ಪ್ರಯಾಗ್ರಾಜ್ :ಪ್ರಯಾಗ್ರಾಜ್ನ ಮಹಾಕುಂಭ ಮೇಳದ ನೀರಿನ ಗುಣಮಟ್ಟದ ಕುರಿತು ವಿವಾದ ಎಬ್ಬಿರುವ ನಡುವೆ ಖ್ಯಾತ ವಿಜ್ಞಾನಿ ಡಾ. ಅಜಯ್ ಸೋಂಕರ್ ಅವರು ಗಂಗಾ ನದಿ ಸಂಪೂರ್ಣವಾಗಿ ರೋಗಾಣು ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಜನವರಿ 13 ರಿಂದ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇದುವರೆಗೂ 60 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಇದರ ನಡುವೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಗಾ ನೀರಿನ ಗುಣಮಟ್ಟದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ ನಂತರ ಖ್ಯಾತ ವಿಜ್ಞಾನಿ ಡಾ. ಅಜಯ್ ಸೋಂಕರ್ ಅವರು ಗಂಗಾ ನದಿಯು 1,100 ವಿಧದ ಬ್ಯಾಕ್ಟಿರಿಯೊಫೇಜ್ಗಳನ್ನು ಹೊಂದಿರುವ ವಿಶ್ವದ ಏಕೈಕ ಸಿಹಿನೀರಿನ ನದಿಯಾಗಿದೆ. ಇದು ಮಾಲಿನ್ಯವನ್ನು ನಿವಾರಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ ಉಲ್ಲೇಖಿಸಲಾಗಿದೆ.
ಈ ಹಿಂದೆ ಎಪಿಜೆ ಅಬ್ದುಲ್ ಕಲಾಂ ಅವರಿಂದ ಹೊಗಳಲ್ಪಟ್ಟ ಪದ್ಮಶ್ರೀ ಡಾ. ಅಜಯ್ ಕುಮಾರ್ ಸೋಂಕರ್ ಅವರು, ಗಂಗಾ ನದಿಯ ಶುದ್ಧತೆಯ ಬಗ್ಗೆ ಇರುವ ಅನುಮಾನಗಳನ್ನು ವೈಜ್ಞಾನಿಕ ಪುರಾವೆಗಳೊಂದಿಗೆ ನಿವಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಹಾ ಕುಂಭ ನಗರದ ಸಂಗಮ್ ನೋಸ್ ಮತ್ತು ಅರೈಲ್ ಸೇರಿದಂತೆ ಐದು ಪ್ರಮುಖ ಸ್ನಾನಗೃಹಗಳಿಂದ ಡಾ. ಸೋಂಕರ್ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನಂತರ ಈ ಮಾದರಿಗಳನ್ನು ಅವರ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕೋಟ್ಯಂತರ ಭಕ್ತರು ನದಿಯಲ್ಲಿ ಸ್ನಾನ ಮಾಡುತ್ತಿದ್ದರೂ, ನೀರಿನ pH ಮಟ್ಟದಲ್ಲಿ ಯಾವುದೇ ಬ್ಯಾಕ್ಟಿರಿಯಾದ ಬೆಳವಣಿಗೆ ಅಥವಾ ಇಳಿಕೆ ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.
ಸರ್ಕಾರದ ಪ್ರಕಟಣೆಯ ಪ್ರಕಾರ, ಡಾ. ಸೋಂಕರ್ ಅವರ ಸಂಶೋಧನೆಯು ಗಂಗಾ ನೀರಿನಲ್ಲಿ 1,100 ವಿಧದ ಬ್ಯಾಕ್ಟಿರಿಯೊಫೇಜ್ಗಳಿವೆ ಎಂದು ಬಹಿರಂಗಪಡಿಸಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ನೈಸರ್ಗಿಕ ವೈರಸ್ಗಳಾಗಿದ್ದು, ಈ ಸ್ವಯಂ ಶುದ್ದೀಕರಣ ಕಾರ್ಯವಿಧಾನವು 57 ಕೋಟಿ ಭಕ್ತರು ನದಿ ಸ್ನಾನ ಮಾಡಿದ ನಂತರವೂ ನದಿಯು ಕಲುಷಿತವಾಗದಂತೆ ನೋಡಿಕೊಳ್ಳುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ನದಿಯ pH ಮಟ್ಟವು 8.4 ರಿಂದ 8.6 ರವರೆಗೆ ಇದ್ದು, ಇದು ಸಾಮಾನ್ಯಕ್ಕಿಂತ ಉತ್ತಮವಾಗಿದೆ ಮತ್ತು ಯಾವುದೇ ದುರ್ವಾಸನೆ ಅಥವಾ ಬ್ಯಾಕ್ಟಿರಿಯಾದ ಬೆಳವಣಿಗೆ ಪತ್ತೆಯಾಗಿಲ್ಲ ಎಂದು ಡಾ. ಸೋಂಕರ್ ದೃಢಪಡಿಸಿದ್ದಾರೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, ಡಾ. ಸೋಂಕರ್ ಅವರು ಸಂದೇಹವಾದಿಗಳಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಇದರೊಂದಿಗೆ ಅವರು ತಮ್ಮೊಂದಿಗೆ ಘಾಟ್ಗಳಿಗೆ ಹೋಗಿ, ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಅವುಗಳ ಶುದ್ಧತೆಯನ್ನು ಪರಿಶೀಲಿಸಬೇಕು. ಮಹಾ ಕುಂಭದ ಸಮಯದಲ್ಲಿ 58 ಕೋಟಿಗೂ ಹೆಚ್ಚು ಜನರು ನದಿಯಲ್ಲಿ ಸ್ನಾನ ಮಾಡಿದರೂ, ಗಂಗಾ ನೀರು ಅದರ ಅಂತರ್ಗತ ಶುದ್ದೀಕರಣ ಗುಣಗಳಿಂದಾಗಿ ಸ್ವಾಭಾವಿಕವಾಗಿ ರೋಗ ಮುಕ್ತವಾಗಿದೆ ಎಂದು ಹೇಳಿದ್ದಾರೆ.