ಬೆಳಗಾವಿ: ಜನಜೀವಾಳ ಜಾಲ : ನಾಲ್ಕು ದಿನಗಳ ಹಿಂದೆ ತಾಯಿ ಮತ್ತು ಮಗು ಹಿರಣ್ಯಕೇಶಿ ನದಿಗೆ ಬಿದ್ದಿದ್ದರು. ಇದೀಗ ಮಗನ ಶವ ನಾಲ್ಕು ದಿನಗಳ ಬಳಿಕ ಬಿದ್ದ ಸ್ಥಳದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಶುಕ್ರವಾರದಂದು ಪತ್ತೆಯಾಗಿದೆ.
ಸಂಕೇಶ್ವರ ಹನುಮಾನ ನಗರದ ಲಕ್ಷ್ಮಿ ಸುಧಾಕರ ಕುಟೋಲಿ (27)ಮತ್ತು ಸುಪ್ರೀತ(9) ಸಂಕೇಶ್ವರದ ಶಂಕರಲಿಂಗ ಮಠದ ಹಿಂದಿನ ಹಿರಣ್ಯಕೇಶಿ ನದಿ ನೀರಿನಲ್ಲಿ ಮುಳುಗಿದ್ದರು. ತಾಯಿಯ ಶವ ಪತ್ತೆಯಾಗಿತ್ತು. ಆದರೆ ಮಗುವಿನ ಶವ ಪತ್ತೆ ಆಗಿರಲಿಲ್ಲ. ಕೊನೆಗೂ ಕಾರ್ಯಾಚರಣೆ ನಡೆಸಿದಾಗ ಮಗುವಿನ ಶವ ನಾಲ್ಕು ದಿನಗಳ ಬಳಿಕ ಶುಕ್ರವಾರ ಪತ್ತೆಯಾಗಿದೆ.
