ಬೆಳಗಾವಿ: ತನಗೆ ಕಚ್ಚಿದ ಹಾವಿನ ಸಮೇತ ವ್ಯಕ್ತಿಯೊಬ್ಬರು ಬಿಮ್ಸ್ ಆಸ್ಪತ್ರೆಗೆ ಓಡೋಡಿ ಬಂದ ಘಟನೆ ಬೆಳಗಾವಿಯಲ್ಲಿ ಮಂಗಳವಾರ ನಡೆದಿದೆ.
ಬೆಳಗಾವಿ ತಾಲೂಕು ಅಂಬೆವಾಡಿಯಲ್ಲಿ ರೈತರೊಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಡಿದಿದೆ. ತಕ್ಷಣ ತಡ ಮಾಡದ ಯಲ್ಲಪ್ಪ ಗಯರವ ಎಂಬ ಈ ರೈತರು ತಮಗೆ ಕಚ್ಚಿದ ಹಾವನ್ನು ಬಾಟಲಿಗೆ ಹಾಕಿಕೊಂಡು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ. ವಿಷಕಾರಿ ಹಾವು ಕಡಿದ ಹಿನ್ನೆಲೆಯಲ್ಲಿ ಯಲ್ಲಪ್ಪ ಅವರಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.
ತನಗೆ ಕಚ್ಚಿದ ಹಾವನ್ನೇ ಬಾಟಲಲ್ಲಿ ಹಾಕಿಕೊಂಡ ಆಸ್ಪತ್ರೆಗೆ ಓಡೋಡಿ ಬಂದ ರೈತ..!
