ಬೆಳಗಾವಿ : ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಗುರುಪೂರ್ಣಿಮೆ ಆಚರಿಸಲಾಯಿತು. ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಸಮಾಜ ಸೇವಕಿ ಹಾಗೂ ಬಿಜೆಪಿ ನಾಯಕಿ ಜ್ಯೋತಿ ದೀಪಕ್ ಶೆಟ್ಟಿ ಅವರು ಮಾತನಾಡಿ,
ಇಂದು ನಾವು ಗುರು ಪೂರ್ಣಿಮೆಯನ್ನು ಆಚರಿಸುತ್ತಿದ್ದೇವೆ, ಇದು ನಮ್ಮ ಜೀವನದಲ್ಲಿ ಮಾರ್ಗದರ್ಶಕರಾದ ಗುರುಗಳನ್ನು ಗೌರವಿಸುವ ದಿನ. ಗುರುಗಳು ನಮ್ಮ ಜೀವನದಲ್ಲಿ ಜ್ಞಾನ, ವಿವೇಕ ಮತ್ತು ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ಅವರು ನಮ್ಮ ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತಾರೆ.
ಗುರುಗಳು ನಮಗೆ ವಿದ್ಯೆಯನ್ನು ನೀಡುವುದಲ್ಲದೆ, ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಅವರು ನಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಗೆಡಹುತ್ತಾರೆ ಮತ್ತು ನಮ್ಮನ್ನು ಸಮಾಜಕ್ಕೆ ಉಪಯುಕ್ತರನ್ನಾಗಿ ಮಾಡುತ್ತಾರೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ನಾವು ನಮ್ಮ ಗುರುಗಳಿಗೆ ಯಾವಾಗಲೂ ಕೃತಜ್ಞರಾಗಿರಬೇಕು.ಅವರ ಮಾರ್ಗದರ್ಶನ ಮತ್ತು ಪ್ರೀತಿ ನಮಗೆ ಸದಾ ಬೇಕು. ಈ ದಿನ ತಾವೆಲ್ಲ ವಿಧದ ವೇಶಭೂಷಣ ಧರಿಸಿ ವಿವಿಧ ಸ್ಪರ್ಧೆಗಳಿಗೆ ಭಾಗವಹಿಸುತ್ತಿದ್ದೀರಿ. ಇದನ್ನು ನೋಡಿ ತುಂಬಾ ಖುಷಿ ಅನಿಸುತ್ತಿದೆ. ಇಂತಹ ವಿಶೇಷ ಪ್ರತಿಭೆಗಳಿಗೆ ಬೆಂಬಲ ನೀಡಿ ಆಸಕ್ತಿಯನ್ನು ಬೆಳೆಸಿ ವೇದಿಕೆಗೆ ಅವಕಾಶ ಕಲ್ಪಿಸಿದ್ದು ನಿಮ್ಮ ಗುರುಗಳು. ಇಂಥ ಪ್ರತಿಭೆಗಳು ನೀವು ಸಮಾಜಕ್ಕೆ ಮತ್ತು ದೇಶಕ್ಕೆ ಒಂದು ಸಂಪನ್ಮೂಲವಾಗುವುದರೊಂದಿಗೆ ನಮ್ಮ ಭಾರತಮಾತೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ, ಮಾನವೀಯ ಮೌಲ್ಯಗಳನ್ನು ಮತ್ತು ದೇಶಭಕ್ತಿಯನ್ನು ಬೆಳೆಸಲು ತಾವೆಲ್ಲರೂ ಮುಂದಾಗಬೇಕು. ಗುರು ಪೂರ್ಣಿಮೆಯ ಈ ಶುಭ ಸಂದರ್ಭದಲ್ಲಿ, ನಿಮ್ಮೆಲ್ಲರಿಗೂ ನಿಮ್ಮ ಗುರುಗಳನ್ನು ಗೌರವಿಸುವ ಮತ್ತು ಅವರ ಆಶೀರ್ವಾದ ಪಡೆಯುವ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಗಳಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಗುರುಗಳು ನಮ್ಮ ಜೀವನದಲ್ಲಿ ಜ್ಞಾನ, ವಿವೇಕ, ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತಾರೆ. ಗುರುಗಳು ವಿದ್ಯೆಯನ್ನು ನೀಡುವುದಲ್ಲದೆ, ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ : ಜ್ಯೋತಿ ದೀಪಕ ಶೆಟ್ಟಿ ಅಭಿಮತ
