ಪಂಡರಪುರದಲ್ಲಿ ನೀರುಪಾಲಾದ ಬೆಳಗಾವಿ ಯುವಕ ..!
ಚಂದ್ರಭಾಗಾದಲ್ಲಿ ತೇಲಿ ಹೋಗಿ ಮೃತಪಟ್ಟ ವಿಠ್ಠಲನ ಭಕ್ತ..!
ಬೆಳಗಾವಿ : ಪಂಡರಪುರದ ವಿಠ್ಠಲನ ದರ್ಶನಕ್ಕೆಂದು ತೆರಳಿದ್ದ ಬೆಳಗಾವಿ ತಾಲೂಕಿನ ಅಲತಗೆ ಗ್ರಾಮದ ಯುವಕನೊರ್ವ ಬೆಳಗಿನ ಜಾವ ಸ್ಥಾನಕ್ಕೆಂದು ಈಜಲು ಹೋದಾಗ ತುಂಬಿಹರಿಯುತ್ತಿರುವ ಚಂದ್ರಭಾಗಾ ನದಿಯಲ್ಲಿ ತೇಲಿ ಹೋಗಿ ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಗ್ಗೆ ಮಹಾರಾಷ್ಟ್ರದ ಪಂಡರಪೂರದ ವಿಠ್ಠಲನ ಸನ್ನಿಧಿಯಲ್ಲಿ ಸಂಭವಿಸಿದೆ.
ಅಲತಗೆ ಗ್ರಾಮದ 25 ವರ್ಷದ ಶುಭಂ ಪಾವಲೆ ಎಂಬಾತ ನದಿಯಲ್ಲಿ ತೇಲಿ ಹೋಗಿ ಮೃತನಾಗಿರುವ ಯುವಕ.
ಶುಭಂ ಅಲತಗೆ ಗ್ರಾಮದ ತಮ್ಮ ಗೆಳೆಯರ ಜೊತೆ ನಿನ್ನೆ ತಡರಾತ್ರಿ ವಾಹನ ಮಾಡಿಕೊಂಡು ಪಂಡಪುರಕ್ಕೆ ತೆರಳಿದ್ದಾಗಿ ತಿಳಿದು ಬಂದಿದೆ. ಪಂಡರಪುರಕ್ಕೆ ಇಂದು ನಸುಕಿನ ಜಾವ 6 ಘಂಟೆಗೆ ತಲುಪುತ್ತಿದ್ದಂತೆ ನದಿಗೆ ಸ್ಥಾನಕ್ಕೆ ಈಜಲು ಹೋದಾಗ ಹರಿಯುವ ನೀರಿನ ತಿವ್ರತೆಗೆ ತೇಲಿ ಹೋಗಿದ್ದ. ಸುಮಾರು 6 ಘಂಟೆಗಳ ನಂತರ ಶುಭಂ ಶವವಾಗಿ ಪತ್ತೆಯಾಗಿರುವುದಾಗಿ ಜತೆಗಿದ್ದ ಸ್ನೇಹಿತರು ತಿಳಿಸಿದ್ದಾರೆ.