ಬೆಳಗಾವಿ : ರಾಮ ಮಂದಿರದ ಹೋರಾಟದ ದೃಷ್ಟಿಯಿಂದ ಲೇಖಕ ಸಿ. ಕೆ. ಜೋರಾಪುರ ಅವರು ಬರೆದಿರುವ ‘ಶ್ರೀರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ’ ಅತ್ಯಂತ ಮಹತ್ವದ ಕೃತಿಯಾಗಿದ್ದು ಇದು ಎಲ್ಲ ಓದುಗರನ್ನು ತಲುಪುವಂತಾಗಬೇಕು. ಅಯೋಧ್ಯೆಯ ರಾಮ ಮಂದಿರ ಕೇವಲ ರಾಮಮಂದಿರವಲ್ಲ. ಹಿಂದುಗಳನ್ನೆಲ್ಲ ಒಂದುಗೂಡಿಸುವ ರಾಷ್ಟ್ರ ಮಂದಿರ ಎಂದು ರಾಷ್ಟ್ರವಾದಿ ಅರವಿಂದ ದೇಶಪಾಂಡೆ ಹೇಳಿದರು.
ನಗರದ ನಾಡಹಬ್ಬ ಉತ್ಸವ ಸಮಿತಿ ಮತ್ತು ಪ್ರಹ್ಲಾದ ಪ್ರಕಾಶನ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ 15 ರಂದು ಶಿವಬಸವನಗರದ ಕನ್ನಡ ಭವನದಲ್ಲಿ ಲೇಖಕ ಸಿ. ಕೆ. ಜೋರಾಪುರ ಅವರು ರಚಿಸಿದ ‘ಶ್ರೀರಾಮ ಮಂದಿರದ ಹೋರಾಟಗಳು ಮತ್ತು ರಾಮಾಯಣ’ ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಕೃತಿ ಪರಿಚಯಿಸಿ ಶ್ರೀ ರಾಮ ಮಂದಿರ ಸ್ಥಾಪನೆಯ ಸಂಘರ್ಷಣೆಯ ಇತಿಹಾಸ ಮುಂದಿ ಪೀಳಿಗೆಗೆ ಗೊತ್ತಾಗಬೇಕೆಂಬ ಆಸೆಯಿಂದ ವಾಸ್ತವದ ಸಂಗತಿಗಳನ್ನು ಈ ಕೃತಿಯಲ್ಲಿ ಲೇಖಕ ಜೋರಾಪುರ ಅವರು ದಾಖಲಿಸಿದ್ದಾರೆ. ಅತ್ಯಂತ ಉತ್ಕೃಷ್ಟವಾದ ಗ್ರಂಥವಾಗಿದ್ದು ಎಲ್ಲರೂ ಕೊಂಡು ಓದಬೇಕೆಂದು ಹೇಳಿದರು.
ಪಂ. ಪ್ರಮೋದಾಚಾರ್ಯ ಕಟ್ಟಿಯವರು ಮಾತನಾಡಿ, ಜೋರಾಪುರ ಅವರ ಈ ಕೃತಿಯಲ್ಲಿ ರಾಮ ಮಂದಿರದ ಹೋರಾಟದ ಕ್ಷಣಗಳೊಂದಿಗೆ ಸಂಕ್ಷಿಪ್ತವಾಗಿ, ಚಿಂತನಾತ್ಮಕವಾಗಿ ಅಲ್ಲದೇ ರೋಚಕವಾಗಿ ರಾಮಾಯಣವನ್ನು ಸಂಗ್ರಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಲೇಖಕ ಜೋರಾಪುರ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಗ್ರಂಥಾಲಯ ಲೇಖಕರ ಕೃತಿಗಳನ್ನು ಕೊಂಡುಕೊಳ್ಳುವಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ತುಂಬ ಖೇದದ ಸಂಗತಿ. ಸರಕಾರ ಲೇಖಕರ ಪುಸ್ತಕಗಳನ್ನು ಕೊಂಡುಕೊಳ್ಳುವುದರ ಬರೆಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.
ಬೇರೆ ಬೇರೆ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಮಾಧವಾಚಾರ್ಯ ಆಯಿ, ನಿರುಪಾದಯ್ಯ ಕಲ್ಲೊಳ್ಳಿಮಠ, ಎಲ್. ಎಸ್. ಶಾಸ್ತ್ರಿ, ಹನುಮಂತ ಕೊಂಗಾಲಿ, ಸುರೇಶ ಯಾದವ, ವ್ಹಿ. ಕೆ. ಬಡಿಗೇರ, ಡಾ. ಶಿವು ನಂದಗಾವಿಯವರನ್ನು ಗೌರವಿಸಲಾಯಿತು.
ಕಾರಂಜಿಮಠದ ಪ. ಪೂ. ಗುರುಸಿದ್ಧ ಮಹಾಸ್ವಾಮಿಯವರು ಆಶೀರ್ವಾದ ನುಡಿಗಳನ್ನಾಡಿದರು. ಡಾ. ಎಚ್.ಬಿ. ರಾಜಶೇಖರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀಮತಿ ಭಾರತಿ ಚೌಧರಿ ಯವರು ಹಾಡಿದ ರಾಷ್ಟ್ರಾಭಿಮಾನ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆರ್. ಪಿ. ಪಾಟೀಲ ವಂದಿಸಿದರು. ಪ್ರೊ. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.
ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್. ಇಂಚಲ, ಯ. ರು. ಪಾಟೀಲ, ಪ್ರೊ. ಜಿ. ಕೆ. ಕುಲಕರ್ಣಿ, ಅರವಿಂದ ಹುನಗುಂದ, ಜಯತೀರ್ಥ ಸವದತ್ತಿ, ಕೇದಾರ ಜೋರಾಪುರ, ಪ್ರಹ್ಲಾದ ಜೋರಾಪುರ, ಸೋಮಲಿಂಗ ಮಾವಿನಕಟ್ಟಿ, ಪಾಂಡುರಂಗ ಮಾರಿಹಾಳಕರ, ಚಂದ್ರಶೇಖರ ನವಲಗುಂದ ಗುಂಡೇನಟ್ಟಿ ಮಧುಕರ, ಮದನ ಕಣಬೂರ, ಗೀತಾ ಸುತಾರ, ವಿಜಯಾ ಹಿರೇಮಠ, ಸುಜಾತಾ ಉಲ್ಲಾಳ, ಮಹಾದೇವಿ ಹಿರೇಮಠ, ಆನಂದ ಕರನನಿಂಗಣ್ಣವರ, ಸಮೃದ್ಧಿ ಚೌದರಿ, ಕೆ. ತಾನಾಜಿ ಮುಂತಾದ ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಸಿ. ಕೆ. ಜೋರಾಪುರ ಅವರ ಗ್ರಂಥ ಲೋಕಾರ್ಪಣೆ ; ರಾಮ ಮಂದಿರ, ಹಿಂದುಗಳನ್ನು ಒಟ್ಟುಗೂಡಿಸಿದ ರಾಷ್ಟ್ರಮಂದಿರ: ಅರವಿಂದ ದೇಶಪಾಂಡೆ
