Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೃಷಿ ಭೂಮಿ ಅಕ್ರಮ ಲೇಔಟ್ ಗೆ ಕಾಂಚನಕ್ಕಾಗಿ ಕರೆಂಟ್ ಕೊಟ್ಟು ಕಿತಾಪತಿ ಮಾಡಿದ ಕಾಕತಿ KEB ಅಧಿಕಾರಿಗಳು..?

ಕೃಷಿ ಭೂಮಿ ಅಕ್ರಮ ಲೇಔಟ್ ಗೆ ಕಾಂಚನಕ್ಕಾಗಿ ಕರೆಂಟ್ ಕೊಟ್ಟು ಕಿತಾಪತಿ ಮಾಡಿದ ಕಾಕತಿ KEB ಅಧಿಕಾರಿಗಳು..?

ಗ್ರಾಪಂ, ಕಂದಾಯ ಇಲಾಖೆ NOC ಇಲ್ಲದಿದ್ದರೂ ಬಾಂಡ್ ಸೈಟ್ ಗೆ ಕನೆಕ್ಷನ್ ಕೊಟ್ಟಿದ್ದು ಹೇಗೆ..?

ಲಂಚಕ್ಕಾಗಿ ರೂಲ್ಸ್ ಮುರಿದ KEB ಕರಪ್ಟ್ ಆಫೀಸರ್ ಯಾರು..?

ಅಕ್ರಮ ಲೇಔಟ್ ದಂಧೆ ಬಂದ ಮಾಡಿಸ್ತಾರಾ ತಹಶಿಲ್ದಾರ ಬಸವರಾಜ..?

ಬೆಳಗಾವಿ: ಕೃಷಿ ಮಾಡುತ್ತೇನೆ ಎಂದು ಭೂಮಿ ಖರೀದಿಸಿ ಅದರಲ್ಲಿ ಅಕ್ರಮವಾಗಿ ಲೇಔಟ್ ಹಾಕಿ ಬಾಂಡ್ ಮೇಲೆ ಸೈಟ್ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿರುವ ಅಕ್ರಮ ಲೇಔಟ್ ದಂಧೆಕೋರ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯವರಿಂದ NOC ಪಡೆಯದೆ ಕಾಕತಿ KEB ಅವರ ಜೇಬು ಬಿಸಿ ಮಾಡಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾನೆ.

ಜನಸಾಮಾನ್ಯರು ವಿದ್ಯುತ್ ಸಂಪರ್ಕ ಬೇಕಾದರೆ 10 ಹಲವಾರು ದಾಖಲೆಗಳನ್ನು ಕೇಳುವ ಕೆಇಬಿನವರು ಈ ಅಕ್ರಮ ಲೇಔಟ್ ದಂಧೆ ಕೋರನ ಬಿಡಿಗಾಸಿಗೆ ಜೊಲ್ಲು ಸೋರಿಸಿ ರಾಥೋರಾತ್ರಿ ವಿದ್ಯುತ್ ಸಂಪರ್ಕ ನೀಡಿದ್ದಲ್ಲದೆ, ಆತ ಯಾವುದೇ ಪರವಾನಿಗೆ ಪಡೆಯದೆ ಕೊರೆಸಿದ ಕೊಳವೆಬಾವಿಗೂ ಸಹ ಸಂಪರ್ಕ ನೀಡಿದ್ದಾರೆ.

ಇಂದು ಜನಜೀವಾಳ ಈ ಅಕ್ರಮ ಲೇಔಟ್ ಬಗ್ಗೆ ವಿಸ್ತೃತ ವರದಿ ಮಾಡಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಅಗಸಗಿ ಗ್ರಾಮ ಪಂಚಾಯಿತಿ ಪಿಡಿಒ ಮುಜಾವರ್, ಅಧ್ಯಕ್ಷ ಉಪಾಧ್ಯಕ್ಷ, ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ ವೇಳೆ ಅಕ್ರಮವಾಗಿ ಈ ವಿದ್ಯುತ್ ಸಂಪರ್ಕ ನೀಡಿರುವ ಬಗ್ಗೆ ಗೊತ್ತಾಗಿದೆ.

ಆ ಅಕ್ರಮ ಲೇಔಟ್ ದಂಧೇಕೊರ ಈ ಅಕ್ರಮ ವಿದ್ಯುತ್ ಸಂಪರ್ಕವನ್ನು ತೋರಿಸಿ ಇನ್ನುಳಿದವರಿಗೆ ಸೈಟ್ ಮಾರಾಟ ಮಾಡಿರುವುದಾಗಿಯೂ ಗೊತ್ತಾಗಿದೆ.

ಕೃಷಿ ಭೂಮಿಯಲ್ಲಿ ಲೇಔಟ್ ಹಾಕಿ ಬಾಂಡ್ ಮೇಲೆ ಸೈಟಗಳನ್ನು ಮಾರಾಟ ಮಾಡುತ್ತಿರುವ ಈತ ಕಾಕತಿ ಕೆಇಬಿನವರಿಗೆ ಭಾರಿ ಮೊತ್ತದಲ್ಲಿ ಲಂಚ ನೀಡಿರುವುದಾಗಿ ಕೂಡ ತಿಳಿದು ಬಂದಿದೆ.

ಕೊನೆಗೂ ಕ್ರಮಕ್ಕೆ ಮುಂದಾದ ಕಂದಾಯ ಇಲಾಖೆ.

ಈ ಅಕ್ರಮ ಲೇಔಟ್ ನೋಡಿದ ನಂತರ ಈ ದಂಧೆಕೋರ ಸಂಪೂರ್ಣ ಕಾನೂನು ಬಹಿರವಾಗಿ ಸೈಟಗಳನ್ನು ಬಾಂಡ್ ಮೇಲೆ ಮಾರಾಟ ಮಾಡುತ್ತಿರುದಲ್ಲದೇ, ಪಿಡಬ್ಲ್ಯೂಡಿ, PRD, ಹೆಸ್ಕಾಂ ಹಾಗೂ ಕಂದಾಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಸೈಟ್ ಹಾಕಿರುವುದು ಸ್ಪಷ್ಟವಾದ ಬೆನ್ನಲ್ಲೇ ಈತನಿಗೆ ಮತ್ತು ವಿದ್ಯುತ್ ಸಂಪರ್ಕ ನೀಡಿರುವ ಕಾಕತಿ ಕೆಇಬಿನವರಿಗೆ ನೋಟಿಸ್ ನೀಡಲು ಮುಂದಾಗಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆ