ಬೆಳಗಾವಿ: ಪುಣೆಯ ಮಾವಲ್ ತಾಲ್ಲೂಕಿನ ಕುಂದಾಮಲ ಬಳಿ ಇಂದ್ರಾಯಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಭಾನುವಾರ ಮಧ್ಯಾಹ್ನ ಕುಸಿದಿದ್ದು, ದುರಂತದಲ್ಲಿ ತಾಲ್ಲೂಕಿನ ನಸಲಾಪುರ ಗ್ರಾಮದ ಯುವಕ ಚೇತನ ಚಾವರೆ (22) ಮೃತಪಟ್ಟಿದ್ದಾರೆ.
ಇವರು ಪುಣೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಭಾನುವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ಇಂದ್ರಯಾಣಿ ಸೇತುವೆ ನೋಡಲು ಹೋಗಿದ್ದರು. ಈ ವೇಳೆ ಸೇತುವೆ ಕುಸಿದು ಚೇತನ ಕೊಚ್ಚಿ ಹೋಗಿದ್ದರು. ಭಾನುವಾರವೇ ಶವ ಪತ್ತೆಯಾಗಿತ್ತು. ಸೋಮವಾರ ಸ್ವಗ್ರಾಮ ಜಲಾಲಪುರ ಗ್ರಾಮದಲ್ಲಿ ಶವ ಸಂಸ್ಕಾರ ಕಾರ್ಯ ನೆರವೇರಿತು. ಚೇತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.