ಬೆಳಗಾವಿ : ಗೋಕಾಕನ ಸುಪ್ರಸಿದ್ಧ ಕಲಬುರ್ಗಿ ಕರದಂಟು ಮತ್ತು ಕಲಬುರ್ಗಿ ಹೋಟೆಲ್ ಮಾಲಿಕ ಮಹೇಶ ಮುರಿಗೆಪ್ಪ ಕಲಬುರ್ಗಿ (69) ರವಿವಾರ ನಿಧನರಾದರು.
ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ರವಿವಾರ ನಿಧನರಾಗಿದ್ದಾರೆ.
ಅವರು ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಜ್ಞಾನ ಮಂದಿರ ಬಳಿ ಇರುವ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.


