ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6) ವತಿಯಿಂದ ವಿಧಾನಸೌಧದಿಂದ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ಸಚಿವಾಲಯದಲ್ಲಿ ಮಾಧ್ಯಮ ಕಾರ್ಯದರ್ಶಿಗಳಾಗಿ ಈ ಕೆಳಕಂಡ ಮೂವರನ್ನು ನೇಮಕ ಮಾಡಲಾಗಿದೆ.
ಪಿ. ತ್ಯಾಗರಾಜ್ ಅವರನ್ನು ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ-1 ಆಗಿ ನೇಮಕ ಮಾಡಲಾಗಿದೆ. ಆರ್. ಜಯಪ್ರಕಾಶ್ 2ನೇ ಕಾರ್ಯದರ್ಶಿ, ರಾಘವೇಂದ್ರ ಭಟ್ ಮೂರನೇ ಕಾರ್ಯದರ್ಶಿ ಆಗಿದ್ದಾರೆ.
ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.
ನಮೂದಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅದೇಶಿಸಿದೆ.