Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕುಂದಗೋಳ ಪಂಚಗೃಹ ಹಿರೇಮಠದ ಶ್ರೀಗಳವರ ಹೇಳಿಕೆ ಸತ್ಯಕ್ಕೆ ದೂರವಾದದ್ದು: ಶ್ರೀ ಕಾಶೀ ಜಗದ್ಗುರು

ಹುಬ್ಬಳ್ಳಿ: ಕುಂದಗೋಳ ಪಂಚಗೃಹ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮಿಗಳು ಮಠದ ಆಸ್ತಿ ಮಾರಾಟ ಮಾಡುವ ಭರಾಟೆಯಲ್ಲಿ ಸತ್ಯ ಸಂಗತಿಗಳನ್ನು ಅಲ್ಲಗಳೆದಿರುವುದು ಅವರ ಹತಾಶ ಮನೋಭಾವನೆಗೆ ಸಾಕ್ಷಿಯಾಗಿದೆ ಎಂದು ಶ್ರೀ ಮತ್ ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು ಸ್ಪಷ್ಟಪಡಿಸಿದರು.

 ಮಂಗಳವಾರ ವಿದ್ಯಾನಗರದ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಸತ್ಯ ಸಂಗತಿಗಳನ್ನು ವಿವರಿಸಿದ ಜಗದ್ಗುರುಗಳು ವೀರಶೈವ ಧರ್ಮದಲ್ಲಿ ಒಂದು ಉತ್ಕøಷ್ಟ ಪರಂಪರೆ-ಸಂಪ್ರದಾಯವಿದೆ. ಕುಂದಗೋಳ ಪಂಚಗೃಹ ಹಿರೇಮಠ ಶ್ರೀ ಕಾಶೀ ಮಹಾಪೀಠದ ಶಾಖಾ ಮಠವಾಗಿದ್ದು ನಾವೇ ಸಾನ್ನಿಧ್ಯ ವಹಿಸಿ ಅವರಿಗೆ ಪಟ್ಟಾಧಿಕಾರ ಮಾಡಿದ್ದನ್ನು ಅವರು ಇಷ್ಟು ಬೇಗನೇ ಮರೆತಿರುವುದು ಖೇದದ ಸಂಗತಿ. ಆಯಾ ಮಠಗಳ ಸ್ಥಿರ ಚರ ಆಸ್ತಿಗಳಿಗೆ ಆಯಾ ಮಠಗಳ ಶ್ರೀಗಳವರಿಗೆ ಸಂಬಂಧಿಸಿದ್ದರೂ ಕೆಲವು ಸಂದರ್ಭದಲ್ಲಿ ಮಠದ ಪದ್ಧತಿ ಪರಂಪರೆಯಂತೆ ನಡೆಯದೇ ಇದ್ದಾಗ ಸ್ವೇಚ್ಛಾಚಾರಿಗಳಾಗಿ ಮಠದ ಆಸ್ತಿ ಪರಭಾರೆ ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ಅದನ್ನು ತಡೆಗಟ್ಟುವ ಅಧಿಕಾರ ಮೂಲ ಪೀಠಗಳಿಗೆ ಇದ್ದೇ ಇರುತ್ತದೆ. ಈಗಾಗಲೇ ಶ್ರೀಗಳು ಧಾರವಾಡ ನಗರದಲ್ಲಿರುವ ಮತ್ತು ಕುಂದಗೋಳ ಪಟ್ಟಣದಲ್ಲಿರುವ ಮಠದ ಆಸ್ತಿಗಳನ್ನು ಮಾರಾಟ ಮಾಡಿ ಹಣವನ್ನು ಅಪವ್ಯಯ ಮಾಡಿದ್ದಾರೆ. ಆದರೂ ಪೀಠ ಮತ್ತು ಭಕ್ತರು ಯಾರೂ ವಿರೋಧಿಸಿಲ್ಲ. ಇದೀಗ ಮಠಕ್ಕೆ ಉಳಿದಿರುವ 52 ಎಕರೆ ಫಲವತ್ತಾದ ಭೂಮಿಯನ್ನು ಎನ್.ಎ. ಆಗಿ ಪರಿವರ್ತಿಸಲು ಮುಂದಾಗಿ ಮಾರಾಟ ಮಾಡುವ ಹುನ್ನಾರ ಹೊಂದಿರುವುದು ತಿಳಿದು ಬಂದಿರುತ್ತದೆ. ಈ ನಿರ್ಧಾರದಿಂದ ಶ್ರೀಗಳು ಹಿಂದೆ ಸರಿಯದಿದ್ದರೆ ಅವರನ್ನು ಮಠದಿಂದ ಪದಚ್ಯುತಗೊಳಿಸಿ ಮತ್ತೊಬ್ಬ ನೂತನ ಪಟ್ಟಾಧ್ಯಕ್ಷರಿಗೆ ಅಧಿಕಾರ ವಹಿಸಿ ಕೊಡಬೇಕಾಗುತ್ತದೆ. ಕುಂದಗೋಳ ಪಂಚಗೃಹ ಹಿರೇಮಠ ಪುತ್ರ ವರ್ಗ ಮಠವಲ್ಲ. ಇದು ಶಿಷ್ಯ ವರ್ಗ ಪರಂಪರೆಯ ಕಾಶೀ ಮಹಾಪೀಠದ ಶಾಖಾ ಮಠವಾಗಿದೆ. ಲಿಂ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಮ್ಮ ವಂಶಕ್ಕೆ ಇನ್ನೊಂದು ಅವಕಾಶ ಕೊಡಬೇಕೆಂದು ಬಿನ್ನವಿಸಿದಾಗ ಅದಕ್ಕೆ ಸಮ್ಮತಿಸಿ ಶಿತಿಕಂಠ ಶಿವಾಚಾರ್ಯರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಶ್ರೀಗಳು ತಮ್ಮ ನಡೆ ನುಡಿಗಳನ್ನು ತಿದ್ದಿಕೊಳ್ಳದೇ ಇದ್ದರೆ ಮುಂದಿನ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಶ್ರೀ ಕಾಶೀ ಜಗದ್ಗುರುಗಳು ಸ್ಪಷ್ಟಪಡಿಸಿದರು. ಈ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮತ್ತು ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಪಾಲ್ಗೊಂಡಿದ್ದರು.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವುಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದ ನೀಲಣ್ಣನವರಿಗೆ ಅಧಿಕಾರಿಗಳಿಂದ ಶಾಕ್ ..!ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವುಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ