Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಗ್ಗತ್ತಲಿನಲ್ಲಿ ಭಾರತ-ಪಾಕ್‌ ಗಡಿಯಲ್ಲಿ ʼಹೊಳೆಯುವ ಬೆಳಕಿನ ರೇಖೆʼ : ವಿಮಾನದಿಂದ ಪೈಲಟ್ ಸೆರೆಹಿಡಿದ ಅಪರೂಪದ ದೃಶ್ಯ !

Advertisement

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯು ಆಕಾಶದಿಂದ ನೋಡಿದಾಗಲೂ ಎಷ್ಟು ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ ಎಂಬುದನ್ನು ತೋರಿಸುವ ಅದ್ಭುತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಂಡಿಗೊ (IndiGo) ವಿಮಾನದ ಪೈಲಟ್ ಕ್ಯಾಪ್ಟನ್ ಪ್ರದೀಪ ಕೃಷ್ಣನ್ ಅವರು ಕಾಕ್‌ಪಿಟ್‌ನಿಂದ ರಾತ್ರಿಯ ಸಮಯದಲ್ಲಿ ಚಿತ್ರೀಕರಿಸಿದ ಈ ಅಪರೂಪದ ದೃಶ್ಯ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.
ತಡರಾತ್ರಿಯ ವಿಮಾನ ಪ್ರಯಾಣದ ವೇಳೆ ಸೆರೆಹಿಡಿಯಲಾದ ಈ ವಿಡಿಯೋದಲ್ಲಿ, ಕಗ್ಗತ್ತಲ ನಡುವೆ ಪ್ರಕಾಶಮಾನವಾಗಿ ಹೊಳೆಯುವ ಹಳದಿ ಬಣ್ಣದ ದೀರ್ಘ ಬೆಳಕಿನ ರೇಖೆಯೊಂದು ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಸ್ಪಷ್ಟವಾಗಿ ವಿಭಜಿಸುತ್ತಿರುವುದು ಕಂಡುಬಂದಿದೆ. ಗಡಿಗೆ ಅಳವಡಿಸಲಾಗಿರುವ ನಿರಂತರ ಫ್ಲಡ್‌ಲೈಟ್‌ಗಳು (Floodlights) ಕತ್ತಲೆಯಲ್ಲಿ ಬೆಳಕಿನ ರೇಖೆಯಂತೆ ಗೋಚರಿಸುತ್ತಿದ್ದು, ಇಡೀ ಭೂಪ್ರದೇಶದಲ್ಲಿ ನಾಟಕೀಯ ದೃಶ್ಯವೊಂದನ್ನು ಸೃಷ್ಟಿಸಿವೆ.

ವಿಡಿಯೋದಲ್ಲಿ ಕ್ಯಾಪ್ಟನ್ ಪ್ರದೀಪ ಕೃಷ್ಣನ್ ಅವರು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಗಡಿಯ ಇತಿಹಾಸ ಮತ್ತು ಸೂಕ್ಷ್ಮತೆಯನ್ನು ವಿವರಿಸುವುದು ಕೇಳಿಬರುತ್ತದೆ.
“ಗೌರವಾನ್ವಿತ ಪ್ರಯಾಣಿಕರೇ, ನೀವು ವಿಮಾನದ ಹೊರಗೆ ಕಣ್ಣುಹಾಯಿಸಿದರೆ, ವಿಶ್ವದಲ್ಲೇ ಅತ್ಯಂತ ಸೂಕ್ಷ್ಮ ಹಾಗೂ ಕಟ್ಟುನಿಟ್ಟಿನ ಭದ್ರತೆ ಹೊಂದಿರುವ ಭಾರತ ಮತ್ತು ಪಾಕಿಸ್ತಾನದ ಗಡಿಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಹೇಳಿದ್ದಾರೆ.
ವಿಮಾನವು ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಸೆರೆಹಿಡಿಯಲಾದ ಈ ಪಕ್ಷಿನೋಟವು (Bird’s-eye view), ಭದ್ರತಾ ಚೌಕಿಗಳು ಮತ್ತು ಕಾವಲು ಗೋಪುರಗಳ ದೀಪಗಳಿಂದಾಗಿ ‘ರಾಡ್‌ಕ್ಲಿಫ್ ಲೈನ್’ (Radcliffe Line) ಎಷ್ಟು ತೀವ್ರವಾಗಿ ಹೊಳೆಯುತ್ತದೆ ಎಂಬುದನ್ನು ಸಾಬೀತುಪಡಿಸಿದೆ.

“ಬಾಹ್ಯಾಕಾಶದಿಂದಲೂ ಕಾಣುವ ಬೆಳಕು”
ಈ ವಿಡಿಯೋವನ್ನು ಹಂಚಿಕೊಂಡಿರುವ ಪೈಲಟ್, “ಭಾರತ–ಪಾಕಿಸ್ತಾನ ಗಡಿಯನ್ನು ರಾತ್ರಿಯ ಸಮಯದಲ್ಲಿ ಬಾಹ್ಯಾಕಾಶದಿಂದಲೂ ಗುರುತಿಸಬಹುದು ಎಂದು ಹೇಳಲಾಗುತ್ತದೆ. ಕತ್ತಲೆಯನ್ನು ಸೀಳಿಕೊಂಡು ಹೋಗುವ ಈ ಪ್ರಕಾಶಮಾನವಾದ ಬೆಳಕಿನ ರೇಖೆಯು ಕಕ್ಷೆಯಿಂದಲೂ ಸ್ಪಷ್ಟವಾಗಿ ಗೋಚರಿಸುತ್ತದೆ,” ಎಂದು ಅಡಿಟಿಪ್ಪಣಿ ಬರೆದುಕೊಂಡಿದ್ದಾರೆ.
ಈ ಅಪರೂಪದ ಮತ್ತು ರೋಮಾಂಚಕ ದೃಶ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರು ಲೈಕ್ಸ್ ಹಾಗೂ ಕಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಜನರು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. “ಎರಡೂ ಕಡೆ ಇರುವವರು ಸುಂದರವಾದ ಮನುಷ್ಯರು, ಆದರೆ ಗಡಿ ರಾಜಕೀಯದ ಕರಾಳತೆಯಿಂದಾಗಿ ಅವರು ವಿಭಜಿಸಲ್ಪಟ್ಟಿದ್ದಾರೆ” ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರಿದ್ದಾರೆ...ಏನಿದರ ಅರ್ಥ ?ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತುಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?ಜಿಂಕೆಯನ್ನೇ ನುಂಗಿದ ಹೆಬ್ಬಾವು !ಪುಸ್ತಕ ಅವಲೋಕನ ಕಾರ್ಯಕ್ರಮಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..! ಶತಮಾನದ ಇತಿಹಾಸ ಹೊಂದಿದೆ ಈ ಪ್ರತಿಷ್ಠಿತ ಶಾಲೆಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!