ಬೆಳಗಾವಿ: ಮಹಾನಗರ ಪಾಲಿಕೆಯಿಂದ ಸಮುದಾಯದ ಭವನ ನಿರ್ಮಾಣ ವಿಷಯದಲ್ಲಿ ಮಂಗಳವಾರ ಗುಂಪು ಘರ್ಷಣೆ ಉಂಟಾಗಿದೆ. ತುಸು ಕಲ್ಲು ತೂರಾಟ ನಡೆದಿದೆ.
ಬೆಳಗಾವಿ ಗಣಾಚಾರಿ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ರಾಜು ತಳವಾರ, ಸುದೇಶ ಲಾಠೆ ಎಂಬವರ ತಲೆಗೆ ಗಾಯವಾಗಿದೆ. ಸ್ಥಳೀಯರು ಇಬ್ಬರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಉಂಟಾಗಿದೆ.
ಮಹಾನಗರ ಪಾಲಿಕೆಯ ಜಾಗವನ್ನು ಕೆಲವರು ಕಬ್ಜಾ ಮಾಡಿದ್ದು, ಅತಿಕ್ರಮಣ ತೆರವುಗೊಳಿಸಿ ಭವನ ನಿರ್ಮಾಣಕ್ಕಾಗಿ ಪಾಲಿಕೆಯಿಂದ ಸರ್ವೇ ಕಾರ್ಯ ನಡೆದಾಗ ಗಲಾಟೆ ನಡೆದಿದೆ. ಪಾಲಿಕೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಿದ್ದರು. ಆಗ ಕೆಲವರಿಂದ ಇವರಿಬ್ಬರ ಮೇಲೆ ಮೇಲೆ ಹಲ್ಲೆ ನಡೆದಿದೆ.
ಹೊರಗಡೆಯಿಂದ ಜನರು ಬಂದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಖಡೇಬಜಾರ ಪೊಲೀಸ್ ಠಾಣೆ ಸನಿಹವೇ ಘಟನೆ ನಡೆದಿದೆ.