ಬಚ್ಚಲು ಮನೆಯಂತಾಗಿದ್ದ ಕಾಕತಿ ಠಾಣೆಗೆ ಒಲಿದು ಬಂತು ಹೊಸ ಕಟ್ಟಡ ಭಾಗ್ಯ..!
ಗುದ್ದಲಿ ಪೂಜೆ ನೇರವೇರಿಸಿದ ಸಚಿವ ಸತೀಶ ಜಾರಕಿಹೊಳಿ.
2.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಠಾಣೆಯ ಹೊಸ ಇಮಾರತು..!
ಬೆಳಗಾವಿ : ಮಳೆಗಾಳ ಆರಂಭವಾದ್ರೆ ಸಾಕು ಬಚ್ಚಲು ಮನೆಯಂತಾಗುತ್ತಿದ್ದ ಕಾಕತಿ ಪೊಲೀಸ್ ಠಾಣೆಗೆ ಕೊನೆಗೂ ಹೊಸ ಕಟ್ಟಡ ಭಾಗ್ಯ ಒಲಿದು ಬಂದಂತಾಗಿದೆ.
ಒಟ್ಟು ಎರಡೂವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಠಾಣೆಯ ಕಟ್ಟಡದ ಶಂಕುಸ್ಥಾಪನೆಯನ್ನು ಯಮಕನಮರಡಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇರವೇರಿಸಿದರು.
ಸೋಮವಾರ ಸಾಯಂಕಾಲ ಕಾಕತಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪೋಲೀಸ್ ಠಾಣೆಯ ಹಿಂಬದಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಂತರ ಜನರ ಸುರಕ್ಷತೆಗಾಗಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಳವಡಿಸಿದ ಸಿಸಿಟಿವಿ ಕ್ಯಾಮರಾಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸ ಕಮೀಷನರ್ ಗುಲಾಬರಾವ ಬೊರಸೆ, ಡಿಸಿಪಿ ರೋಹನ್ ಜಗದೀಶ, ಡಿಸಿಪಿ ನಿರಂಜನ ಅರಸ್,ಎಸಿಪಿ ಗಂಗಾಧರ, ಕಾಕತಿ ಪಿಐ ಸುರೇಶ್ ಶಿಂಗಿ, ಪಿಎಸ್ಐ ಮಂಜುನಾಥ ನಾಯಿಕ, ಮೃತ್ಯುಂಜಯ ಮಠದ, ಸಿಬ್ಬಂದಿ ಲಮಾಣಿ, ಸೇರಿದಂತೆ ಎಲ್ಲ ಹಿರಿಯ ಹಾಗೂ ಕಿರಿಯ ಸಿಬ್ಬಂದಿಗಳು ಹಾಜರಿದ್ದರು.
ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ, ಮುಖಂಡರಾದ ಅಪ್ಪಯ್ಯಗೌಡ ಪಾಟೀಲ, ಅಮೃತ ಮುದ್ದಣ್ಣವರ, ಸಿದ್ದು ಸುಣಗಾರ ಸೇರಿದಂತೆ ಅನೇಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.