ಬೆಳಗಾವಿ: 12ನೇ ಶತಮಾನದ ವಿಶ್ವಗುರು ಬಸವಣ್ಣನವರು ಸಮಾನತೆ, ಕಾಯಕ ನಿಷ್ಠೆ, ಮತ್ತು ಸಹೋದರತೆಯನ್ನು ಸಾರಿದ ಮಹಾನ್ ಚೇತನ. ಅವರು ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನ ಅವಕಾಶ, ಅಂತರ್ಜಾತಿ ವಿವಾಹ, ಮಹಿಳಾ ಸಬಲೀಕರಣ, ಮತ್ತು ಕಾಯಕವೇ ಕೈಲಾಸ ಎಂಬ ತತ್ವ ಸಾರಿದವರು ಎಂದು ಬಿಜೆಪಿ ಮುಖಂಡ, ಎಚ್.ಡಿ.ಕುಮಾರಸ್ವಾಮಿ ಬಡಾವಣೆಯ ರಹವಾಸಿ ಸಂಘದ ಅಧ್ಯಕ್ಷ ರುದ್ರಣ್ಣ ಚಂದರಗಿ ಹೇಳಿದರು.
ನಗರದ ಎಚ್.ಡಿ.ಕುಮಾರಸ್ವಾಮಿ ಬಡಾವಣೆಯ ರಹವಾಸಿ ಸಂಘದಿಂದ ಸೋಮಮವಾರ ನಡೆದ ಶಿವ ಮತ್ತು ಬಸವಣ್ಣನವರ ಜಯಂತಿ ಪ್ರಯುಕ್ತ , ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕಾಯಕವೇ ಕೈಲಾಸ" ಎಂಬ ಮಂತ್ರದಡಿ ಸಮಾನತೆಯ ಸಮಾಜಕ್ಕಾಗಿ ಬದುಕಿದ ಬಸವಣ್ಣನವರ ತತ್ವಗಳು ನಮಗೆ ಸದಾ ದಾರಿದೀಪ. ಎಲ್ಲರೂ ಒಂದು ಕಲ್ಯಾಣ ರಾಜ್ಯ ಕಟ್ಟಿದ ಮಹಾನ್ ಚೇತನ, ಹೀಗಾಗಿ. ಅವರ ಆದರ್ಶಗಳನ್ನು ಪಾಲಿಸಿದರೊಂದಿಗೆ ಸಾಮಾಜಿಕ ನ್ಯಾಯ ಮತ್ತು ಮೌಲ್ಯಾಧಾರಿತ ಜೀವನ ನಡೆಸಬೇಕು ಎಂದು ಹೇಳಿದರು.
ಧೈರ್ಯ, ಶೌರ್ಯ ಹಾಗೂ ಧೀಮಂತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ಛತ್ರಪತಿ ಶಿವಾಜಿ ಅವರ ಆಡಳಿತ ಕೌಶಲ್ಯಗಳು ಅವರ ದೂರದೃಷ್ಟಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಚಿಕ್ಕ ವಯಸಿನಲ್ಲಿಯೇ ಆಸಾಧಾರಣ ನಾಯಕತ್ವ ಗುಣಗಳನ್ನು ಹೊಂದಿದ್ದ ಶಿವಾಜಿಯ ಆಡಳಿತವು ಪ್ರಗತಿಪರ ನೀತಿ ಹಾಗೂ ದಕ್ಷ ಆಡಳಿತದಿಂದ ಗುರುತಿಸಲಟ್ಟಿದೆ. ಜಾತಿ, ಧರ್ಮ, ಬೇಧಗಳನ್ನು ಮೀರಿ ಸಮಗ್ರ ಆಡಳಿತಕ್ಕೆ ಉತ್ತೇಜನ ನೀಡಿದ್ದರು ಛತ್ರಪತಿ ಶಿವಾಜಿ ಮಹಾರಾಜರು. ಅವರ ಆದರ್ಶ ಮೈಗೂಡಿಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮಲ್ಲಿಕಾರ್ಜುನ ರೊಟ್ಟಿ, ಶಿವಪುತ್ರ ಗಂಗಾಪುರ, ವಿರುಪಾಕ್ಷಿ ನೀರಲಗಿಮಠ ಮಹಾದೇವ ಹೊಂಗಲ, ಲಕ್ಷ್ಮಣ ಅಕ್ಕನವರ, ಮಹಾದೇವ ಭೀಮ ನಾಯಕ, ಶಿವಪುತ್ರ ಪಟಕಳ, ವಿರುಪಾಕ್ಷಿ ನೀರಲಗಿಮಠ, ಶೋಭಾ ಹೊಸಮಠ, ಸುಧಾ ರೊಟ್ಟಿ ಮತ್ತು ಮಹಿಳಾ ಮಂಡಳ ಸದಸ್ಯರು ಸೇರಿದಂತೆ ಇತರರಿದ್ದರು.
