ಬೆಳಗಾವಿ : ಮಂಗಳೂರು ಕರ್ನಾಟಕ ರಾಜ್ಯ ಸಾರಿಗೆಯಿಂದ ಬೆಳಗಾವಿ ಜಿಲ್ಲೆಯ ಗಣಿಕೊಪ್ಪ ಗ್ರಾಮಕ್ಕೆ ನೂತನವಾಗಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಈ ಬಸ್ ಬೆಳಿಗ್ಗೆ 5:00 ಗಂಟೆಗೆ ಮಂಗಳೂರಿನಿಂದ ಹೊರಟು ಸಾಯಂಕಾಲ 7:00 ಗಂಟೆಗೆ ಗಣಿಕೊಪ್ಪ ತಲುಪಲಿದೆ. ಪುನಃ ಬೆಳಗ್ಗೆ 6:00 ಗಂಟೆಗೆ ಗಣಿಕೊಪ್ಪದಿಂದ ಹೊರಟು ಸಾಯಂಕಾಲ 7:00 ಗಂಟೆಗೆ ಮಂಗಳೂರು ತಲುಪಲಿದೆ. ಈ ಬಸ್ ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ, ಅಂಕೋಲಾ, ಧಾರವಾಡ, ಸವದತ್ತಿ, ಬೈಲಹೊಂಗಲ, ಬಾಗೇವಾಡಿ ಮಾರ್ಗವಾಗಿ ಸಂಚರಿಸಲಿದೆ. ಇಂದು ಸಂಜೆ ಮಂಗಳೂರಿನಿಂದ ಗಣಿಕೊಪ್ಪ ಗ್ರಾಮಕ್ಕೆ ಬಂದ ಬಸ್ ಗೆ ಗಣಿಕೊಪ್ಪ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಈ ಬಸ್ ಸೌಲಭ್ಯವನ್ನು ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.