Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೆಎಲ್ ಎಸ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡ ಬಳಗದ ಉದ್ಘಾಟನೆ : ಕನ್ನಡ ಅತ್ಯಂತ ಪ್ರಾಚೀನ, ಶ್ರೀಮಂತ ಭಾಷೆ-ನಿರ್ಮಲಾ ಬಟ್ಟಲ


ಬೆಳಗಾವಿ : ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ಕರುನಾಡಿನ ಬಹು ಪ್ರಾಚೀನ ಸಂಸ್ಕೃತಿ, ಪದ್ಧತಿ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಪ್ರಪಂಚದ ಅತ್ಯಂತ ಪುರಾತನ ಭಾಷೆಗಳಲ್ಲಿ ಕನ್ನಡವು ಒಂದಾಗಿದೆ ಎಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಹೇಳಿದರು.


ನಗರದ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಕನ್ನಡ ಬಳಗ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಇತಿಹಾಸ
ಶತ-ಶತಮಾನಗಳಿಂದ ನೋಡಬಹುದು. ಹಲ್ಮಿಡಿ ಶಾಸನದಿಂದ ಭಾಷೆ ಶಾಸನ ರೂಪದಲ್ಲಿ ಇರುವುದು ಗಮನಿಸಬಹುದು. ಬಹಳ ಶ್ರೀಮಂತ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡದ ಬಗ್ಗೆ ತಾವೆಲ್ಲರೂ ಅತ್ಯಂತ ಪ್ರೀತಿ ಹಾಗೂ ಅಭಿಮಾನದಿಂದ ಈ ಭಾಷೆಯನ್ನು ಭವಿಷ್ಯದ ಸವಾಲುಗಳಿಗೆ ತಕ್ಕಂತೆ ಬೆಳೆಸುವಲ್ಲಿ ಕೈಜೋಡಿಸಬೇಕು. ಕಾನೂನು ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ಕಾನೂನು ಜಾರಿಗೊಳಿಸುವಾಗ ಹೆಚ್ಚು ಹೆಚ್ಚು ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಕಾಲೇಜಿನ ಪ್ರಾಚಾರ್ಯ ಡಾ. ಎ. ಎಚ್. ಹವಾಲ್ದಾರ ಮಾತನಾಡಿ, ವಿದ್ಯಾರ್ಥಿಗಳು ಈ ನಾಡಿನ ಕನ್ನಡ ಭಾಷೆಯನ್ನು ಗೌರವಿಸಬೇಕು.ಈ ಭಾಷೆಯ ಇತಿಹಾಸ ಬಹಳ ದೊಡ್ಡದು. ಕನ್ನಡ ಬಳಗ ಸದಸ್ಯರು ಕಾಲೇಜಿನಲ್ಲಿ ನಿರಂತರವಾಗಿ ಕನ್ನಡ ಬಳಗದ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಕನ್ನಡ ಬೆಳೆಸಬೇಕು. ಕನ್ನಡ ಸಾಹಿತ್ಯ ಮತ್ತು
ಕನ್ನಡದಲ್ಲಿ ಕಾನೂನಿನ ಬಗ್ಗೆ ಮಾಹಿತಿಯನ್ನು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ಬಳಗ ವಿಭಾಗದ ಪ್ರೊ. ಚೇತನ್‌ಕುಮಾರ್ ಟಿ. ಎಂ.
ಬಹುಮಾನ ಮತ್ತು ಬ್ಯಾಡ್ಜ್‌ಗಳನ್ನು ನೀಡಿದರು. ಕನ್ನಡ ಬಳಗದ ವಿದ್ಯಾರ್ಥಿ ಸಂಯೋಜಕ ಯಲ್ಲಪ್ಪ ಬಾಮನಹಳ್ಳಿ, ಸಂಜನಾ ಇಟಗಿ, ಸ್ನೇಹಾ ಮೇತ್ರಿ, ಸಿದ್ದಲಿಂಗ ಕವಟಕರ, ಅಜಯ ಬೊಮ್ಮನ್ನವರ, ಸುಚಿತ್ರಾ ಶಿಂಗೆ, ವೃಷಭ ಪಾಟೀಲ, ಚರಿತ್ರಮತಿ ಪಾಟೀಲ, ಅಕ್ಷಯ ವಾರದ, ಪ್ರವೀಣ ಕಾಂಬಳೆ, ಶಶಿಧರ ಸಸಾಲಟ್ಟಿ, ಜೈಶ್ರೀ ಕಾಂಬಳೆ, ಪ್ರಜ್ವಲ್ ತಪಶಿ, ಆದಿತ್ಯ ಅಮಟೆ, ಓಂಕಾರ ಖೋಬ್ರಿ, ಸ್ಪೂರ್ತಿ ಪಾಟೀಲ, ಮುರಘೇಂದ್ರಯ್ಯ ಭಾನ್ವಿ, ಶಿವಪ್ರಸಾದ, ಗಾಯತ್ರಿ ಬಸ್ತವಾಡಿ, ಮಹಾಲಕ್ಷ್ಮೀ, ಪ್ರಸನ್ನಗೌಡ, ಮಂಜುನಾಥ,
ಗೌತಮ್ ಹಳಕವಾಡಿ, ವಿಜಯ ಜಂಬೆನಾಳ, ಮಹಾದೇವಪ್ಪ (ಅಪ್ಪು), ಸಿಂಧು ಪಾಟೀಲ, ಮಂಜುನಾಥ ನಾಯಕ, ಓಂಕಾರ ಪಾಟೀಲ, ಶ್ರೇಯಶ ಕಲಾದಗಿ, ವಿದ್ಯಾ, ವಿನಾಯಕ, ಸಚಿನ್ , ಸಂಗಮೇಶ ನಾಯಕ, ರೋಹನ್ ತುಕ್ಕಾನಟ್ಟಿ, ಮಾಳಪ್ಪ ಭಾಗಿ, ಗುರುರಾಜ, ಕಾವೇರಿ ಬಡಿಗೇರ ಉಪಸ್ಥಿತರಿದ್ದರು.

ಕಾಲೇಜಿನ ಕನ್ನಡ ಬಳಗ ವಿಭಾಗದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಕನ್ನಡ ಬಳಗ ಸ್ವಯಂಸೇವಕರು ಉಪಸ್ಥಿತರಿದ್ದರು.

ಫೋಟೋ
ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಕನ್ನಡ ಬಳಗವನ್ನು ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಉದ್ಘಾಟಿಸಿದರು. ಡಾ.ಎ.ಎಚ್.ಹವಾಲ್ದಾರ್, ಚೇತನಕುಮಾರ ಮತ್ತಿತರರು ಉಪಸ್ಥಿತರಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರುನಾಡಿಗೆ ಜಲಕಂಟಕ, ಭುವಿಯೇ ತಲ್ಲಣ : ಭವಿಷ್ಯ ನುಡಿದ ಪ್ರಖ್ಯಾತ ಸ್ವಾಮೀಜಿ...!ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ...!ಕೊನೆಗೂ ಸಿಹಿಸುದ್ದಿ : ಶೀಘ್ರದಲ್ಲೇ ಮಾರ್ಚ್, ಏಪ್ರಿಲ್ ಗೃಹಲಕ್ಷ್ಮೀ ಹಣ ಜಮಾ:  ಲಕ್ಷ್ಮೀ ಹೆಬ್ಬಾಳಕರ್ ಕೊಟ್ರು ಈ ಗುಡ್ ನ್ಯೂಸ್..!ನೈರುತ್ಯ ರೇಲ್ವೆ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆಬೆಳಗಾವಿ : 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಸರಕಾರಿ ನೌಕರರಿಗೆ ಸಿಹಿಸುದ್ದಿ : ತುಟ್ಟಿಭತ್ಯೆ ಹೆಚ್ಚಳ ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುವುದು ನಾಗರಿಕರ ಆದ್ಯ ಕರ್ತವ್ಯ : ಎ.ಎಸ್.ಪಾಶ್ಚಾಪುರೆಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್‌ ಪತ್ತೆತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ