತಿದೆ. ಸಮುದ್ರ ಮಟ್ಟ ಏರಿಕೆ ಮತ್ತು ಭೂ ಕುಸಿತದ ಪರಿಣಾಮವಾಗಿ ಪ್ರವಾಹಗಳ ಅಪಾಯ ಹೆಚ್ಚುತ್ತಿದ್ದು, ಕರಾವಳಿ ಪರಿಸರ ವ್ಯವಸ್ಥೆಗಳು ಹಾಳಾಗುತ್ತಿವೆ. ಇದರಿಂದ ಮೀನುಗಾರಿಕೆ ಸೇರಿದಂತೆ ಹಲವು ಜೀವನೋಪಾಯಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದುವರದಿ ಹೇಳಿದೆ.
ಉಪ್ಪುನೀರು ಒಳನಾಡಿನತ್ತ ನುಗ್ಗುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಅಂತರ್ಜಲ ಉಪ್ಪಾಗುತ್ತಿದ್ದು, ಬಾವಿಗಳ ನೀರು ಕುಡಿಯಲು ಅಯೋಗ್ಯವಾಗುತ್ತ ಸಾಗಿದೆ. ಕೃಷಿ ಭೂಮಿಗಳ ಮೇಲೂ ಇದರ ಪರಿಣಾಮ ಬೀಳುತ್ತಿದ್ದು, ಬೆಳೆ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ. ಚಂಡಮಾರುತಗಳ ಸಮಯದಲ್ಲಿ ಸಮುದ್ರದ ನೀರು ಭೂಭಾಗಕ್ಕೆ ನುಗ್ಗುವುದರಿಂದ ನೀರಿನ ಮೂಲಗಳು ಇನ್ನಷ್ಟು ಕಲುಷಿತಗೊಳ್ಳುತ್ತಿವೆ.

ಈ ಸಮಸ್ಯೆಗೆ ಪ್ರಮುಖ ಕಾರಣ ಮಾನವ ಚಟುವಟಿಕೆಗಳಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ ಏರಿಕೆ ಎಂದು ವರದಿ ಹೇಳಿದೆ. ಭೂಮಿಯ ಉಷ್ಣಾಂಶ ಹೆಚ್ಚಾಗುತ್ತಿದ್ದಂತೆ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಜೊತೆಗೆ ಸಮುದ್ರದ ನೀರು ಬಿಸಿಯಾಗುವುದರಿಂದ ಅದರ ಗಾತ್ರವೂ ಹೆಚ್ಚಾಗುತ್ತದೆ. ಈ ಎರಡೂ ಕಾರಣಗಳಿಂದ ಸಮುದ್ರದ ಮಟ್ಟ ನಿರಂತರವಾಗಿ ಏರುತ್ತಿದೆ. 2014ರಿಂದ 2023ರವರೆಗೆ ಜಾಗತಿಕ ಸಮುದ್ರ ಮಟ್ಟ ವರ್ಷಕ್ಕೆ ಸರಾಸರಿ 4.7 ಮಿಲಿಮೀಟರ್‌ಗಳಷ್ಟು ಏರಿಕೆಯಾಗಿದೆ. 2024ರಲ್ಲಿ ಮಾತ್ರ 5.9 ಮಿಲಿಮೀಟರ್ ಏರಿಕೆಯಾಗಿದ್ದು, ಇದು ಹೊಸ ದಾಖಲೆಯಾಗಿದೆ. ಎಲ್‌ನಿನೋ ಪರಿಣಾಮ ಮತ್ತು ಅಸಾಮಾನ್ಯ ಸಮುದ್ರ ಉಷ್ಣತೆಯಿಂದ ಈ ಏರಿಕೆಯ ವೇಗ ಮತ್ತಷ್ಟು ಹೆಚ್ಚಿದೆ. ಕೆಲವು ಪ್ರದೇಶಗಳಲ್ಲಿ ಸಮುದ್ರದ ತಾಪಮಾನ ಕಳೆದ 4,000 ವರ್ಷಗಳಲ್ಲಿ ಕಂಡುಬಂದಿಲ್ಲದಷ್ಟು ವೇಗದಲ್ಲಿ ಏರಿಕೆಯಾಗುತ್ತಿದೆ ಎಂದು ವರದಿ ಎಚ್ಚರಿಸಿದೆ.
ಪ್ರಸ್ತುತ ವಿಶ್ವದ ಸುಮಾರು 77 ಕೋಟಿ ಜನರು, ಅಂದರೆ ಜಾಗತಿಕ ಜನಸಂಖ್ಯೆಯ ಸುಮಾರು 10 ಪ್ರತಿಶತ ಜನರು, ಸಮುದ್ರ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರು ನೇರವಾಗಿ ಸಮುದ್ರ ಮಟ್ಟ ಏರಿಕೆಯ ಅಪಾಯ ಎದುರಿಸುತ್ತಿದ್ದಾರೆ.

ಈ ಬೆಳವಣಿಗೆ ಪರಿಸರದ ಸಮಸ್ಯೆ ಮಾತ್ರವಲ್ಲದೆ ಕೃಷಿ, ವ್ಯಾಪಾರ, ಪ್ರವಾಸೋದ್ಯಮ, ಸಾಂಸ್ಕೃತಿಕ ಪರಂಪರೆ ಮತ್ತು ಜನರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ.
ಸಮುದ್ರ ಮಟ್ಟ ಏರಿಕೆಯ ಅತ್ಯಂತ ಗಂಭೀರ ಅಂಶವೆಂದರೆ, ಒಮ್ಮೆ ಅದು ಏರಿದ ಬಳಿಕ ಅದನ್ನು ಹಿಂದಿನ ಸ್ಥಿತಿಗೆ ತರುವುದು ಸುಲಭವಲ್ಲ. ಆದ್ದರಿಂದ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಅಪಾಯದಲ್ಲಿರುವ ಪ್ರದೇಶಗಳಿಗೆ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವುದು, ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಅಗತ್ಯ ಹಣಕಾಸು ನೆರವು ಒದಗಿಸುವುದು ಮುಖ್ಯವಾಗಿದೆ. ಇಲ್ಲವಾದರೆ ಮುಂದಿನ ದಶಕಗಳಲ್ಲಿ ಕೋಟ್ಯಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ ತಾಯಿ ಗದರಿದ ಕೋಪಕ್ಕೆ ಕೆರೆಗೆ ಹಾರಿದ 14 ವರ್ಷದ ಮಗಳು ; ರಕ್ಷಿಸಲು ಹೋದ ತಾಯಿಯೂ ಮುಳುಗಿ ಸಾವುಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ…ಎಸ್‌ಸಿಒ ಶೃಂಗಸಭೆಯ ಮುಖ್ಯಸ್ಥರ ಗ್ರುಪ್‌ ಫೋಟೊದಿಂದ ಪ್ರಧಾನಿ ಮೋದಿ ಫೋಟೊ ಕಟ್‌ ಮಾಡಿ ಪ್ರಕಟಿಸಿದ ಪಾಕಿಸ್ತಾನ ಪಿಎಂಒ !ನೇಪಾಳದಲ್ಲಿ ದುರಂತ ; ಬಿಹಾರದಲ್ಲಿ ಆತಂಕ..! ಪ್ರವಾಹದಲ್ಲಿ ಬಂದ ಅಪರಿಚಿತ ಮೀನುಗಳು ಜೀವಕ್ಕೆ ಕಂಟಕ ? ಸರ್ಕಾರದ ಎಚ್ಚರಿಕೆಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಅವಕಾಶಕ್ಕಾಗಿ ಕಾಯಬೇಡಿ, ಅವಕಾಶ ಸೃಷ್ಟಿಸುವ ಮಹಿಳೆಯರಾಗಿ-ಡಾ. ಪೂಜಾ ಹಲ್ಯಾಳಅವಕಾಶಕ್ಕಾಗಿ ಕಾಯಬೇಡಿ, ಅವಕಾಶ ಸೃಷ್ಟಿಸುವ ಮಹಿಳೆಯರಾಗಿ-ಡಾ. ಪೂಜಾ ಹಲ್ಯಾಳಅವಕಾಶಕ್ಕಾಗಿ ಕಾಯಬೇಡಿ, ಅವಕಾಶ ಸೃಷ್ಟಿಸುವ ಮಹಿಳೆಯರಾಗಿ-ಡಾ. ಪೂಜಾ ಹಲ್ಯಾಳ