ಬೆಳಗಾವಿ: ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಅಪ್ಪಣ್ಣ ಪೂಜಾರ (61)ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಗೋಕಾಕ ತಾಲೂಕು ಮಸರಗುಪ್ಪಿ ಗ್ರಾಮದವರಾದ ಅಪ್ಪಣ್ಣ ಪೂಜಾರ ಅವರು ಕಳೆದ 32 ವರ್ಷಗಳಿಂದ ಆರ್ಎಲ್ಎಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸರಳ ಸಜ್ಜನಿಕೆ, ನಯ ವಿನಯ ವ್ಯಕ್ತಿತ್ವದ ಅವರು ಅಪಾರ ಸ್ನೇಹಿತ ಬಳಗದ ಜೊತೆಗೆ ಒಡನಾಟ ಹೊಂದಿದ್ದರು.
ಸಹದ್ಯೋಗಿ ಮಿತ್ರ ಪ್ರೊ.ಅಪ್ಪಣ್ಣ ಪೂಜಾರ್ ನಮ್ಮನ್ನು ಅಗಲಿದ ಸುದ್ದಿ ತಿಳಿಸಲು ವಿಷಾದವೆನಿಸುತ್ತಿದೆ. ಸ್ಫುರದ್ರೂಪಿ ಹಾಗೂ ಸ್ನೇಹಮಯಿ ಸ್ವಭಾವದ ಅಪ್ಪಣ್ಣ ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಒಪ್ಪಿಕೊಳ್ಳುತ್ತಿದ್ದರು ಮತ್ತು ಅಪ್ಪಿಕೊಳ್ಳುತ್ತಿದ್ದರು. ಪರರನ್ನು ನಿಂದಿಸುವ, ದ್ವೇಷಿಸುವ ಮಾತುಗಳನ್ನು ಅವರಿಂದ ನಾವೆಂದೂ ಕೇಳಲಿಲ್ಲ. ಸದಾ ಹಸನ್ಮುಖಿ. ಯಾರಿಗೂ ಕೇಡನ್ನು ಬಯಸದವ. RLS ಕಾ ಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಎಲ್ಲರೂ ಮೆಚ್ಚುವಂತೆ ಸೇವೆ ಸಲ್ಲಿಸಿ ವರ್ಷದ ಹಿಂದಷ್ಟೇ ನಿವೃತ್ತಿ ಪಡೆದ ಅಪ್ಪಣ್ಣ ಪೂಜಾರ್ ಇಷ್ಟು ಬೇಗ ನಮ್ಮನ್ನು ಅಗಲಿದ್ದು ನಂಬಲು ಸಾಧ್ಯವಾಗುತ್ತಿಲ್ಲ. ಒಳ್ಳೆಯವರನ್ನು ದೇವರು ಬೇಗ ಕರೆಸಿಕೊಳ್ಳುತ್ತಾನೆ ಎಂಬ ಮಾತು ನಿಜವಾಗಿದೆ ಎಂದು ಅವರ ಆಪ್ತ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.


