ಬೆಳಗಾವಿ:ನಗರದ ಅನಸೂರಕರ ಗಲ್ಲಿಯಲ್ಲಿರುವ ದಿ. ಬೆಳಗಾಂವ ಮರ್ಚಂಟ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಪ್ರಸಕ್ತ ವರ್ಷದಲ್ಲಿ 16 ಲಕ್ಷ 68 ಸಾವಿರದ 534 ರೂ.ನಿವ್ವಳ ಲಾಭ ಗಳಿಸಿದೆ. ಸೊಸೈಟಿಯ ಸದಸ್ಯರಿಗೆ ಶೇ.10 ರಷ್ಟು ಲಾಭಾಂಶವನ್ನು ನೀಡಲು ಎಂದು ಅಧ್ಯಕ್ಷ ನಾರಾಯಣ ಚೌಗುಲೆ ತಿಳಿಸಿದರು.
ಸೊಸೈಟಿಯ 27 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ 21 ತಿಂಗಳ ಮುದ್ದತ್ತು ಠೇವಣಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಯೋಜನೆಯು ಅಕ್ಟೋಬರ್ 31ರವರೆಗೆ ಇರುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಖೆಯ ಚೇರಮನ್ ನಾರಾಯಣ ಕಿಟವಾಡಕರ ಸೊಸೈಟಿಯ ಬಗ್ಗೆ ಮಾಹಿತಿ ನೀಡಿ, ಒಟ್ಟು ಬಂಡವಾಳ ರೂ.68.91.600/- ಡಿಪಾಜಿಟ್ ರೂ 34.02.38,907/- ಸಾಲ ವಿತರಣೆ ರೂ 33.48.22.699/-, ಗುಂತಾವಣೆಗಳು 20.5.58.68.368/- 0.40.45.69,050/-, ವಾರ್ಷಿಕ ವ್ಯವಹಾರ ರೂ. 92.10,73,074/-ಆಗಿರುತ್ತದೆ ಎಂದು ತಿಳಿಸಿದರು.
ಲಕ್ಷ್ಮೀಕಾಂತ ಮಕವಾನ ವರ್ಷದ ಸರ್ವಸಾಧಾರಣ ಸಭೆಯ ವರದಿ ಮಂಡಿಸಿದರು. ನಂತರ ಪ್ರಸಕ್ತ ವರ್ಷದಲ್ಲಿ ಅಗಲಿದ ಸೊಸೈಟಿಯ ಸದಸ್ಯರು ಹಾಗೂ
ಹಿತಚಿಂತಕರಿಗೆ 2 ನಿಮಿಷಗಳವರೆಗೆ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕುಮುದ ಭಾಟಿಯಾ, ಶಾಖೆಯ ಚೇರಮನ್ ನಾರಾಯಣ ಕಿಟವಾಡಕರ, ಹಿರಿಯ ಸಂಚಾಲಕರಾದ ಅಶೋಕ ಬೋಳಗುಂಡಿ, ಅಶೋಕ ಯರಕರ, ಶಿವಾಜಿ ಚವ್ಹಾಣ, ನಿತಿನ ಪವಾರ, ಮಿಲಿಂದ ಶಿಂಧೆ, ಪ್ರಣಯ ಶೆಟ್ಟಿ,
ಸಂಚಾಲಕಿ ರೇಖಾ ಅತ್ತೀಮರದ, ಸಲಹೆಗಾರರಾದ ಅಜಿತ ಮಾನೆ, ಸಂಜಯ ಓಝಾ, ಅಪರ್ಣಾ ನಿತಿನ ಪವಾರ, ಸಭಾಸದರಾದ ಡಾ. ಶಿವಾಜಿ ಅನಗೋಳಕರ, ಲಕ್ಷ್ಮಣ ಯಳ್ಳೂರಕರ, ದಿಲೀಪ್ ಜೋಶಿ, ಮಸೂರಜ ಪರೀಟ, ಧನರಾಜ ಜಾಧವ, ಮಹಾಂತೇಶ ದೇಸಾಯಿ, ಪಾಪಾಲಾಲ ಓಝಾ, ಸತೀಶ ಅತ್ತೀಮರದ, ಪ್ರದೀಪ ವೇರ್ಣೆಕರ, ಪರಮಾನಂದ
ಅಮಾಶಿ, ಸೊಸೈಟಿ ಕಾನೂನು ಸಲಹೆಗಾರರಾದ ಮಂಜಯ್ಯ ಶೆಟ್ಟಿ, ಉಮೇಶ ಯರಡಾಲ, ಶಕುಂತಲಾ ಜಾಧವ, ಮಾಜಿ ನಗರಸೇವಕಿ ಅನಿತಾ ಕಿಟವಾಡಕರ, ಶಾರದಾ ಮಕವಾನ, ಶೋಭಾ ಶೇಖದಾರ, ಅನಿತಾ ಪಾಟೀಲ, ಸಿಬ್ಬಂದಿ ವರ್ಗ. ಪಿಗ್ಮಿ ಸಂಗ್ರಾಹಕರು, ಸಭಾಸದರು ಉಪಸ್ಥಿತರಿದ್ದರು.