ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳಗಾವಿ ನಗರದ ಘಟಕದ ವತಿಯಿಂದ ಗುರುವಾರ ಸೆಪ್ಟೆಂಬರ್ 4 ರಂದು ನಗರದ ವಿವಿಧ 25 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಜರುಗಲಿದೆ.
ಕಣಬರ್ಗಿಯ ಕುಂಬಾರಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳ ಮತ್ತು ಶಹಾಪುರದ ಜೇಡಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳದಲ್ಲಿ ಗುರುವಾರ ಸಂಜೆ ೬:೦೦ಕ್ಕೆ ಏಕಕಾಲದಲ್ಲಿ ಪ್ರತ್ಯೇಕವಾಗಿ ಎರಡು ತಂಡಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಘೋಷ (ಸಂಗೀತ ವಾದ್ಯ) ನುಡಿಸುವುದರ ಮೂಲಕ ಗಣೇಶ ವಂದನ ಕಾರ್ಯಕ್ರಮ ಪ್ರಾರಂಭವಾಗುವುದು.
ನಂತರ ಮೊದಲ ತಂಡವು ರಾಮನಗರ, ವೈಭವ ನಗರ (ಗಣಪತಿ ಮಂದಿರ), ಬಸವ ಕಾಲನಿ, ಕುಮಾರಸ್ವಾಮಿ ಲೇಔಟ್, ಗಣೇಶ ನಗರ, ಚವ್ಹಾಟಗಲ್ಲಿ, ಗಣಾಚಾರಿ ಗಲ್ಲಿ, ಗೋಂಧಳಿ ಗಲ್ಲಿ ಗಣೇಶ ವಂದನ ಜರುಗುವುದು. ಎರಡನೇ ತಂಡವು ವಿಠ್ಠಲ ದೇವಗಲ್ಲಿ, ವರದಪ್ಪಗಲ್ಲಿ, ಜುನೆ ಬೆಳಗಾವಿ, ಕಾರಬಾರ್ಗಲ್ಲಿ, ಸಂಭಾಜಿ ನಗರ (ಯಳ್ಳೂರ ಕ್ರಾಸ್), ಅನಗೋಳದ ಕನಕದಾಸ ಕಾಲನಿ, ಅನಗೋಳದ ಸಂಭಾಜಿ ಚೌಕ್, ಟಿಳಕವಾಡಿಯ ಮೊದಲ ರೈಲ್ವೆ ಗೇಟ್, ಕ್ಯಾಂಪಿನ ಪೊಲೀಸ್ ಠಾಣೆ ಮತ್ತು ತೆಲುಗು ಕಾಲನಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಗಣೇಶ ವಂದನ ಜರುಗುವುದು.
ಎರಡು ತಂಡಗಳು ಒಗ್ಗೂಡಿ ಖಡೇಬಜಾರ, ಗಾಂಧಿನಗರ, ಕಾಮತಗಲ್ಲಿ, ಖಾಂದಾ ಮಾರ್ಕೆಟ್, ತಿಲಕಚೌಕ್, ತಹಶೀಲ್ದಾರ ಗಲ್ಲಿ ಮತ್ತು ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆ (ಪ್ರಕಾಶ ಟಾಕೀಸ್ ಹತ್ತಿರ) ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಗಣೇಶ ವಂದನ ಸಲ್ಲಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಮಿತ್ ಮೊ: ೮೩೧೦೧೦೦೩೫೮ ಅಥವಾ ಅರುಣ ಮೊ ೯೭೩೮೨೨೪೩೬೮ ಅವರಿಗೆ ಸಂಪರ್ಕಿಸಬಹುದು.