ಚೆನ್ನೈ : ಜಪಾನಿಯರು ವಿಶ್ವಶಾಂತಿಗಾಗಿ ತಮಿಳುನಾಡಿನ ತಿರುವಣೈಕೋಲಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಪಾನಿನಿಂದ ಆಗಮಿಸಿದ ಸುಮಾರು 120 ಮಂದಿ ವಿಶ್ವ ಶಾಂತಿಗಾಗಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಯಾಗ ಮಾಡಿದ್ದಾರೆ.
ಸಯೋಕಾ ಕಿಮುರಾ ಎಂಬವರು ಮಾತನಾಡಿ, ವಿಶ್ವಶಾಂತಿಗಾಗಿ ನಾವು ಜಪಾನಿನಿಂದ ಬಂದ ಸುಮಾರು 120 ಮಂದಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಯಾಗ ಮಾಡಿದ್ದೇವೆ. ನಮ್ಮ ಇತಿಹಾಸವನ್ನು ಗಮನಿಸಿದರೆ ಜಪಾನೀಸ್ ಹಾಗೂ ತಮಿಳು ನಡುವೆ ಸಂಪರ್ಕ ಇರುವುದು ತಿಳಿದುಬರುತ್ತದೆ ಎಂದರು.
ದೇವಸ್ಥಾನದ ವಾಸ್ತುಶಿಲ್ಪವನ್ನು ಕಂಡು ನಾವು ಬೆರಗಾಗಿದ್ದೇವೆ. ನಾವು ಇಲ್ಲಿ 100ಕ್ಕೂ ಅಧಿಕ ಆಶ್ರಮಕ್ಕೆ ಭೇಟಿ ನೀಡಿದ್ದೇವೆ. ಎರಡು ದಿನಕ್ಕೊಂದು ಪೂಜೆ, ಅಭಿಷೇಕ, ಯಾಗ ಮಾಡಿಸುತ್ತಿದ್ದೇವೆ. ಪಾಂಡಿಚೇರಿಯಲ್ಲಿ ಹೊಸ ಆಶ್ರಮವನ್ನು ಕಟ್ಟುವ ಕನಸಿದೆ. ಪಾಂಡಿಚೇರಿಯಲ್ಲಿ ಜಪಾನಿನ ಸಮುದಾಯದಿಂದ ಹೊಸ ಆಶ್ರಮವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಎಂದು ತಿಳಿಸಿದ್ದಾರೆ.