ಬೆಳಗಾವಿ : ಈಜಲು ಹೋದ ಅಣ್ಣ-ತಮ್ಮ ಇಬ್ಬರೂ ನೀರುಪಾಲಾಗಿರುವ ಘಟನೆ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ನಡೆದಿದೆ.
ಧರ್ಮಟ್ಟಿ ಗ್ರಾಮದ ಸಾಗರ ಬಾಬು ಮಾದರ(15) ಹಾಗೂ ಪ್ರವೀಣ ಬಾಬು ಮಾದರ ಎಂಬ ಅಣ್ಣ- ತಮ್ಮ ಇಬ್ಬರು ಹಳ್ಳದ ಕಡೆಗೆ ಹೋಗಿದ್ದಾರೆ. ತಮ್ಮ ಈಜಲು ಹೋಗಿದ್ದಾನೆ. ಅವನನ್ನು ಕಾಪಾಡಲು ಅಣ್ಣ ಹೋಗಿದ್ದಾನೆ. ಇಬ್ಬರಿಗೂ ಈಜಲು ಬಾರದ ಹಿನ್ನೆಲೆಯಲ್ಲಿ ಇಬ್ಬರು ಸಹ ಸಾವನಪ್ಪಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
