ಮುನವಳ್ಳಿ: ಪಟ್ಟಣದ ವಿಠಲ ಮಂದಿರದಿಂದ ಜೂನ್ 16 ರಂದು 31ನೇ ಫಂಡರಾಪುರ ಪಾದಯಾತ್ರೆ ಪ್ರಾರಂಭವಾಗುವುದು. ಆಳಂದಿಯವರೆಗೆ ವಾಹನಗಳ ಮೂಲಕ ಹೊರಟು ಜೂ 19 ಕ್ಕೆ ಅಲ್ಲಿ ವಾಸ್ತವ್ಯ ಮಾಡಲಾಗುವುದು. ಜೂ. 20 ಕ್ಕೆ ಆಳಂದಿಯಿಂದ ಪಾದಯಾತ್ರೆ ಮೂಲಕ ಪಂಢರಾಪುರವನ್ನು ಜುಲೈ 5 ರಂದು ತಲುಪಲಾಗುವುದು.
ಜುಲೈ 6 ರಂದು ಆಷಾಢ ಏಕಾದಶಿ ಮುಗಿಸಿ ಜುಲೈ 8 ರಂದು ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ವಾಹನ ಮೂಲಕ ಬರಲಾಗುವುದು. ಪ್ರತಿವರ್ಷದಂತೆ ಈ ವರ್ಷವೂ ಜ್ಞಾನೇಶ್ವರ ಮಹಾರಾಜರ ಆಷಾಢಿವಾರಿ ಪಾಲಕಿ ಮಹೋತ್ಸವ ಜರುಗುವುದು. ತಾಳ, ಮೇಳ, ತಮ್ಮ ಸಲಕರಣೆ ಜೊತೆಗೆ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಪ್ರತಿಗ್ರಾಮಗಳಲ್ಲಿ ಅಲೋಪಹಾರ, ಊಟ, ರಾತ್ರಿ ವಾಸ್ತವ್ಯದ ವ್ಯವಸ್ಥೆ ಇರುತ್ತದೆ ಮತ್ತು ಪ್ರಯಾಣದ ಉದ್ದಕ್ಕೂ ಕೀರ್ತನೆ, ಹರಿನಾಮ ಸಂಕೀರ್ತನೆ ಹಾಗೂ ನೀತಿ ಬೋಧಕ ಕಥೆ ವಿವರಣೆ ಜರುಗುವುದು. ಒಟ್ಟು 23 ದಿನದ ಪಾದಯಾತ್ರೆ ಇರುತ್ತದೆ.
ಪಾದಯಾತ್ರೆ ಮಾಡಲು ಇಚ್ಛಿಸುವರು ಜೂನ 15 ರೊಳಗಾಗಿ ಅಂಗದ ಅರವಿಂದ ರೇಣುಕೆ ಮೊ: 7204780158 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.