ಬೆಳಗಾವಿ : ಮೂರು ವರ್ಷಗಳಿಂದ ಕಾಡಿದ್ದ 3 ಸೀರಿಯಲ್ ಕಿಲ್ಲರ್ಸ್ ಗಳಿಗೆ ಪ್ರಸಿದ್ಧಿಯಾದ ಯಮಕಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಟ್ಟಿ ಆಲೂರಲ್ಲೇ ಇದೀಗ ಮತ್ತೊಂದು ಭಯಾನಕ ಕೊಲೆ ಪ್ರಕರಣವನ್ನು ಬಯಲಿಗೆ ಎಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಮಾಡಿದವರು ಬೇರಾರು ಅಲ್ಲ. ಆತನ ಮನೆಯವರೇ ಎನ್ನುವುದನ್ನು ಎಡೆಬಿಡದೆ ತನಿಖೆ ನಡೆಸುವ ಮೂಲಕ ಅತ್ಯಂತ ಕ್ರಿಯಾಶೀಲ ಪೊಲೀಸ್ ಅಧಿಕಾರಿಯಾಗಿರುವ ಜಾವೇದ್ ಮುಶಾಪುರಿ ಅವರು
ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕೊಲೆಗಡುಕರಿಗೆ ಅವರು ಮತ್ತೊಮ್ಮೆ ಸಿಂಹಸ್ವಪ್ನವಾಗಿದ್ದಾರೆ.
ಕುರಿಗಾಹಿಯೊಬ್ಬನ ಭೀಕರ ಕೊಲೆ ಪ್ರಕರಣವನ್ನು ಬಯಲಿಗೆಳೆಯಲು ಪೊಲೀಸರು ಪಟ್ಟ ಶ್ರಮ ಹೇಳತೀರದು. ಕಳೆದ ಒಂದು ತಿಂಗಳಿನಿಂದ ಪೊಲೀಸರು ಪ್ರಕರಣವನ್ನು ಇನ್ನೇನು ಕೈ ಬಿಡುವ ಹಂತಕ್ಕೆ ಹೋಗಿದ್ದರು. ಆದರೆ, ಜಾವೇದ್ ಮುಶಾಪುರಿ ಅವರು ಈ ಪ್ರಕರಣವನ್ನು ಬಯಲಿಗೆಳೆಯಲೇಬೇಕು ಎಂಬ ಅದಮ್ಯ ಛಲ ಹೊತ್ತು ಪ್ರಕರಣದ ಬೆನ್ನುಬಿದ್ದು ಅದರಲ್ಲಿ ಈಗ ಯಶಸ್ವಿಯಾಗಿದ್ದಾರೆ.
ಅಂದು ನಡೆದ ಘಟನೆಯಾದರೂ ಏನು ಗೊತ್ತೇ ?
ಹುಕ್ಕೇರಿ ತಾಲೂಕಿನ ಹಟ್ಟಿಆಲೂರು 3 ಸೀರಿಯಲ್ ಕಿಲ್ಲರ್ಸ್ ಗಳಿಗೆ ಕುಖ್ಯಾತಿ ಪಡೆದಿತ್ತು. ಅಂತಹ ಹಟ್ಟಿಆಲೂರಲ್ಲಿ 3 ಕಿಲ್ಲರ್ಸ್ ಗಳ ಹುಟ್ಟು ಅಡಗಿಸಲು ಜಾವೇದ್ ಮುಶಾಪುರಿ ಅವರು ಮೂರು ತಿಂಗಳ ಹಿಂದೆ ಯಶಸ್ವಿಯಾಗಿದ್ದರು. ಅಂತಹ ಹಟ್ಟಿ ಆಲೂರಲ್ಲಿ ಕುರಿಗಾಹಿಯೊಬ್ಬನ ಭೀಕರ ಕೊಲೆ ಪೊಲೀಸರಿಗೆ ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿರಲಿಲ್ಲ. ಮೇ 8 ರಂದು ಕುರಿಗಾಹಿಯೊಬ್ಬನನ್ನು ಹೊಲದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಆ ಕೊಲೆಯನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿರು ಬಿಸಿಲಲ್ಲೇ ಮಾಡಲಾಗಿತ್ತು. ಕುರಿಗಾಹಿ ಎಂದಿನಂತೆ ಕುರಿ ಕಾಯಲು ಬಂದಿರುತ್ತಾನೆ, ಕುರಿಗಳು ಇರುತ್ತವೆ. ಎರಡು ನಾಯಿಗಳು ಸಹ ಕುರಿಗಳ ಬೆಂಗಾವಲಿಗೆ ಇದ್ದವು. ಅಂತಹ ಸಂದರ್ಭದಲ್ಲಿ ಕುರಿಗಾಹಿಯನ್ನು ಬಡಿದು ಹಾಕುತ್ತಾರೆ ಎಂದರೆ ಅದು ಸುಲಭದ ಮಾತೆ ?
ನಂತರ ಕುರಿಗಳು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಎರಡೂವರೆ ಕಿಲೋಮೀಟರ್ ದೂರದಲ್ಲಿರುವ ಕುರಿಗಾಹಿಯ ಮನೆಗೆ ಆಟೋಮ್ಯಾಟಿಕ್ ಆಗಿ ಅವೇ ಹೋಗಿರುತ್ತವೆ. ಅಂದು ಆತನ ಅಪ್ಪ ಮತ್ತು ಅಣ್ಣ ಹುಕ್ಕೇರಿಗೆ ಹೋಗಿರುತ್ತಾರೆ. ಕುರಿಗಳು ಮನೆಗೆ ಬಂದಿವೆ ಎಂದು ಕುರಿಗಾಹಿಯ ಸಹೋದರ ಹುಕ್ಕೇರಿಗೆ ಹೋದ ತಂದೆಗೆ ಫೋನ್ ಮಾಡುತ್ತಾನೆ. ಇತ್ತ ಕುರಿಗಾಹಿಗೆ ಮನೆಯವರು ಫೋನ್ ಮಾಡುತ್ತಾರೆ. ಆದರೆ, ಕುರಿಗಾಹಿ ಮಾತ್ರ ಫೋನ್ ರಿಸೀವ್ ಮಾಡುವುದಿಲ್ಲ. ಅಣ್ಣ ಬಂದಿಲ್ಲ ಎಂದು ಸಹೋದರ ತಂದೆಗೆ ಹೇಳಿದ್ದಾನೆ. ತಂದೆ ಕುರಿಗಾಹಿಯನ್ನು ಹುಡುಕಲು ಹೇಳುತ್ತಾನೆ. ಆದರೆ ಕುರಿಗಾಯಿ ಮಾತ್ರ ಸಿಗಲೇ ಇಲ್ಲ.
ಸಂಜೆ 5:30 ಸುಮಾರು. ಹೊಲದಲ್ಲಿ ಬಿದ್ದಿದ್ದ ಕುರಿಗಾಹಿಯನ್ನು ನೋಡಿದವರು ನೋಡಿದವರೊಬ್ಬರು ವಿಷಯವನ್ನು ಮುಟ್ಟಿಸುತ್ತಾರೆ. ಹುಕ್ಕೇರಿಗೆ ಹೋದ ಅಪ್ಪ ಮತ್ತು ಅಣ್ಣ ಬರುತ್ತಾರೆ. ಕುರಿಗಾಹಿಯ ಹೆಣ ಬಿದ್ದಿದ್ದ ಸ್ಥಳವನ್ನು ನೋಡುತ್ತಾರೆ. ಅಲ್ಲಿ ಎರಡು ನಾಯಿಗಳು ಇದ್ದವು, ಕುರಿ ಸಹ ಇತ್ತು. ಸಂಜೆ ಆರು ಮೂವತ್ತರ ಸುಮಾರಿಗೆ ನಡೆದ ಈ ಘಟನೆ ಇದಾಗಿತ್ತು. ಅಲ್ಲಿ ಹೆಣವಾಗಿ ಮಲಗಿದ ಕುರಿಗಾಹಿ ಜೊತೆಗೆ ಒಂದೇ ಕುರಿ ಮತ್ತು ಎರಡು ನಾಯಿಗಳು ಇರುವುದನ್ನು ನೋಡಿದ ಪ್ರತಿಯೊಬ್ಬರು ಅಚ್ಚರಿ ಪಡುವಂತಾಯಿತು.
ರಾತ್ರಿ 8.30 ರ ಸುಮಾರಿಗೆ ವಿಷಯ ಕೊನೆಗೆ ಪೊಲೀಸರಿಗೆ ತಲುಪಿತು. ಪೊಲೀಸರು ಬಂದು ನೋಡುತ್ತಾರೆ ಕುರಿಗಾಹಿಯ ತಲೆಗೆ ಬಡಿದು ಕೊಲೆ ಮಾಡಲಾಗಿದೆ. ಮತ್ತೇನು ಗಾಯದ ಚಿಹ್ನೆ ಇಲ್ಲ. ಕುರಿಗಾಯಿಯನ್ನು ಮಲಗಿಸಿದ ರೀತಿಯಲ್ಲಿದೆ.
ಈ ಪ್ರಕರಣವನ್ನು ಬಯಲಿಗೆ ಎಳೆಯಲು ಪೊಲೀಸರು ಎಲ್ಲಾ ಕೋನಗಳಿಂದ ತನಿಖೆಗೆ ಮುಂದಾಗುತ್ತಾರೆ. ಆಗ ಅವರಿಗೆ ಒಂದು ಬೆಳಕಿಗೆ ಬಂತು. ಸಿಕ್ಕಾಪಟ್ಟೆ ಚೆಕ್ ಮಾಡಿದರು. ಅಲ್ಲಿಯೂ ಯಶಸ್ವಿಯಾಗಲಿಲ್ಲ. ಕುರಿಗಾಹಿಗೆ ಸುಮಾರು 9 ವರ್ಷಗಳ ಹಿಂದೆ ಮದುವೆಯಾದರೂ ಸಹ ಇದುವರೆಗೂ ಮಕ್ಕಳು ಆಗಿಲ್ಲ. ಆದರೆ ಕುರಿಗಾಹಿಗೆ ಕುರಿಗಾರರ ಹೆಣ್ಣು ಮಗಳೊಂದಿಗೆ ಸಂಬಂಧ ಇತ್ತು. ನಾಲ್ಕು ವರ್ಷಗಳ ಹಿಂದೆ ಈ ಸಂಬಂಧ ಆಕೆಯ ಗಂಡನಿಗೆ ಗೊತ್ತಾಗಿ ಆತ ವಾರ್ನ್ ಮಾಡಿ ಬಿಟ್ಟಿದ್ದ. ಆ ಕೋನದಿಂದಲೂ ತನಿಖೆ ನಡೆಸಿದಾಗ ಅಲ್ಲೂ ಸಹ ಕೊಲೆ ಮಾಡಿರುವುದು ದೃಢಪಡಲಿಲ್ಲ.
ಇನ್ನೊಂದೆಡೆ ಕುರಿಗಾಯಿಯ ಕುಟುಂಬ 22 ಗುಂಟೆ ಜಾಗ ಖರೀದಿ ಮಾಡಿದ್ದರು. ಆ ಜಾಗ ಇನ್ನೂ ಇವರಿಗೆ ಆಗಿರಲಿಲ್ಲ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದರೂ ಅಲ್ಲಿಯೂ ಯಶಸ್ವಿಯಾಗಲಿಲ್ಲ. ಕೊನೆಗೆ ಪೊಲೀಸರು ಈ ಪ್ರಕರಣವನ್ನು ಬೆಳಕಿಗೆ ತರುವುದು ಹೇಗೆ ಎಂದು ತಲೆ ಕೆಡಿಸಿಕೊಂಡರು.
ಈ ನಿಟ್ಟಿನಲ್ಲಿ ಜಾವೇದ್ ಮುಶಾಪುರಿ ಅವರು ಒಂದು ನಿರ್ಧಾರ ಮಾಡಿ ಕುರಿಗಳನ್ನು ಕೊಲೆ ನಡೆದ ಸ್ಥಳಕ್ಕೆ ತಂದರು. ಕುರಿಗಳನ್ನು ತರುವ ಜತೆಗೆ ಕುರಿಗಾಹಿಯ ತಮ್ಮನನ್ನು ಅಲ್ಲಿಯೇ ಮಲಗಿಸಿದರು. ಕುರಿಗಳು ಆ ಸ್ಥಳಕ್ಕೆ ತಾವಾಗಿಯೇ ಹೋಗಲಿಲ್ಲ. ಅವುಗಳನ್ನು ಕಿನಾಲ್ ದಾಟಿಸಿ ಬಿಟ್ಟ ನಂತರ ಅವು ಹೋದವು. ಆದರೆ ಶ್ವಾನಗಳು ಒದರಲೇ ಇಲ್ಲ. ಹಾಗಾದರೆ ಕುರಿಗಳನ್ನು ಹತ್ತಿಸಿದವರು ಯಾರು ?
ಇದರಲ್ಲಿ ಪಕ್ಕಾ ಮನೆಯವರೆ ಕುರಿಗಳನ್ನು ಕಿನಾಲ್ ತಲುಪಿಸಿದ್ದಾರೆ ಎಂಬ ವಿಷಯ ಅವರಿಗೆ ಮನವರಿಕೆಯಾಯಿತು. ಇಲ್ಲಿ ಮನೆಯವರೆ ಕೊಲೆ ಮಾಡಿರುವ ಗುಮಾನಿ ಅವರಿಗೆ ನಿಜ ಅನಿಸಿತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅವರು ಪೊಲೀಸರಿಗೆ ನಿರ್ದೇಶನ ನೀಡಿ, ಮೊಬೈಲ್ ಫೋನಿನ ಕಾಲ್ ರೆಕಾರ್ಡ್ಸ್ ಅನ್ನು ಚೆಕ್ ಮಾಡಿಸಿದರು. ಅಪ್ಪ ಮತ್ತು ಅಣ್ಣ ಹುಕ್ಕೇರಿಗೆ ಹೋಗಿರುವುದು ಹಾಗೂ ತಮ್ಮ ಹಟ್ಟಿ ಆಲೂರಲ್ಲಿ ಇರುವ ಕಾಲ್ ರೆಕಾರ್ಡ್ಸ್ ಬಂತು. ಹಾಗಾದರೆ ಕೊಲೆ ಮಾಡಿದವರು ಯಾರು ಎಂಬ ಪ್ರಶ್ನೆ ಪೊಲೀಸರಿಗೆ ಮತ್ತೆ ಎದುರಾಯಿತು.
ಇಲ್ಲಿಯೂ ಯಶಸ್ವಿಯಾಗದ ಪೊಲೀಸರು ಛಲ ಬಿಡದ ತ್ರಿವಿಕ್ರಮರಂತೆ ಊರಲ್ಲಿ ಮತ್ತೆ ಅಡ್ಡಾಡಿದರು.
ಒಂದು ದಿನ ಜಾವೇದ್ ಮುಶಾಪುರಿ ಅವರು ನಾಲ್ಕು ಅಥವಾ ಐದನೇ ತರಗತಿಯ ಹುಡುಗನನ್ನು ಮಾತಿಗೆಳೆದರು. ಆಗ ಆ ಹುಡುಗ ನುಡಿದ ಸತ್ಯ ಇಡೀ ಪ್ರಕರಣಕ್ಕೆ ತೆರೆ ಎಳೆಯುವಷ್ಟರ ಮಟ್ಟಿಗೆ ಸಾಕ್ಷಿ ಒದಗಿಸಿತು.
ಕುರಿಗಾಹಿ ಮತ್ತು ಆತನ ಸಹೋದರನಿಗೆ ಕೊಲೆ ನಡೆಯುವ ಘಟನೆ ದೊಡ್ಡ ಜಗಳವಾಗಿದೆ ಎಂದು ಬಾಲಕ ನುಡಿದ ಸತ್ಯ ಪ್ರಕರಣಕ್ಕೆ ಪೂರ್ಣ ವಿರಾಮ ಒದಗಿಸಿತು. ಕುರಿಗಾಹಿಯ ಸಹೋದರ ಫೋನ್ ನ್ನು ಮನೆಯಲ್ಲೇ ಚಾರ್ಜ್ ಇಟ್ಟು ಕಾರದಪುಡಿ ತೆಗೆದುಕೊಂಡು ಹೋಗಿ ಕಲ್ಲನಿಂದ ಹೊಡೆದು ಕೊಲೆ ಮಾಡಿದ್ದಾನೆ, ಸಹೋದರನ ಶವ ಯಾರಿಗೂ ಕಾಣಬಾರದು ಎಂದು ಗಿಡದ ಕೆಳಗೆ ಎಳೆದು ಬಂದಿರುವುದು ಸಹ ತನಿಖೆಯ ಸಂದರ್ಭದಲ್ಲಿ ಗೊತ್ತಾಯಿತು.
ಇಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿ ಎಂದರೆ ನಾಯಿಗಳು ಕೊಲೆ ಮಾಡಿದ ವ್ಯಕ್ತಿಗೆ ಮೇಲೆ ದಾಳಿ ಮಾಡಲಿಲ್ಲ ಎನ್ನುವುದು. ಕುರಿಗಾಹಿಗೆ ಬೇರೆಯವರು ಹೊಡೆದಿದ್ದರೆ ಆ ನಾಯಿಗಳು ಕಚ್ಚದೆ ಬಿಡುತ್ತಿರಲಿಲ್ಲ. ಆದರೆ ಮನೆಯವರೆ ಹೊಡೆದಿದ್ದರಿಂದ ನಾಯಿಗಳು ಮೌನವಾಗಿದ್ದವು ಎಂಬ ವಿಷಯ ಇಡೀ ಪ್ರಕರಣ ಬಯಲು ಮಾಡುವಲ್ಲಿ ಸಹಾಯಕವಾಯಿತು.
ಯಮಕನಮರಡಿಯ ಅತ್ಯಂತ ಕ್ರಿಯಾಶೀಲ ಹಾಗೂ ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಜಾವೇದ್ ಮುಶಾಪುರಿ ಅವರ ಸಾರಥ್ಯದಲ್ಲಿ ಕಗ್ಗಂಟಾಗಿದ್ದ ಈ ಪ್ರಕರಣಕ್ಕೆ ಅಂತಿಮವಾಗಿ ತಾರ್ಕಿಕ ವಿರಾಮ ಸಿಕ್ಕಿದೆ. ಕೊಲೆಗೈಯ್ದ ದುರುಳನಿಗೆ ಕೊನೆಗೂ ತಕ್ಕ ಶಿಕ್ಷೆಯಾಗಿದೆ.
3 ಸೀರಿಯಲ್ ಕಿಲ್ಲರ್ಸ್ ಊರಲ್ಲೇ ನಡೆಯಿತು ಮತ್ತೊಂದು ಭೀಕರ ಕೊಲೆ…! ಕೊಲೆಗಡುಕರಿಗೆ ಸಿಂಹಸ್ವಪ್ನ ಈ ಜಾವೇದ್ ಮುಶಾಪುರಿ…!
