Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಎರಡೂವರೆ ವರ್ಷದ ಅವಧಿಯಲ್ಲಿ ನಿರೀಕ್ಷೆ ಮೀರಿ ಕೆಲಸ ಮಾಡಿದ ಲಕ್ಷ್ಮೀ ಹೆಬ್ಬಾಳಕರ ಜನರ ನಾಡಿ ಮಿಡಿತ ಅರಿತು ಓಡಾಡಿ ಕೆಲಸ ಮಾಡುವ ಬೆಳಗಾವಿ ಮನೆ ಮಗಳು

ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಆಯ್ಕೆಯಾಗಿ ಸಚಿವ ಹುದ್ದೆಗೆ ಏರಿದ ಲಕ್ಷ್ಮಿ ಹೆಬ್ಬಾಳಕರ ಅವರು ಇಂದು ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಹಾಗೂ ಕೆಲಸ ಮಾಡುವ ಸಚಿವರಲ್ಲಿ ಮುಂಚೂಣಿಗರಾಗಿ ಗುರುತಿಸಿಕೊಂಡಿದ್ದಾರೆ.

ಜನಸೇವೆಯನ್ನೇ ಜೀವನಧರ್ಮ ಯಾವುದೇ ಕೆಲಸ ಕಾರ್ಯಗಳು ಇರಲಿ, ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುವ ತಾಳ್ಮೆಯ ಗುಣ ಅವರಿಗೆ ಇದೆ. ಹೀಗಾಗಿ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಜನರ ನಾಡಿ ಮಿಡಿತವನ್ನು ಅರಿತು ತಮ್ಮದೇ ಆದ ಜೀವನ ಧರ್ಮವನ್ನು ಅಳವಡಿಸಿಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹೆಸರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಮನಸ್ಸಿನಲ್ಲಿ ಒಂದು ಭರವಸೆಯ ಸಂಕೇತವಾಗಿದೆ. ಜನಸೇವೆ ಎಂಬ ಮಹೋನ್ನತ ಧ್ಯೇಯವನ್ನು ಜೀವನದ ಮಾರ್ಗದರ್ಶಕ ತತ್ವವನ್ನಾಗಿ ಮಾಡಿಕೊಂಡಿರುವ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನಮನದಲ್ಲಿ ಭರವಸೆ, ಮಮತೆ ಮತ್ತು ವಿಶ್ವಾಸದ  ಪ್ರತೀಕವಾಗಿ ಮೂಡಿಬಂದಿದ್ದಾರೆ.
ರಾಜಕೀಯವನ್ನು ಅಧಿಕಾರದ ಸಾಧನವನ್ನಾಗಿ ನೋಡದೆ, ಜನಸೇವೆ ಎಂಬ ಕರ್ತವ್ಯವಾಗಿ ಕಂಡುಕೊಂಡಿರುವ ಅವರು, ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ನಾಯಕಿ. ಸಮಾಜ ಪರಿವರ್ತನೆಯ ಪವಿತ್ರ ಸಾಧನೆಯೆಂದು ಅರ್ಥಮಾಡಿಕೊಂಡಿರುವ ಅವರು, ಪ್ರತಿಯೊಂದು ಹೆಜ್ಜೆಯನ್ನೂ ಜನಹಿತದ ದಿಕ್ಕಿನಲ್ಲಿ ಇಟ್ಟಿರುವ ನಾಯಕಿ. ಜನರ ನೋವು –ನಲಿವುಗಳನ್ನು ತಮ್ಮದೇ ಬದುಕಿನ ಭಾಗವೆಂದು ಕಂಡುಕೊಳ್ಳುವ ಅವರ ಮನೋಭಾವವೇ ಅವರಿಗೆ ಅಪಾರ ಜನಪ್ರೀತಿಯನ್ನು ತಂದಿದೆ.   ಅವರ ಕಾರ್ಯಶೈಲಿ ಜನರ ಜೀವನಕ್ಕೆ ನೇರವಾಗಿ ಸ್ಪರ್ಶಿಸುವಂತದ್ದು; ಅದಕ್ಕೇ ಕ್ಷೇತ್ರದ ಜನರು ಅವರನ್ನು “ನಮ್ಮ ಮನೆ ಮಗಳು” ಎಂದು ಪ್ರೀತಿಯಿಂದ ಕರೆಯುತ್ತಾರೆ.
ಕ್ಷೇತ್ರದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಅವರು 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ನಿರ್ಮಾಣ ಮಾಡಿರುವುದು ಅವರ ಭಕ್ತಿ, ಬದ್ಧತೆ ಮತ್ತು ಜನಸಂಸ್ಕೃತಿಯ ಮೇಲಿನ ಗೌರವವನ್ನು ಸಾರುತ್ತದೆ. ಇದು ಕೇವಲ ಕಟ್ಟಡಗಳ ನಿರ್ಮಾಣವಲ್ಲ; ಜನರ ನಂಬಿಕೆಗಳಿಗೆ ಅವರು ನೀಡಿರುವ ಗೌರವದ ಪ್ರತೀಕವಾಗಿದೆ. ಅವರ ಈ ಸೇವೆಗೆ ಕೃತಜ್ಞತೆಯಾಗಿ ಕ್ಷೇತ್ರದ ಜನರು ಚಿನ್ನದ ಸರ ನೀಡಿ ಸನ್ಮಾನಿಸಿದ್ದು, ಜನರ ಹೃದಯದಲ್ಲಿ ಅವರಿಗೆ ಇರುವ ಸ್ಥಾನ ಎಷ್ಟೊಂದು ಅಪಾರವೆಂಬುದನ್ನು ತೋರಿಸುತ್ತದೆ.
ರಾಜ್ಯದ ಪ್ರಭಾವಿ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ರಸ್ತೆ, ಮೂಲಸೌಕರ್ಯ, ಮಹಿಳಾ ಸಬಲೀಕರಣ, ಶಿಕ್ಷಣ ಹಾಗೂ ಸಮಾಜಮುಖಿ ಯೋಜನೆಗಳ ಮೂಲಕ ಅವರು ಅಭಿವೃದ್ಧಿಯ ಹೊಸ ಅಧ್ಯಾಯ ಬರೆದಿದ್ದಾರೆ. ಅವರ ನಾಯಕತ್ವದಲ್ಲಿ ಕ್ಷೇತ್ರವು ಅಭಿವೃದ್ಧಿಯ ಹಾದಿಯಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದೆ.
ಜನರ ಪ್ರೀತಿ, ಆಶೀರ್ವಾದ ಮತ್ತು ವಿಶ್ವಾಸವೇ ತಮ್ಮ ಶಕ್ತಿ ಎಂದು ಅವರು ಹೇಳುವ ಮಾತು ಕೇವಲ ಮಾತಿನ ಅಲಂಕಾರವಲ್ಲ, ಅದು ಅವರ ಜೀವನದ ತತ್ವ. ಜನಮನ ಗೆದ್ದ ನಾಯಕಿಯಾಗಿ, ಸೇವೆಯ ಮೂಲಕ  ಜನರ ಪ್ರೀತಿ ಮತ್ತು ವಿಶ್ವಾಸವನ್ನು ಸಂಪಾದಿಸಿದ ಅಪರೂಪದ ಜನನಾಯಕಿಯಾಗಿ, ಸೇವೆಯ ದೀಪವನ್ನು ಹಚ್ಚಿಕೊಂಡೇ ಸಮಾಜದ ಬೆಳಕಾಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಪಯಣ ಇನ್ನೂ ಅನೇಕ ಜನಹಿತದ ಅಧ್ಯಾಯಗಳನ್ನು ಬರೆಯಲಿದೆ.

ಸಮಾಜದ ಅತೀ ಅಗತ್ಯವಿರುವ ವರ್ಗಗಳ ಜೀವನಮಟ್ಟವನ್ನು ಏರಿಸಲು ಬದ್ಧತೆಯಿಂದ ಕಾರ್ಯನಿರ್ವಹಿಸುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿರುವ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಬಲಪಡಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇವಲ ಕಾಗದದಲ್ಲಿನ ಭರವಸೆಯಾಗಿ ಉಳಿಸದೇ, ಮನೆ ಮನೆಗೆ ತಲುಪಿಸುವಲ್ಲಿ ಅವರ ಸಂಘಟನಾ ಶಕ್ತಿ ಮತ್ತು ಆಡಳಿತ ದಕ್ಷತೆ ಸ್ಪಷ್ಟವಾಗಿ ತೋರ್ಪಡಿಸಿದೆ.
ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ನೇರವಾಗಿ ಆರ್ಥಿಕ ನೆರವು ತಲುಪುವಂತೆ ವ್ಯವಸ್ಥೆ ಮಾಡಿದ್ದು, ಸಾವಿರಾರು ಕುಟುಂಬಗಳ ಬದುಕಿನಲ್ಲಿ ಭರವಸೆಯ ಬೆಳಕು ಹರಿಸಿದೆ. ಗ್ರಾಮೀಣ ಭಾಗಗಳಲ್ಲಿಯೂ ಯೋಜನೆಯ ಪ್ರಯೋಜನ ತಲುಪಲು ಅವರು ವಿಶೇಷ ಗಮನ ಹರಿಸಿ, ಅರ್ಹ ಫಲಾನುಭವಿಗಳಿಗೆ ತೊಂದರೆ ಆಗದಂತೆ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿದ್ದಾರೆ. ಇದರಿಂದ ಅನೇಕ ಮನೆಗಳಲ್ಲಿ ಮಹಿಳೆಯರಿಗೆ ಆತ್ಮಗೌರವ ಹಾಗೂ ಆರ್ಥಿಕ ಭದ್ರತೆ ದೊರೆತಿದೆ.
ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿರುವ ದೃಢತೆ, ಮಹಿಳಾ ಸಬಲೀಕರಣದ ಮೇಲಿನ ಅವರ ಬದ್ಧತೆಯ ಪ್ರತೀಕವಾಗಿದೆ. ಜನಪರ ಆಡಳಿತ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ, ಜನರ ವಿಶ್ವಾಸವನ್ನು ಕಾರ್ಯಕ್ಷಮತೆಯಿಂದ ಗೆದ್ದಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಈ ಸಾಧನೆ, ಸೇವಾಭಾವದಿಂದ ಕಾರ್ಯನಿರ್ವಹಿಸುವ ನಾಯಕತ್ವದ ಉತ್ತಮ ಉದಾಹರಣೆಯಾಗಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರುನಾಡಿಗೆ ಜಲಕಂಟಕ, ಭುವಿಯೇ ತಲ್ಲಣ : ಭವಿಷ್ಯ ನುಡಿದ ಪ್ರಖ್ಯಾತ ಸ್ವಾಮೀಜಿ...!ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ...!ಕೊನೆಗೂ ಸಿಹಿಸುದ್ದಿ : ಶೀಘ್ರದಲ್ಲೇ ಮಾರ್ಚ್, ಏಪ್ರಿಲ್ ಗೃಹಲಕ್ಷ್ಮೀ ಹಣ ಜಮಾ:  ಲಕ್ಷ್ಮೀ ಹೆಬ್ಬಾಳಕರ್ ಕೊಟ್ರು ಈ ಗುಡ್ ನ್ಯೂಸ್..!ನೈರುತ್ಯ ರೇಲ್ವೆ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆಬೆಳಗಾವಿ : 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಸರಕಾರಿ ನೌಕರರಿಗೆ ಸಿಹಿಸುದ್ದಿ : ತುಟ್ಟಿಭತ್ಯೆ ಹೆಚ್ಚಳ ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುವುದು ನಾಗರಿಕರ ಆದ್ಯ ಕರ್ತವ್ಯ : ಎ.ಎಸ್.ಪಾಶ್ಚಾಪುರೆಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್‌ ಪತ್ತೆತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ