ವಿಜಯಪುರ: ಭೀಮಾ ತೀರದ ಕುಖ್ಯಾತ ರೌಡಿ
ಚಂದಪ್ಪ ಹರಿಜನನ ಸಹಚರ ಬಾಗಪ್ಪ ಹರಿಜನನನ್ನು ನಗರದ ಆಕಾಶವಾಣಿ ಬಳಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ವಿಜಯಪುರ, ಕಲಬುರಗಿ ಸೇರಿದಂತೆ ಭೀಮಾತೀರದಲ್ಲಿ ನಡೆದ ಹಲವಾರು ಅಪರಾಧ ಪ್ರಕರಣಗಳಲ್ಲಿ ಬಾಗಪ್ಪ ಹರಿಜನ ಭಾಗಿಯಾಗಿದ್ದ.
ಬಾಗಪ್ಪ ಹರಿಜನ ಮೇಲೆ ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್ ಆವರಣದಲ್ಲಿ 2017ರ ಆಗಸ್ಟ್ 7ರಂದು ಶೂಟೌಟ್ ನಡೆದಿತ್ತು. ಆರು ಗುಂಡುಗಳು ತಗುಲಿದ್ದವು, ಅದೃಷ್ಟವಶಾತ್ ಅಂದು ಬದುಕುಳಿದಿದ್ದನು. ಈ ಘಟನೆ ನಂತರ ಬಾಗಪ್ಪ ಭೂಗತನಾಗಿದ್ದ.
ಸಿಂದಗಿ ಬ್ಯಾಡಗಿಹಾಳ ಗ್ರಾಮದ ಬಾಗಪ್ಪನ ಪಾತ್ರವು ಭೀಮಾ ತೀರದ ರಕ್ತ ಚರಿತ್ರೆಯಲ್ಲಿ ಬಲವಾಗಿತ್ತು. ಮಂಗಳವಾರ ರಾತ್ರಿ ಮನೆಯಲ್ಲಿದ್ದ ಬಾಗಪ್ಪನನ್ನು ಯಾರೋ ಕರೆದಿದ್ದಾರೆ. ಹೀಗಾಗಿ ಬಾಗಪ್ಪ ಹೊರಗಡೆ ಬಂದಿದ್ದಾಗ 7-8 ಮಂದಿಯ ಜನರ ತಂಡ ದಾಳಿ ಕೊಚ್ಚಿ ಕೊಲೆ ಮಾಡಿದೆ ಎಂದು ತಿಳಿದು ಬಂದಿದೆ.