ಖಾನಾಪುರ : ಖಾನಾಪುರ ತಾಲೂಕಿನ ಘಷ್ಟೋಳಿ ದಡ್ಡಿ ಗ್ರಾಮದಲ್ಲಿ ಶ್ರೀ ಜೈ ಹನುಮಾನ್ ದೇವರ ಜಾತ್ರಾ ಉತ್ಸವ – 2026 ಅತ್ಯಂತ ಭಕ್ತಿಪೂರ್ವಕ ವಾತಾವರಣದಲ್ಲಿ ಉತ್ಸಾಹಭರಿತವಾಗಿ ವಿಜೃಂಭಣೆಯಿಂದ ನೆರವೇರಿತು.
ಈ ಸಮಾರಂಭದಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ಭಾಗವಹಿಸಿ ಶ್ರೀ ಹನುಮಾನ್ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು. ಅವರೊಳ್ಳಿ ಮಠದ ಪರಮ ಶ್ರೀ ಚನ್ನ ಬಸವ ದೇವರು, ಹಿಡಕಲ್ ಮಠದ ಪರಮ ಪೂಜ್ಯರು, ಮುರಕವಾಡ ಮಠದ ಪರಮ ಪೂಜ್ಯರು ಸೇರಿದಂತೆ ಗ್ರಾಮಸ್ಥರು, ಹಿರಿಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.


