- ಟಿಪ್ಪರ ಚಾಲಕರ ಅಟ್ಟಹಾಸಕ್ಕೆ ಅದೇ ರಸ್ತೆಮೇಲೆ ವಾರದೊಳಗೆ ಮತ್ತೊಂದು ಅಪಘಾತ..!
ಮರಳು ತುಂಬಿದ ಟಿಪ್ಪರ ಹಾಯ್ದು ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ..!
ಟಿಪ್ಪರನಿಂದಾಗಿ ಇನ್ನೇಷ್ಟು ಅಮಾಯಕರ ಬಲಿಬೇಕು ಕ್ರಮಕೈಗೊಳ್ಳದ ಪೊಲೀಸರೇ..?
ಬೆಳಗಾವಿ : ಒಂದೇ ವಾರದಒಳಗೆ ಅದೇ ರಸ್ತೆಯ ಮೇಲೆ ಟಿಪ್ಪರ ಚಾಲಕನ ಅತೀರೆಕಕ್ಕೆ ನಡೆದ ದುರಂತದಲ್ಲಿ ಮತ್ತೊಬ್ಬ ಅಮಾಯಕ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ಕುರಿಹಾಳ – ಬೊಡಕೇನಟ್ಟಿ ಮಧ್ಯದ ರಾಜ್ಯ ಹೆದ್ದಾರಿ 141 ರಸ್ತೆ ಮೇಲೆ ಸಂಭವಿಸಿದೆ..!
ರಾಜಗೋಳಿ-ನಿಂಗ್ಯಾನಟ್ಟಿ ಗ್ರಾಮದಲ್ಲಿ ಮರಳು ತುಂಬಿಕೊಂಡು ಬೆಳಗಾವಿ ನಗದ ಕಡೆಗೆ ವೇಗವಾಗಿ ಹೊರಟಿದ್ದ ಟಿಪ್ಪರ ಚಾಲಕ ಎದುರಗಡೆಯಿಂದ ಬರುತ್ತಿದ್ದ ಬೈಕ್ ಸವಾರನ ಮೇಲೆ ಹರಿಹಾಯಿಸಿ ಗಂಭೀರವಾಗಿ ಗಾಯ ಮಾಡಿದ್ದಾನೆ.
ಮಹಾರಾಷ್ಟ್ರದ ಶಿವಣಗಿ ಗ್ರಾಮದ ವ್ಯಕ್ತಿ ಟಿಪ್ಪರನಿಂದಾಗಿ ಗಂಭೀರವಾಗಿ ಗಾಯಗೊಂಡ ದುರ್ದೈವಿ.
ಟಿಪ್ಪರ ಚಾಲಕರ ಅತಿರೇಕಕ್ಕೆ ಇದು ವಾರದೊಳಗೆ ನಡೆದ ಎರಡನೇ ಘಟನೆಯಾಗಿದೆ. ಮೊನ್ಮನ್ನೆ ಅಷ್ಟೇ ಅಗಸಗಿ ಗ್ರಾಮದ ಹತ್ತಿರ ನವವಿವಾಹಿತ ಬೈಕ್ ಸವಾರನೊರ್ವ ಟಿಪ್ಪರ ದುರಂತದಲ್ಲಿ ಅಸುನೀಗಿದ್ದ.
ವರ್ಷವಿಡೀ ಬೆಳಗಾವಿ ಕಮೀಷನರ್ ವ್ಯಾಪ್ತಿಯಲ್ಲಿರುವ ಈ ರಸ್ತೆ ಮೇಲೆ ಟಿಪ್ಪರ ಚಾಲಕರ ಅಟ್ಟಹಾಸಕ್ಕೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ಸ್ಥಳಿಯ ಪೊಲೀಸರಾಗಲಿ ನಗರ ಪೊಲೀಸರಾಗಿ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಇಂತಹ ದುರಂತ ಸಂಭವಿಸುತ್ತಿವೆ ಎಂದರೇ ತಪ್ಪಾಗಲಾರದು. ಈ ಘಟನೆಗಳಿಂದ ರೊಚ್ಚಿಗೆದ್ದರುವ ಜನ ಪೊಲೀಸ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಇನ್ನೇಷ್ಟು ಅಮಾಯಕರ ಸಾವು ಬೇಕಾಗಿದೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ರಸ್ತೆ ಮೇಲೆ ತೆರಳುತ್ತಿದ್ದ ನಾಗರಿಕರು ಅಪಘಾತಕ್ಕಿಡಾದ ಗಾಯಾಳುಗಳನ್ನು ಅಂಬುಲೇನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಾಕತಿ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.