ಬೆಳಗಾವಿ : ಕೇರಳ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ರಾಜೇಂದ್ರ ವಿಶ್ವನಾಥ್ ಅರಳೇಕರ್ ಅವರು ಕೆಎಲ್ಇ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆಯವರ ಸ್ವಗೃಹಕ್ಕೆ ಆಗಮಿಸಿ ಕುಶಲೋಪಹರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯ ಸಾಧನೆ, ಅಭಿವೃದ್ಧಿ, ಪ್ರಸ್ತುತ ಆರೋಗ್ಯ ಸೇವೆಯ ಕೊಡುಗೆಗಳನ್ನು ಕುರಿತು ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಡಾ ಪ್ರಭಾಕರ್ ಕೋರೆ ಅವರು ಕಳೆದ ನಾಲ್ಕು ದಶಕಗಳಿಂದ ಕೆ ಎಲ್ ಈ ಸಂಸ್ಥೆಯನ್ನು ಅಗಾಧವಾಗಿ
ಕಟ್ಟಿ ಬೆಳೆಸಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಅನಘಾ ಅರಳೆೇಕರ್, ಪ್ರಸನ್ನ ಗೋಟಗೆ ಮತ್ತು ಇತರರು ಉಪಸ್ಥಿತರಿದ್ದರು.


