Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಜೆಟ್-2026 : ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ 10000 ಕೋಟಿ ರೂ. ಬೆಳವಣಿಗೆ ನಿಧಿ, ಬಯೋ ಫಾರ್ಮಾ ಶಕ್ತಿ’ ಯೋಜನೆಗೆ 10000 ಕೋಟಿ ರೂ.

 

ದೆಹಲಿ : ಕೇಂದ್ರ ಬಜೆಟ್ 2026 ಫೆಬ್ರವರಿ 1 ಭಾನುವಾರ ನಿರ್ಮಲಾ ಸೀತಾರಾಮನ್ ಆಯವ್ಯಯ ಮಂಡನೆ ಆರಂಭಿಸಿದ್ದಾರೆ. ಕರ್ತವ್ಯ ಭವನದಲ್ಲಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದ್ದು , 3 ಕರ್ತವ್ಯಗಳಿಗೆ ಬಜೆಟ್‌ ಒತ್ತು ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-2027ರ ಬಜೆಟ್‌ನಲ್ಲಿ ಭಾರತದ ಸಣ್ಣ ಉದ್ಯಮಗಳಿಗೆ (MSME) ಹೊಸ ಉತ್ತೇಜನ ನೀಡಿದ್ದಾರೆ. ಹೊಸ ನಿಧಿಗಳು, ಪುನಶ್ಚೇತನಗೊಂಡ ಕ್ಲಸ್ಟರ್‌ಗಳು ಮತ್ತು ಸುಧಾರಿತ ಸಾಲದ ವ್ಯವಸ್ಥೆಯ ಮೂಲಕ ಎಂಎಸ್‌ಎಂಇ ವಲಯವನ್ನು ಬಲಪಡಿಸುವ ಗುರಿಯನ್ನು ಈ ಬಜೆಟ್ ಹೊಂದಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಂಡವಾಳ, ಮಾರುಕಟ್ಟೆ ಮತ್ತು ಬಾಕಿ ಹಣವನ್ನು ಪಡೆಯುವ ವಿಧಾನದಲ್ಲಿ ಈ ಘೋಷಣೆಗಳು ಮಹತ್ವದ ಬದಲಾವಣೆಯನ್ನು ತರಲಿವೆ.
ಹಳೆಯ ಕೈಗಾರಿಕಾ ವಲಯಗಳ ಪುನಶ್ಚೇತನ
ಸಾಲದ ಒತ್ತಡ ಮತ್ತು ಹಳೆಯ ತಂತ್ರಜ್ಞಾನದಿಂದಾಗಿ ಸೊರಗಿರುವ 200 ಪಾರಂಪರಿಕ ಕೈಗಾರಿಕಾ ಕ್ಲಸ್ಟರ್‌ಗಳನ್ನು ಪುನಶ್ಚೇತನಗೊಳಿಸಲು ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಲಿದೆ. ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಮರೆತುಹೋದ ಉತ್ಪಾದನಾ ವಲಯಗಳನ್ನು ಮರುಸ್ಥಾಪಿಸಲು ಸಹಕಾರಿಯಾಗಲಿದೆ.
ಎಸ್‌ಎಂಇ (SME) ಬೆಳವಣಿಗೆ ನಿಧಿ
ಉತ್ತಮ ಸಾಮರ್ಥ್ಯವಿರುವ ಸಂಸ್ಥೆಗಳ ಬೆಳವಣಿಗೆಗಾಗಿ ₹10,000 ಕೋಟಿ ಮೌಲ್ಯದ ‘SME Growth Fund’ ಅನ್ನು ಪರಿಚಯಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ. ಉತ್ಪಾದಕತೆ, ಔಪಚಾರಿಕೀಕರಣ ಮತ್ತು ರಫ್ತು ಸಿದ್ಧತೆಯಂತಹ ಮಾನದಂಡಗಳನ್ನು ಪೂರೈಸುವ ಉದ್ಯಮಗಳಿಗೆ ಈ ನಿಧಿಯ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ.
ಕಿರು ಉದ್ಯಮಗಳಿಗೆ ಬೆಂಬಲ
ಸಣ್ಣ ಉದ್ಯಮಗಳ ಸುಸ್ಥಿರತೆಗಾಗಿ ‘ಸ್ವಾವಲಂಬಿ ಭಾರತ ನಿಧಿ’ಗೆ (Self-Reliant India Fund) ₹2,000 ಕೋಟಿ ಹೆಚ್ಚುವರಿ ಅನುದಾನ ನೀಡಲಾಗುತ್ತದೆ. ಸಾಲ ಖಾತರಿ ಯೋಜನೆಗಳಿದ್ದರೂ ಬಂಡವಾಳದ ಕೊರತೆ ಎದುರಿಸುತ್ತಿರುವ ಕಿರು ಉದ್ಯಮಗಳಿಗೆ ಇದು ನೆರವಾಗಲಿದೆ.
MSME ಗಳನ್ನು ಬೆಂಬಲಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು FY27 ರಲ್ಲಿ ಸ್ವಾವಲಂಬನೆ ಭಾರತ ನಿಧಿಗೆ ರೂ. 4,000 ಕೋಟಿಗಳನ್ನು ನೀಡಲು ಪ್ರಸ್ತಾಪಿಸಿದ್ದಾರೆ.

ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆ
ಸರ್ಕಾರದ ಇ-ಮಾರುಕಟ್ಟೆ (GeM) ಪೋರ್ಟಲ್ ಅನ್ನು ವ್ಯಾಪಾರ ಕರಾರುಗಳ ರಿಯಾಯಿತಿ ವ್ಯವಸ್ಥೆಯೊಂದಿಗೆ (TReDS) ಜೋಡಿಸಲಾಗುತ್ತದೆ. ಇದರಿಂದ ಎಂಎಸ್‌ಎಂಇ ಪೂರೈಕೆದಾರರಿಗೆ ತಮ್ಮ ಪಾವತಿ ಚಕ್ರದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
ಹೊಸ ಲಿಕ್ವಿಡಿಟಿ ಮಾರ್ಗ: ವ್ಯಾಪಾರ ಕರಾರುಗಳ ರಿಯಾಯಿತಿ ವ್ಯವಸ್ಥೆ (TReDS) ಕರಾರುಗಳನ್ನು (Receivables) ‘ಆಸ್ತಿ-ಬೆಂಬಲಿತ ಸೆಕ್ಯೂರಿಟಿಗಳಾಗಿ’ (Asset-backed securities) ಪರಿವರ್ತಿಸಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಸೃಷ್ಟಿಸಿ, ಈ ವಲಯದಲ್ಲಿ ಹಣದ ಹರಿವನ್ನು ಹೆಚ್ಚಿಸಲಿದೆ ಎಂದು ನಿರಕ್ಷಿಸಲಾಗಿದೆ.
ಮುಂದಿನ 5 ವರ್ಷಗಳಲ್ಲಿ ಬಯೋಫಾರ್ಮಾದಲ್ಲಿ 10,000 ಕೋಟಿ ರೂ. ಹೂಡಿಕೆ
ಸರ್ಕಾರವು ಬಯೋಫಾರ್ಮಾ ವಲಯಕ್ಕೆ 10,000 ಕೋಟಿ ರೂ.ಗಳನ್ನು ಹಂಚಿಕೆ ಮಾಡುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
“ಬೆಳವಣಿಗೆಯನ್ನು ವೇಗಗೊಳಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರ ಸಮಗ್ರ ಸುಧಾರಣೆಗಳನ್ನು ಕೈಗೊಂಡಿದೆ. ಇತ್ತೀಚೆಗೆ 350 ಕ್ಕೂ ಹೆಚ್ಚು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಸುಧಾರಣಾ ಕ್ರಮಗಳು ಸರಿಯಾದ ಹಾದಿಯಲ್ಲಿವೆ ಎಂದು ಹೇಳಿದರು.

 

ಕೇಂದ್ರ ಬಜೆಟ್ 2026 : ವಿದೇಶಿ ಹೂಡಿಕೆದಾರರಿಗೆ ಬಾಗಿಲು ತೆರೆದ ಸರ್ಕಾರ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ 40,000 ಕೋಟಿ ರೂ, ಬೆಂಗಳೂರಿಗೆ 2 ಹೈಸ್ಪೀಡ್ ರೈಲು ಕಾರಿಡಾರ್‌

ನವದೆಹಲಿ: ಇಂದು, ಭಾನುವಾರ 2026ರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಮಿಕಂಡಕ್ಟರ್ ಕ್ಷೇತ್ರಕ್ಕಾಗಿ 40,000 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದರು. ಸೆಮಿಕಂಡಕ್ಟರ್ ಮಿಷನ್‌ನ ವೇಗವನ್ನು ಹೆಚ್ಚಿಸಲು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0’ ಅನ್ನು ಅವರು ಪ್ರಕಟಿಸಿದರು. ಅಲ್ಲದೆ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಅವಕಾಶ ನೀಡುವುದನ್ನು ಪ್ರಸ್ತಾಪಿಸಲಾಗಿದೆ.

ನರೇಗಾ ಹೆಸರು ಬದಲಾಯಿಸಿ ಜಿ ರಾಮ ಜೀ ಎಂದು ಬದಲಾಯಿಸುವ ನಿರ್ಧಾರ ನಡುವೆಯ ಕೇಂದ್ರ ಸರ್ಕಾರ ಖಾದಿ ಉದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಿದ್ದು, ಮಹಾತ್ಮ ಗಾಂಧಿ ಹೆಸರು ಯೋಜನೆಯನ್ನು ಘೋಷಿಸಿದೆ.
ಸೆಮಿಕಂಡಕ್ಟರ್ ಮಿಷನ್ 2.0: ಈ ಯೋಜನೆಯು ಸಂಪೂರ್ಣವಾಗಿ ಭಾರತೀಯ ಬೌದ್ಧಿಕ ಆಸ್ತಿ (IP) ಹೊಂದಿರುವ ಉಪಕರಣಗಳು ಮತ್ತು ಸಾಮಗ್ರಿಗಳನ್ನು ತಯಾರಿಸುವತ್ತ ಗಮನ ಹರಿಸಲಿದೆ. ಉದ್ಯಮ-ಚಾಲಿತ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳಿಗೆ ಆದ್ಯತೆ ನೀಡಲಾಗುವುದು.
ಚಿಪ್ ಉತ್ಪಾದನೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದಂತೆ, 2026ರಲ್ಲಿ ಭಾರತದಲ್ಲಿ ವಾಣಿಜ್ಯಿಕ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಆರಂಭವಾಗಲಿದೆ. ಈ ವರ್ಷ ನಾಲ್ಕು ಪ್ಲಾಂಟ್‌ಗಳು ಕಾರ್ಯಾರಂಭ ಮಾಡಲಿವೆ.
ಎಲೆಕ್ಟ್ರಾನಿಕ್ ಘಟಕಗಳ ಯೋಜನೆಗೆ 40,000 ಕೋಟಿ ರೂ. ಘೋಷಿಸಿದ ಬೆನ್ನಲ್ಲೇ ಇಎಂಎಸ್ (EMS) ಷೇರುಗಳ ಮೌಲ್ಯ ಏರಿಕೆಯಾಗಿದೆ.

ಬೆಂಗಳೂರು ಸೇರಿ ಏಳು ಹೈ ಸ್ಪೀಡ್‌ ರೈಲು ಕಾರಿಡಾರ್‌ ಯೋಜನೆ ಘೋಷಣೆ
2026ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳು ಸೇರಿದಂತೆ ದೇಶಾದ್ಯಂತ ಒಟ್ಟು ಏಳು ಯೋಜನೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಬೆಂಗಳೂರು -ಹೈದರಾಬಾದ್‌ ಹಾಗೂ ಬೆಂಗಳೂರು-ಚೆನ್ನೈ ನಡುವೆ ಬಹುಮಹತ್ವದ ಹೈಸ್ಪೀಡ್‌ ರೈಲು ಕಾರಿಡಾರ್‌ಅನ್ನು ಘೋಷಣೆ ಮಾಡಿದ್ದಾರೆ. ಮುಂಬೈನಿಂದ ಪುಣೆ, ಪುಣೆಯಿಂದ ಹೈದರಾಬಾದ್‌, ಹೈದರಾಬಾದ್‌ನಿಂದ ಚೆನ್ನೈ, ದೆಹಲಿಯಿಂದ ವಾರಣಾಸಿ ಹಾಗೂ ವಾರಣಾಸಿಯಿಂದ ಸಿಲಿಗುರಿಗೆ ಹೈಸ್ಪೀಡ್‌ ರೈಲು ಕಾರಿಡಾರ್‌ ಘೋಷಣೆ ಮಾಡಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲ ಮಾರ್ಗ ನಿರ್ಮಾಣ
ಪ್ರಮುಖ ಬಂದರು ಸಂಪರ್ಕಿಸಲು ಇದು ಸಹಕಾರಿ. ಇದರಿಂದ ರಫ್ತು ಉತ್ತೇಜನಕ್ಕೆ ಒತ್ತು.
ಪವರ್, ಸ್ಟೀಲ್, ರಿಫೈನರೀಸ್, ಕೆಮಿಕಲ್ ಸೇರಿ ಐದು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು.
2-3ನೇ ಹಂತದ ನಗರಗಳಿಗೆ ಮೂಲ ಸೌಕರ್ಯ ಹೆಚ್ಚಿಸಿ, ಭಾರತದ ಪ್ರತಿಯೊಂದೂ ನಗರವೂ ದೇಶದ ಆರ್ಥಿಕತೆಗೆ ಪುಷ್ಠಿ ನೀಡುವಂತೆ ಅಭಿವೃದ್ಧಿ ಪಡಿಸಲು ಆದ್ಯತೆ.
ಶಿಕ್ಷಣ ವಲಯದಲ್ಲಿ ಎಐಗೆ ಒತ್ತು

ಶಿಕ್ಷಣ ವಲಯದಲ್ಲಿ ಎಐ (Artificial Intelligence) ಅಥವಾ ಕೃತಕ ಬುದ್ಧಿಮತ್ತೆಗೆ ವಿಶೇಷ ಒತ್ತು ನೀಡಲಾಗಿದೆ. ಎಐ ಸಂಶೋಧನೆಗಾಗಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸಲು 500 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಐಐಟಿಗಳನ್ನ ವಿಸ್ತರಣೆ ಮಾಡಿ, ಭವಿಲೈ, ಧಾರವಾಡ, ಗೋವಾ, ಜಮ್ಮು ಮತ್ತು ತಿರುಪತಿಯಲ್ಲಿ ಹೊಸ ಸೌಲಭ್ಯಗಳನ್ನ ಕಲ್ಪಿಸಲಾಗುವುದು.
ರಾಜ್ಯಗಳಿಗೆ ಅನುದಾನ ಮತ್ತು ಹಣಕಾಸು ಆಯೋಗ
16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ. 41 ರಷ್ಟು ಮುಂದುವರಿಸಲು ಸರ್ಕಾರ ಒಪ್ಪಿಕೊಂಡಿದೆ. 2026-27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ನೆರವು ಒದಗಿಸಲಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
ಹೊಸ ಸಂಸ್ಥೆಗಳು: 3 ಹೊಸ ಏಮ್ಸ್ (AIIMS), 3 ಆಯುರ್ವೇದ ಸಂಸ್ಥೆಗಳು ಮತ್ತು ಒಂದು ವಿನ್ಯಾಸ ಶಾಲೆಯನ್ನು (Design School) ಘೋಷಿಸಲಾಗಿದೆ.

ಭಾರತದ ಪುರಾತನ ವೈದ್ಯ ಪದ್ಧತಿ ಆಯುರ್ವೇದ, ಯೋಗ ಅಭಿವೃದ್ಧಿಗೆ ಯೋಜನೆ ಘೋಷಿಸಿದ ನಿರ್ಮಲಾ, ಮೆಡಿಕಲ್ ಟೂರಿಸಮ್ ಅಭಿವೃದ್ಧಇಗೆ ಐದು ಮೆಡಿಕಲ್ ರೀಜಿನಲ್ ಹಬ್ಸ್ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ವೈದ್ಯರು, ಪ್ಯಾರಾ ಮೆಡಿಕಲು ಪದವೀಧರರು ಹಾಗೂ ಹಲವರಿಗೆ ಉದ್ಯೋಗ ಸಿಗಲಿದೆ. ದೇಶದ ಮೂರು ಕಡೆ ಆಯುರ್ವೇದ ಸಂಸ್ಥೆಗಳನ್ನು ನಿರ್ಮಿಸಲು ನಿರ್ಧಾರ. ಖಾಸಗಿ ವಲಯದ ಜೊತೆ ಕೈ ಜೋಡಿಸಿ, ಮೆಡಿಕಲ್ ಹಬ್ ಅಭಿವೃದ್ಧಿಗೆ ಒತ್ತು.
ಉದ್ಯೋಗ ಸೃಷ್ಟಿ: ಮುಂದಿನ ಐದು ವರ್ಷಗಳಲ್ಲಿ ಆಪ್ಟೋಮೆಟ್ರಿ, ರೇಡಿಯಾಲಜಿ ಸೇರಿದಂತೆ 10 ವಿಭಾಗಗಳಲ್ಲಿ 1 ಲಕ್ಷ ಸಂಯೋಜಿತ ಆರೋಗ್ಯ ವೃತ್ತಿಪರರನ್ನು (Allied Health Professionals) ಸೃಷ್ಟಿಸುವ ಗುರಿ ಹೊಂದಲಾಗಿದೆ.
ಮಹಿಳಾ ಸಬಲೀಕರಣ: ದೇಶದ ಪ್ರತಿ ಜಿಲ್ಲೆಯಲ್ಲೂ ಒಂದು ಬಾಲಕಿಯರ ವಸತಿ ನಿಲಯ (Girls Hostel) ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ವಿದೇಶಿ ಹೂಡಿಕೆ ಮತ್ತು ಷೇರು ಮಾರುಕಟ್ಟೆ
ವಿದೇಶಿ ಹೂಡಿಕೆದಾರರಿಗೆ ಅವಕಾಶ: ವಿದೇಶಿ ವ್ಯಕ್ತಿಗಳು ಇನ್ನು ಮುಂದೆ ನೇರವಾಗಿ ಭಾರತೀಯ ಷೇರುಗಳನ್ನು ಖರೀದಿಸಬಹುದು. ವೈಯಕ್ತಿಕ ಹೂಡಿಕೆ ಮಿತಿಯನ್ನು ಶೇ. 5 ರಿಂದ ಶೇ. 10 ಕ್ಕೆ ಏರಿಸಲಾಗಿದೆ. ಅಂತಹ ಎಲ್ಲಾ ಹೂಡಿಕೆದಾರರಿಗೆ ಸಂಯೋಜಿತ ಮಿತಿಯನ್ನು 10% ರಿಂದ 24% ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ
ಪ್ರವಾಸೋದ್ಯಮಕ್ಕೆ ಉತ್ತೇಜನ: ರಾಷ್ಟ್ರೀಯ ಆತಿಥ್ಯ ಸಂಸ್ಥೆ (National Institute of Hospitality) ಸ್ಥಾಪನೆ, ಟ್ರೆಕ್ಕಿಂಗ್ ಅನುಭವ ಸುಧಾರಣೆ, ಪಕ್ಷಿ ವೀಕ್ಷಣೆ ಹಾದಿ ಮತ್ತು 15 ಪುರಾತತ್ವ ತಾಣಗಳ ಅಭಿವೃದ್ಧಿ.
ಧಾರ್ಮಿಕ ಪ್ರವಾಸೋದ್ಯಮ: ಎಲ್ಲಾ ಆಧ್ಯಾತ್ಮಿಕ ಮತ್ತು ಪರಂಪರೆಯ ಪ್ರಾಮುಖ್ಯತೆಯ ಸ್ಥಳಗಳನ್ನು ದಾಖಲಿಸಲು ಪ್ರಸ್ತಾಪಿಸಲಾಗಿದೆ.

ಇತರ ಪ್ರಮುಖ ಘೋಷಣೆಗಳು
ಪ್ರಾಣಿ ಸಂಗೋಪನೆ: ಖಾಸಗಿ ಪಶುವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಸಾಲದ ನೆರವು ಹಾಗೂ 20,000 ವೃತ್ತಿಪರರ ಸೇರ್ಪಡೆ.
ಆರೆಂಜ್ ಎಕಾನಮಿ: ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರಗಳಿಗೆ ಬೆಂಬಲ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿಬಹುಕೋಟಿ ರೂ.ವಂಚನೆ ಪ್ರಕರಣ: ಆರೋಪಿಯ ಬಂಧನಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರಬೆಳಗಾವಿಗೆ ಮತ್ತೆ ಅನ್ಯಾಯ : ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸುಮೇಯರ್, ಉಪ ಮೇಯರ್ ಪಾಲಿಕೆಯಲ್ಲಿ ರಾಜ್ಯದ ಪರ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ: ಅಶೋಕ ಚಂದರಗಿನಕಲಿ ಹೆಸರಿನಲ್ಲಿ 25 ಮದುವೆ ; ತಮ್ಮ ಅಳಿಯನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಶಾಸಕ : ಇಬ್ಬರ ಬಂಧನನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನʼಪ್ರತಿಭಟನೆ ಪ್ರತಿಧ್ವನಿಸಲಿಲ್ಲ….ʼ : ಕಾಂಗ್ರೆಸ್‌ ಸಂಸದ ಶಶಿ ತರೂರ ಹೇಳಿಕೆಗೆ ಕಾಂಗ್ರೆಸ್‌ ನಾಯಕ ವೇಣುಗೋಪಾಲ ಎಚ್ಚರಿಕೆಜೈಲಿನಲ್ಲಿದ್ದ ಪ್ರಿಯಕರನ ಭೇಟಿಗೆ ಬಂದ ಅಪ್ರಾಪ್ತ ಬಾಲಕಿಯ ಜೇಬಿನಲ್ಲಿ ಸಿಕ್ಕಿತು 10 ಜೀವಂತ ಗುಂಡುಗಳು….!ಭಾರತದಲ್ಲಿ ʼಏಜ್ ವೆರಿಫಿಕೇಷನ್ʼ ಫೀಚರ್‌ ಪರೀಕ್ಷೆಗೆ ಮುಂದಾದ ವಾಟ್ಸ್ಆ್ಯಪ್‌ವಿದೇಶಿ ಉದ್ಯೋಗದ ಆಮಿಷ ; ಪೋರ್ಚುಗಲ್‌ಗೆ ಹೋದ ಭಾರತದ ಯುವತಿ ಬಿಯರ್ ಶಾಪ್‌ ಮಾಲೀಕನಿಗೆ ಮಾರಾಟ….?!