ಬೆಳಗಾವಿ: ಕಾರು ಮರಕ್ಕೆ ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
ಈ ದುರ್ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಅಳ್ನಾವರ- ರಾಮನಗರ ರಾಜ್ಯ ಹೆದ್ದಾರಿ ಮಾರ್ಗವಾಗಿ ಗೋವಾಕ್ಕೆ ಅಳ್ನಾವರ ಕಡೆಯಿಂದ ರಾಮನಗರದ ಕಡೆಗೆ ಬಂದ ಕಿಯಾ ವಾಹನದ ಬಲಗಡೆ ಟಯರ್ ಒಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಬೆಂಗಳೂರು ಕೋರಮಂಗಲದ ಅಕ್ಷಯ ಅವರ ಪುತ್ರ ಗುಣವ (10) ಅವರ ಗೆಳೆಯನ ಮಗಳು ಸವ್ಯಾ (10) ವರ್ಷ ಇವರಿಗೆ ತೀವ್ರ ಗಾಯವಾಗಿದೆ.
ಅಕ್ಷಯ ಅವರ ಮಗ ಹಿಯಾಂಶು (9) ತಲೆಗೆ, ಎಡಗಾಲಿಗೆ ಭಾರಿ ಗಾಯವಾಗಿ ಮರಣ ಹೊಂದಿದ್ದಾನೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


