Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಣದ ತೊಂದರೆಯುದ್ದರೂ ಪರರ ಹಣ ಬೇಡವೆಂದು ಚಿಕ್ಕೋಡಿಯಲ್ಲಿ ಪ್ರಾಮಾಣಿಕತೆ ಮೆರೆದ ಕುಂದಾಪುರದ ವ್ಯಕ್ತಿ..!

ಚಿಕ್ಕೋಡಿ:

ಇವರು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ, ಸಣ್ಣ ಹಳ್ಳಿಯ ನಿವಾಸಿ, ಚಿಕ್ಕೋಡಿ ಪಟ್ಟಣದ ರಾಘವೇಂದ್ರ ಹೊಟೇಲ್ ಪಕ್ಕದಲ್ಲಿ, ಪಾನ್-ಬೀಡಾ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಇವರ ಹೆಸರು ರಾಜೀವ ಶೆಟ್ಟಿ, ರವಿವಾರ ದಿ : 14-06-2026 ರಂದು ಸಂಜೆಯ ಸಮಯಕ್ಕೆ ಒಬ್ಬ ಅಪರಿಚಿತ ವಿದ್ಯಾವಂತ ಯುವಕ, ಇವರ ಅಂಗಡಿಗೆ ಬಂದು ವ್ಯಾಪಾರ ಮಾಡಿ ಹಣ ಕೊಟ್ಟು ತೆರಳಿದರು, ಅವರ ಪಾಕೆಟ್ (ಮನಿ ಪರ್ಸ) ಜಾರಿ ಇವರ ಅಂಗಡಿಯ ಮುಂದೆ ಬಿದ್ದಿತು, ಇದನ್ನು ಯಾರೂ ಕೂಡ ಕಂಡಿರಲಿಲ್ಲ, ಕೆಲ ಸಮಯದ ನಂತರ ರಾಜೀವ ಇವರ ಗಮನಕ್ಕೆ ಬಂದಿತು, ಕೂಡಲೇ ಅದನ್ನು ಎತ್ತಿಕೊಂಡ ರಾಜೀವ ಇದು ಯಾರದು ? ಎಂಬ ಬಗ್ಗೆ ಯೋಚಿಸಿದರು, ಗೊತ್ತಾಗದೇ ಇರುವಾಗ ಅವರು ಪಾಕೆಟ್ ತೆರೆದು ನೋಡಿದರು, ಅದರಲ್ಲಿ ಸುಮಾರು 10,000/- ಗಳ ವರೆಗೆ ಹಣ ಹಾಗೂ ಮಹತ್ವದ ಕಾರ್ಡುಗಳು ಕಂಡ ಅವರು ಗಾಬರಿಯಾದರು, ಅದರಲ್ಲಿ ವ್ಹಿ ಆರ್ ಎಲ್ ಬಸ್ ಟಿಕೇಟ್ ಕಂಡು ಬಂದಿತು, ಯಾರಾದರೂ ಬರಬಹುದು ಎಂದು ಕಾದಿದಾಗ ಅಪರಿಚಿತ ಯುವಕ ಹುಡುಕುತ್ತಾ ಇವರ ಬಳಿ ಬಂದು ಪಾಕೆಟ್ ಕಂಡಿದ್ದೀರಾ ಅಂತಾ ಪ್ರಶ್ನಿಸಿದರು, ತಕ್ಷಣ ಪಾಕೀಟನ್ನು ಅವರ ಕೈಗೆ ನೀಡಿ ಮಾನವೀಯತೆ ಮೆರೆದರು, ಕೂಡಲೇ ಆ ಯುವಕ ಇವರ ಪ್ರಾಮಾಣಿಕ  ನಡತೆಯನ್ನು ಕಂಡು ಒಂದು ಸಾವಿರ ರೂ ಹಣ ನೀಡಲು ಮುಂದಾದರು, ಸದಾ ಅಡಚಣೆಯಲ್ಲಿರುವ ರಾಜೀವ ಹಣ ಸ್ವೀಕರಿಸದೇ ತಿರಸ್ಕರಿಸಿ ಪರರ ಹಣ ನಮಗೆ ಬೇಕಿಲ್ಲ ಸರ್, ಧನ್ಯವಾದಗಳು ಅಂತಾ ಹೇಳಿ ನಗುಮುಖದಿಂದ ಯುವಕನನ್ನು ಕಳಿಸಿದರು, ಇಲ್ಲಿ ನಾವು ಕಾಣುವುದು ಇಷ್ಟೇ ಎಷ್ಟೇ ಬಡತನ ಇದ್ದರೂ ತಮ್ಮ ಪ್ರಾಮಾಣಿಕ ಬದುಕು ಸಾಗಿಸುವ ಇಂತಹ ಗುಣವಂತರು ನಮ್ಮ ನಿಮ್ಮ ಮುಂದೆ ಇದ್ದಾರೆ ಎಂಬುದನ್ನು ಮೆಚ್ಚಲೇ ಬೇಕು.


ಬರಹ : ಚಂದ್ರಕಾಂತ ಹುಕ್ಕೇರಿ, ಸಮಾಜ ಸೇವಕರು, ಚಿಕ್ಕೋಡಿ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಗತ್ತಿನ ಆವಿಷ್ಕಾರದಲ್ಲಿ ನ್ಯಾನೋ ತಂತ್ರಜ್ಞಾನದ ಪಾತ್ರ ಅಪಾರ: ಕುಲಪತಿ ಸಿ. ಎಂ. ತ್ಯಾಗರಾಜ ಆಡಳಿತದಲ್ಲಿ ಇನ್ಮುಂದೆ 'ಬಂಗಾಳಿ' ಕಡ್ಡಾಯ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಘೋಷಣೆಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿಬಿಸಿಸಿಐ ಚುನಾವಣೆ : ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆಒಡೆಸಾ ಬಂದರಿನಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿನ್ಯಾನೋ ಜಾಥಾ-2026' ಕಾರ್ಯಕ್ರಮಜಿಮ್ ಖಾನಾ ಕ್ಲಬ್‌ನಲ್ಲಿ ನಡೆದ ಫೈರಿಂಗ್ ಪ್ರಕರಣದ ಆರೋಪಿ ಬಂಧನ