ಧಾರವಾಡ: ನರೇಂದ್ರ ಗ್ರಾಮದಲ್ಲಿ ಶನಿವಾರ ರಾತ್ರಿ ಎರಡು ಓಣಿಗಳ ಗಣೇಶ ಮೂರ್ತಿಗಳ ವಿಸರ್ಜನೆ ಶೋಭಾಯಾತ್ರೆ ಸಂದರ್ಭದಲ್ಲಿ ಡಿ.ಜೆ ಸಂಗೀತ ವಿಚಾರದಲ್ಲಿ ಯುವಕರು ಜಗಳಕ್ಕೆ ಮುಂದಾದಾಗ ಪೋಲೀಸರು ಲಾಠಿ ಬೀಸಿ ಚದುರಿಸಿದ್ದಾರೆ.
ಪೋಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಂತೆ ಜನರು ಓಡಿದ್ದಾರೆ. ಕೆಲವರಿಗೆ ಲಾಠಿ ಹೊಡೆತ ಬಿದ್ದಿವೆ.
ಎರಡೂ ಮೆರವಣಿಗೆಗಳು ಗ್ರಾಮದ ವೃತ್ತದ ಬಳಿ ಬಂದಾಗ ಯವಕರು ಡಿ.ಜೆ ಸಂಗೀತ ವಿಚಾರದಲ್ಲಿ ಸ್ಪರ್ಧೆಗೆ ಮುಂದಾಗಿ ಜಗಳವಾಡುವ ಹಂತಕ್ಕೆ ತಲುಪಿದರು. ಲಾಠಿ ಬೀಸಿ ಜನರನ್ನು ಚದುರಿಸಿದೆವು. ಎರಡೂ ಗಣಪತಿಗಳನ್ನು ವ್ಯವಸ್ಥಿತವಾಗಿ ವಿಸರ್ಜನೆ ಮಾಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.